Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಿಆರ್ಒ ನಾಗೇಂದ್ರರ 500ನೇ ಚಿತ್ರ ಸರ್ಕಸ್
ರಜಿನಿಕಾಂತ್ ಅವರ ಮಗಳು ಐಶ್ವರ್ಯ ರಜಿನಿಕಾಂತ್ ಅವರು ಸರ್ಕಸ್ ಚಿತ್ರವನ್ನು ವೀಕ್ಷಿಸುತ್ತಿದ್ದು, ಬಹುಶಃ ತೆಲುಗು, ತಮಿಳಿಗೆ ಚಿತ್ರ ರಿಮೇಕ್ ಆಗುವ ಸಾಧ್ಯತೆಗಳಿವೆ. ಈ ವಿಶೇಷ ಪ್ರದರ್ಶನದ ಉಸ್ತುವಾರಿಯನ್ನು ನಾಗೇಂದ್ರ ಅವರು ವಹಿಸಿಕೊಂಡಿದ್ದಾರೆ.
ಸಿನಿಮಾರಂಗದ ಆಗುಹೋಗುಗಳು, ಪತ್ರಿಕಾಗೋಷ್ಠಿಗಳು, ಚಿತ್ರೀಕರಣದ ವರದಿಗಳು, ಸಿನಿಮಾ ಸ್ಥಿರ ಚಿತ್ರಿಕೆಗಳನ್ನು ಕಾಲಕಾಲಕ್ಕೆ ಮಾಧ್ಯಮ ಮಿತ್ರರಿಗೆ ತಲುಪಿಸುವ ಗುರುತರವಾದ ಜವಾಬ್ದಾರಿಯನ್ನು ಪಿಆರ್ ಒ ಹೊಂದಿರುತ್ತಾರೆ. ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿರುವ ನಾಗೇಂದ್ರ ಅವರದ್ದು ಗಾಂಧಿನಗರದಲ್ಲಿ ಜನಪ್ರಿಯ ಹೆಸರು.
ದಶಕದ ಹಿಂದೆ ನಟ ರಘುವೀರ್ ಅವರ ನಾಯಕತ್ವದ 'ಕಾವೇರಿ ತೀರದಲ್ಲಿ" ಎಂಬ ಚಿತ್ರವನ್ನು ನಿರ್ಮಿಸಿ, ಹಣ ಸುರಿದಿದ್ದ ನಾಗೇಂದ್ರ ಅವರು ಭಾರಿ ನಷ್ಟ ಅನುಭವಿಸಿದರು. ಈ ಚಿತ್ರವನ್ನು ಕಲಾಸಾಮ್ರಾಟ್ ಎಸ್. ನಾರಾಯಣ್ ಅವರು ನಿರ್ದೇಶಿಸಿದ್ದರು. ಆದರೆ ಅವರ ನೆಚ್ಚಿನ ಪಿಆರ್ ಒ ಕೆಲಸ ಮಾತ್ರ ಅವರನ್ನು ಕೈಬಿಡಲಿಲ್ಲ. ಇತ್ತೀಚಿಗೆ ಶತದಿನ ಕಂಡ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಬುದ್ಧಿವಂತ' ಚಿತ್ರದ ಬಗ್ಗೆ ಪತ್ರಿಕೆಗಳಲ್ಲಿ ವೈವಿಧ್ಯಮಯ ಸುದ್ದಿ ಜನರಿಗೆ ತಲುಪಲು ಮಾಧ್ಯಮಮಿತ್ರರ ಜತೆಗೆ ಪಿಆರ್ಒ ನಾಗೇಂದ್ರ ಅವರು ಕಾರಣ ಎಂದರೆ ತಪ್ಪಿಲ್ಲ.
ವಿಜಯ್ ರಾಘವೇಂದ್ರ ಅವರ ಕಾರಂಜಿ, ಈಶ್ವರ್ , ನಿಖಿತಾ ಅಭಿನಯದ ರಾಜಕುಮಾರಿ ಚಿತ್ರಕ್ಕೂ ನಾಗೇಂದ್ರ ಅವರೇ ಪಿಆರ್ ಒ.ನಾಗೇಂದ್ರ ಅವರಂಥ ಹಿರಿಯ ಹಿರಿಯ ಸಿನಿಮಾ ಕರ್ಮಿಯ ಜತೆ ಕೆಲಸ ಮಾಡುತ್ತಿರುವುದು ನನ್ನ ಪುಣ್ಯ ಎನ್ನುತ್ತಾರೆ ಅವರ ಸಹಾಯಕ ದೀಪಕ್. ಸಿನಿಮಾ ಪ್ರಚಾರಕ್ಕೆ ಪ್ರತ್ಯೇಕ ವಿಭಾಗವಿದ್ದರೂ ಮಾಧ್ಯಮ ಹಾಗೂ ಸಿನಿಮಾ ತಂಡದ ಮಧ್ಯೆ ಕೊಂಡಿಯಾಗಿರುವ ಪಿಆರ್ ಒಗಳ ಶ್ರಮಕ್ಕೆ ಸಲಾಂ ಹೇಳೋಣ.