ನಟ ನಾಗಾರ್ಜುನ ಬಾದಾಮಿಯಲ್ಲಿ ಬಾಬಾ ಅವತಾರ
ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿರುವ ನಟ ನಾಗಾರ್ಜುನ. ಈಗವರು ಭಕ್ತಿ ಪ್ರಧಾನ ಚಿತ್ರ 'ಶಿರಡಿ ಸಾಯಿಬಾಬಾ' ಪಾತ್ರವನ್ನು ಪೋಷಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಕರ್ನಾಟಕದ ಬಾದಾಮಿಯಲ್ಲಿ ಭರದಿಂದ ಸಾಗಿದೆ.
ಬಾಬಾ ಅವರ ಜೀವನ ಘಟ್ಟಗಳು, ಅವರ ಮಹಿಮೆಗಳು, ಭಕ್ತರೊಂದಿಗಿನ ಅನುಬಂಧ ತೆರೆಯ ಮೇಲೆ ಮೂಡಿಬರಲಿದೆ. ಒಟ್ಟು 25 ದಿನಗಳ ಕಾಲ 'ಶಿರಡಿ ಸಾಯಿಬಾಬಾ' ಚಿತ್ರೀಕರಣ ಕರ್ನಾಟಕದ ಹಲವು ಭಾಗಗಳಲ್ಲಿ ನಡೆಯಲಿದೆ.
ಈ ಹಿಂದೆ ನಾಗಾರ್ಜುನ ಹಲವಾರು ಪೌರಾಣಿಕ, ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದ್ದರು. ಅನ್ನಮಯ್ಯ, ಶ್ರೀರಾಮದಾಸುವಿನಂತ ಚಿತ್ರಗಳು ಅವರಿಗೆ ಉತ್ತಮ ಹೆಸರು ತಂದುಕೊಟ್ಟಿವೆ. ಈಗ 'ಶಿರಡಿ ಸಾಯಿಬಾಬಾ' ಅವತಾರದಲ್ಲಿ ಕಾಣಿಸಲಿದ್ದಾರೆ. ಕೆ. ರಾಘವೇಂದ್ರರಾವ್ ಅವರ ನಿರ್ದೇಶನ ಚಿತ್ರಕ್ಕಿದೆ. (ಏಜೆನ್ಸೀಸ್)
English summary
Telugu actor Nagarjuna devotional film on Shirdi Saibaba shooting briskly progressing in Badami, Karnataka. Nagarjuna and director K. Raghavendra Rao's combo had super hit devotional movies like Annamayya and Sri Ramadasu.


Click it and Unblock the Notifications