Don't Miss!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಾಜ್' ಫೋಬಿಯಾ; ಚಿತ್ರೋದ್ಯಮದಲ್ಲಿ ತಲ್ಲಣ
ಪುನೀತ್ ನಟನೆಯ ಅದ್ದೂರಿ ಚಿತ್ರ 'ರಾಜ್ ದ ಶೋಮ್ಯಾನ್' ಬಿಡುಗಡೆಗೆ ದಿನ ಸಮೀಪಿಸುತ್ತಿದೆ. 'ರಾಜ್' ಚಿತ್ರಕ್ಕೆ ಹೆದರಿಕೊಂಡ ಇತರೆ ಕನ್ನಡದ ಚಿತ್ರಗಳು ಹೇಗಾದರೂ ಮಾಡಿ ಜುಲೈನಲ್ಲೇ ತೆರೆಕಾಣಲು ಅವಸರ ತೋರುತ್ತಿವೆ. ರಾಜ್ ಅಬ್ಬರಕ್ಕೆ ಡಜನ್ ಗಟ್ಟಲೆ ಚಿತ್ರಗಳು ಬಿಡುಗಡೆಗಾಗಿ ತವಕಿಸುತ್ತಿವೆ.
ಜುಲೈ 17ರಂದು ನಿರ್ದೇಶಕ ಹೇಮಂತ್ ಹೆಗಡೆಯ 'ಹೌಸ್ ಫುಲ್' ತೆರೆಕಾಣಲಿದೆ. ನಾಮುಂದು ತಾಮುಂದು ಎಂದು ಬಿಡುಗಡೆಯಾಗಲು ಹೊಸ ಚಿತ್ರಗಳ ನಡುವೆ ತೀವ್ರ ಸ್ಪರ್ಧೆಯೇ ಏರ್ಪಟ್ಟಿದೆ. ಇದರ ನೇರ ಪರಿಣಾಮ ನಮ್ಮಂತವರ ಮೇಲೆ ಉಂಟಾಗಿದೆ. ಈ ವರ್ಷದ ಅತಿದೊಡ್ಡ ಬಜೆಟ್ ನ'ರಾಜ್' ಚಿತ್ರದ ಬಗ್ಗೆ ಪ್ರೇಕ್ಷಕರ ಭಯಪಡುವ ಅಗತ್ಯವಿಲ್ಲ ಎನ್ನುತ್ತಾರೆ ಹೇಮಂತ್ ಹೆಗಡೆ.
ಇದೇ ರೀತಿಯ ಅಭಿಪ್ರಾಯವನ್ನೂ ಚಿತ್ರೋದ್ಯಮದ ಹಲವರು ವ್ಯಕ್ತಪಡಿಸಿದ್ದಾರೆ. ''ಈಗೇನು ನಡೆಯುತ್ತಿದೆ ಅದು ಸಂಪೂರ್ಣ ಅನಾರೋಗ್ಯ ಕರಬೆಳವಣಿಗೆ. ತಮ್ಮ್ಮ ತಮ್ಮ ಚಿತ್ರಗಳನ್ನು ಎಲ್ಲರೂ ಒಟ್ಟಿಗೆ ಬಿಡುಗಡೆ ಮಾಡಲು ಹೊರಟಿದ್ದಾರೆ. ಇದರಿಂದ ಚಿತ್ರಮಂದಿರಗಳ ಸಮಸ್ಯೆ ಉದ್ಭವಿಸುತ್ತದೆ ''ಎನ್ನುತ್ತಾರೆ ವಿಜಯಲಕ್ಷ್ಮಿ ಸಿಂಗ್. ಹಾಗೆಯೇ ಅವರ 'ಮಳೆ ಬರಲಿ ಮಂಜು ಇರಲಿ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
ಹೆಸರು ಹೇಳಲು ಇಚ್ಛಿಸದ ಚಿತ್ರೋದ್ಯಮದ ಮತ್ತೊಬ್ಬ್ಬರು , ರಾಜ್ ಬಿಡುಗಡೆ ನಂತರ ಚಿತ್ರಮಂದಿರ ಸಿಗುವುದು ಕಷ್ಟ. ಹಾಗಾಗಿ ನಮ್ಮ ಚಿತ್ರವನ್ನು ರಾಜ್ ಬಿಡುಗಡೆಗೂ ಮುನ್ನ ತೆರೆಗೆ ತರುತ್ತಿದ್ದೇವೆ ಎನ್ನುತ್ತಾರೆ. ಜುಲೈ 17ರಂದು ನವರಸ ನಾಯಕ ಜಗ್ಗೇಶ್ ಎಚ್ಚರಗೊಂಡು 'ಎದ್ದೇಳು ಮಂಜುನಾಥ 'ರೂಪದಲ್ಲಿ ದರ್ಶನ ನೀಡಲಿದ್ದಾನೆ. ಒಟ್ಟಿನಲ್ಲಿ ರಾಜ್ ಚಿತ್ರ ಕನ್ನಡ ಚಿತ್ರದೋದ್ಯಮದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)