Don't Miss!
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಲೋಕಸಭಾ ಚುನಾವಣೆ 2024: ಟಾಪ್ 10 ಶ್ರೀಮಂತ ಅಭ್ಯರ್ಥಿಗಳು ಇವರು
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೆ ಸಮಂತಾಗೇ 'ಮಣೆ' ಹಾಕಿದ ಮಣಿರತ್ನಂ
ಸಮಂತಾ ಮತ್ತೆ ಸುದ್ದಿಯಲ್ಲಿದ್ದಾಳೆ. ಕಾರಣ ಹಿಂದೊಮ್ಮೆ 'ಪೂಕದೈ' ಚಿತ್ರಕ್ಕೆ ನಿರ್ದೆಶಕ ಮಣಿರತ್ನಂ ಅವರಿಂದ ಸ್ಕ್ರೀನ್ ಟೆಸ್ಟ್ ಮಾಡಿಸಿಕೊಂಡು 'ಫೇಲ್' ಆಗಿದ್ದ ತೆಲುಗು ಸುಂದರಿ ಸಮಂತಾರಿಗೆ ಮತ್ತೆ ಮಣಿರತ್ನಂ ಕರೆ ಕಳಿಸಿದ್ದಾರೆ. ಆಗ ಸಮಂತಾ ಆ ಪಾತ್ರಕ್ಕೆ ಸೂಟ್ ಆಗಲ್ಲ ಅಂದಿದ್ದ ಮಣಿ. ಇದೀಗ ಮತ್ತೆ ಕರೆದಿರುವುದು ಹಲವರ ಹುಬ್ಬೇರಿಸಿದೆ.
ಸಮಂತಾಗೆ 'ನೋ' ಅಂದಿದ್ದ ಮಣಿ ನಂತರ ಹಿರಿಯ ನಟಿ ರಾಧಾಳ ಮಗಳು ತುಳಸಿಯನ್ನು ಆಯ್ಕೆ ಮಾಡಿದ್ದರು. ನಂತರ ಆಕೆಯ ಬದಲು ಸೋನಮ್ ಕಪೂರ್ ಗೆ ಆಫರ್ ನೀಡಿದ್ದಾಯಿತು. ಆಕೆಯೂ ಬೇಡ ಅಂದ ಮಣಿ 'ಲಕ್ಷ್ಮೀ ಮಂಚು' ಎಂಬ ಬೆಡಗಿಯ ಸ್ಕ್ರೀನ್ ಟೆಸ್ಟ್ ಮಾಡಿದರು. ಬಳಿಕ ಅದೇನಾಯಿತೋ ಏನೋ, ಇದ್ದಕ್ಕಿದ್ದಂತೆ ಮಣಿ ಸೋನಮ್ ಕಪೂರ್ ಬಿಟ್ಟು ಮತ್ತೆ ಸಮಂತಾ ಹಿಂದೆ ಬಿದ್ದಿದ್ದಾರೆ.
ಆದರೆ ಚಿತ್ರತಂಡದ ಅಭಿಪ್ರಾಯದಂತೆ, ಈ ಬಾರಿಯೂ ಸಮಂತಾ ಆಯ್ಕೆ ಪಕ್ಕಾ ಅಲ್ಲ. ಏಕೆಂದರೆ ಮಣಿಗೆ ಯಾರೂ ಸಿಗದಿದ್ದರಿಂದ ಸಮಂತಾಗೆ ಕರೆ ಹೋಗಿದೆ ಅಷ್ಟೇ. ಮತ್ತೆ ಬದಲಾಗುವುದು ಖಂಡಿತ. ಮಣಿ ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಇದು ಅವರ ಬಹು ನಿರೀಕ್ಷೆಯ ಚಿತ್ರ. (ಒನ್ ಇಂಡಿಯಾ ಕನ್ನಡ)