'ಎದ್ದೇಳು ಮಂಜುನಾಥ' ಸನತ್ ಕಾಲು ತೆಗೆದ ವೈದ್ಯರು

ಕಡೆಗೆ ವಿಧಿಯಿಲ್ಲದೆ ಸನತ್ ಅವರ ಎಡಗಾಲಿನ ಸ್ವಲ್ಪ ಭಾಗವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿದೆ. ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಬಿದ್ದು ಸತನ್ ಕುಮಾರ್ ಗಾಯಗೊಂಡಿದ್ದರು. ದಿವಂಗತ ಪತ್ರಕರ್ತ ಬಿ ವಿ ವೈಕುಂಠ ರಾಜು ಅವರ ಪುತ್ರ ಸನತ್ ಕುಮಾರ್. ಇನ್ನೂ ಪ್ರಿಸ್ಟೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರನ್ನು ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಚಿತ್ರ ನಿರ್ಮಾಣದ ಜೊತೆಗೆ ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವವೂ ಅವರಿಗಿದೆ. ಸದ್ಯಕ್ಕೆ ಅವರು ಮಲಯಾಳಂನ ಚಿತ್ರವೊಂದನ್ನು ರೀಮೇಕ್ ಮಾಡುತ್ತಿದ್ದರು. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಒನ್ಇಂಡಿಯಾ ಕನ್ನಡ ಹಾರೈಸುತ್ತದೆ.
More from Filmibeat
English summary
Eddelu Manjunatha Kannada film producer Sanath Kumar few days back fell down in Bangalore press club and injured. The doctors at Pristine Hospital were forced to cut off a portion of his left leg.


Click it and Unblock the Notifications











