twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಜಾಮೀನು ತೀರ್ಪು ಸೆ.13 ಮುಂದೂಡಿಕೆ

    By Rajendra
    |

    Actor Darshan family photo
    ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರು 1ನೇ ಎಸಿಎಂಎಂ ನ್ಯಾಯಾಧೀಶ ವೆಂಕಟೇಶ ಹುಲಗಿ ಆದೇಶವನ್ನು ಮಂಗಳವಾರ (ಸೆ.13)ಕ್ಕೆ ಮುಂದೂಡಿದ್ದಾರೆ. ದರ್ಶನ್ ಪ್ರಕರಣ ಕೊಲೆ ಕೃತ್ಯ ಅಲ್ಲ ಗಾಯಗೊಳಿಸುವ ಕೃತ್ಯ ಎಂದು ವಿಜಯಲಕ್ಷ್ಮಿ ಪರ ವಕೀಲ ಕೃಷ್ಟೇಗೌಡ ವಾದಿಸಿದರು.

    ದರ್ಶನ್‍ಗೆ ಜಾಮೀನು ನೀಡದಂತೆ ವಿಜಯನಗರ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಬ್ಬರ ವಾದ ವಿವಾದಗಳನ್ನು ಆಲಿಸಿದ ನ್ಯಾಯಾಲಯ ದರ್ಶನ್ ಜಾಮೀನು ಅರ್ಜಿ ಆದೇಶವನ್ನು ಮಂಗಳವಾರಕ್ಕೆ ಕಾದಿರಿಸಿದೆ. ಸೋಮವಾರ (ಸೆ.12) ಮಧ್ಯಾಹ್ನ 3 ಗಂಟೆಗೆ ವಿಚಾರಣೆ ಆರಂಭವಾಯಿತು.

    ವಿಚಾರಣೆ ಸಂದರ್ಭದಲ್ಲಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಸೇರಿದಂತೆ ಕನ್ನಡ ಚಲನಚಿತ್ರ ನಿರ್ಮಾಪಕ ಸಾ ರಾ ಗೋವಿಂದು, ದರ್ಶನ್ ಸಹೋದರ ತೂಗುದೀಪ ದಿನಕರ್ ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಅವರ ಬೆರಳುಗಳಿಗೆ ಆಗಿರುವ ಗಾಯ ಗಂಭೀರವಲ್ಲ. ಕೈ ಬೆರಳುಗಳು ದೇಹದ ಪ್ರಮುಖ ಅಂಗ ಅಲ್ಲ ಎಂದು ಅವರ ಪರ ವಕೀಲ ಕೃಷ್ಣೇಗೌಡ ವಾದಿಸಿದರು.

    ವಿಜಯಲಕ್ಷ್ಮಿ ಅವರ ಪ್ರಕರಣ ಕೊಲೆ ಕೃತ್ಯವಲ್ಲ (ಐಪಿಸಿ ಸೆಕ್ಷನ್ 307) ಅದು ಗಾಯಗೊಳಿಸುವ ಯತ್ನ (ಐಪಿಸಿ ಸೆಕ್ಷನ್ 324). ಹಾಗಾಗಿ ಅವರ ವಿರುದ್ಧ ದಾಖಲಿಸಿರುವ ಸೆಕ್ಷನ್ 307ರ ಬದಲಾಗಿ ಸೆಕ್ಷನ್ 324 ದಾಖಲಿಸಬೇಕು ಎಂದು ನ್ಯಾಯಾಲಯವನ್ನು ಕೋರಿದರು. ವಾದ ವಿವಾದವನ್ನು ಆಲಿಸಿದ ನ್ಯಾಯಾಧೀಶರು ಆದೇಶವನ್ನು ಮಂಗಳವಾರಕ್ಕೆ ತೀರ್ಪನ್ನು ಮುಂದೂಡಿದ್ದಾರೆ.

    ಈ ಮೂಲಕ ನಟ ದರ್ಶನ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಇಂದು ತೀರ್ಪು ಹೊರಬೀಳುತ್ತದೆ ಎಂದು ದರ್ಶನ್ ಅಭಿಮಾನಿಗಳು ಸೇರಿದಂತೆ ನಿರ್ಮಾಪಕರು ತೀವ್ರ ಆತಂಕ ಮತ್ತು ಕುತೂಹದಲ್ಲಿದ್ದರು. ಆದರೆ ಮಂಗಳವಾರಕ್ಕೆ ತೀರ್ಪು ಮುಂದೂಡಿರುವ ಕಾರಣ ದರ್ಶನ್ ಅಭಿಮಾನಿಗಳಲ್ಲಿ ಮತ್ತಷ್ಟು ಆತಂಕ ನೆಲಸಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

    English summary
    The 1st ACMM Bangalore court on Monday reserved its orders on the bail petition of actor Darshan, who have been arrested on Friday on charges of domestic violence. He allegedly beat up his wife, who had to be hospitalised.
    Monday, September 12, 2011, 16:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X