Just In
Don't Miss!
- Sports
ಭಾರತ vs ಆಸ್ಟ್ರೇಲಿಯಾ, 4ನೇ ಟೆಸ್ಟ್ ಪಂದ್ಯ, 2ನೇ ದಿನ, Live ಸ್ಕೋರ್
- News
ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಯಡಿಯೂರಪ್ಪಗೆ ಶುರುವಾಯ್ತು ಸಂಕಷ್ಟ!
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Automobiles
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Lifestyle
ಕುಂಭ ಮೇಳ ಪ್ರಾರಂಭ: ಕುಂಭ ಮೇಳ ವಿಶೇಷತೆ ಹಾಗೂ ಎಷ್ಟು ದಿನ ಇರುತ್ತದೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಬೆಳಗಾಂ'ಗೆ ಬಂದಿಳಿದ ಬೆಳದಿಂಗಳ ಬಾಲೆ ನಿಖಿತಾ
ಓಂ ಪ್ರಕಾಶ್ ರಾವ್ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು 'ಬೆಳಗಾಂ'. ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುವುದರ ಜೊತೆಗೆ ನಿರ್ಮಾಣದ ಹೊಣೆಯನ್ನೂ ಹೊತ್ತಿರುವುದು ವಿಶೇಷ. ಡೆನಿಸಾ ಫಿಲಂಸ್ ಲಾಂಛನದಲ್ಲಿ ಚಿತ್ರ ಡಿಸೆಂಬರ್ 11ರಂದು ಸೆಟ್ಟೇರುತ್ತಿದೆ. ಅಂದಹಾಗೆ ಡೆನಿಸಾ, ಓಂ ಪತ್ನಿಯ ಹೆಸರಂತೆ.
ಬೆಳಗಾವಿಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಖಾರಹಬ್ಬ ಚಿತ್ರದ ಕಥಾವಸ್ತು. ಈ ಹಬ್ಬದ ಮಹತ್ವ ಎಂದರೆ, ಊರಿನವರು ಎಲ್ಲೇ ಇದ್ದರೂ ಖಾರಹಬ್ಬದ ದಿನ ತಾಯಿಯ ಕೈತುತ್ತು ತಿನ್ನಲೇ ಬೇಕು ಎಂದು ಬರುತ್ತಾರೆ. ಈ ಸೆಂಟಿಮೆಂಟಿನ ಆಧಾರವಾಗಿ ಓಂ ಕತೆಯನ್ನು ಹೆಣೆದಿದ್ದಾರೆ.
ಚಿತ್ರದ ನಾಯಕ ನಟ ಕಿಶೋರ್. ನಿಖಿತಾ ಹಾಗೂ ಶ್ವೇತಾ ನಾಯಕಿಯರು. ಚಿತ್ರದ ತಾರಾಗಣದಲ್ಲಿ ಶೋಭಾರಾಜ್, ಆಶಿಷ್ ವಿದ್ಯಾರ್ಥಿ, ರಂಗಾಯಣ ರಘು, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ಸುಚೇಂದ್ರ ಪ್ರಸಾದ್, ಅವಿನಾಶ್, ಹೇಮಾ ಚೌದರಿ, ಲೋಕನಾಥ್, ಶ್ರೀನಿವಾಸಮೂರ್ತಿ ಮುಂತಾದರು ಇದ್ದಾರೆ.
ಆಕ್ಷನ್, ಸೆಂಟಿಮೆಂಟ್ ಮತ್ತು ಹಾಸ್ಯ ಚಿತ್ರದ ಹೈಲೈಟು. ಚಿತ್ರದ ಶೀರ್ಷಿಕೆಯೇ ಹೇಳುವಂತೆ ಉತ್ತರ ಕರ್ನಾಟಕದ ಸೊಗಡಿನ ಕತೆ ಇದು ಎಂದಾಯಿತು. ಚಿತ್ರದ ನಾಯಕ ಇಡೀ ಬೆಂಗಳೂರನ್ನೇ ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಬರುತ್ತಾನೆ. ಅವರ ಆಸೆ ಈಡೇರುತ್ತದೆಯೇ ಇಲ್ಲವೆ ಎನ್ನುವುದು ಚಿತ್ರದ ಒನ್ ಲೈನ್ ಕತೆ.