Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕಳ್ಳರಸಂತೆ'ಯಲ್ಲಿ ರಂಗೇರಿದ ಸಂಜೆ!
ಸಂಜೆ ಕಪ್ಪಡರಿದ ನಂತರ ಸುದ್ದಿಗೋಷ್ಠಿ ನಡೆಸಬಾರದು ಎನ್ನುವ ನಿರ್ಮಾಪಕರ ಸಂಘದ ಫರ್ಮಾನು ಮುರಿಯಲಾಗಿದೆ! "ಕಳ್ಳರ ಸಂತೆ" ಚಿತ್ರದ ಸುದ್ದಿಗೋಷ್ಠಿ ರಂಗೇರಿದ್ದೇ ಇಳಿಸಂಜೆ 7ರ ನಂತರ. ಪಾನಗೋಷ್ಠಿ ಇಲ್ಲದೆ ರಂಗೇರಲು ಸಾಧ್ಯವೇ?
"ಕಳ್ಳರ ಸಂತೆ" ಚಿತ್ರದ ಸಂಜೆಗೋಷ್ಠಿಯ ಸುಳಿವು ಸಿಕ್ಕಿದ್ದೇ ನಿರ್ಮಾಪಕರ ಸಂಘದ ಅಧ್ಯಕ್ಷ ಕೆ.ಸಿ.ಎನ್.ಚಂದ್ರಶೇಖರ್ ನಿರ್ಮಾಪಕ ಅಗ್ನಿ ಶ್ರೀಧರ್ಗೆ ಫೋನಾಯಿಸಿದ್ದಾರೆ. "ನಿರ್ಮಾಪಕರ ಹಿತಾಸಕ್ತಿ ದೃಷ್ಟಿಯಿಂದಲೇ ಈ ನಿರ್ಣಯ ಕೈಗೊಂಡಿರುವುದು. ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ವೃಥಾ ವೆಚ್ಚ ತಗ್ಗಿಸಲು ಈ ಪಾನ ನಿಗ್ರಹದ ನಿರ್ಣಯ" ಎಂದು ಹೇಳಿದ್ದಾರೆ. ಚಂದ್ರು ಮಾತು ಶ್ರೀಧರ್ಗೆ ಸಮ್ಮತವಾಗಿಲ್ಲ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂಥ ನಿರ್ಬಂಧಗಳನ್ನು ಹೇರುವುದು ಅನುಚಿತ. ಸಂಜೆ ಒಟ್ಟಿಗೆ ಕೂತು ಮಾತಾಡಿದರೆ, ಸಂತೋಷಕೂಟ ನಡೆಸಿದರೆ ತಪ್ಪೇನು? ಅದು ನಿರ್ಮಾಪಕರ ಇಷ್ಟ. ಅರ್ಥವಿಲ್ಲದ ನಿರ್ಬಂಧಗಳನ್ನು ಮುರಿಯಲೆಂದೇ ಈ ಗೋಷ್ಠಿ ನಡೆಸುತ್ತಿದ್ದೇನೆ. ಬೇರೆ ನಿರ್ಮಾಪಕರೂ ಇನ್ನುಮುಂದೆ ಸಂಜೆ ಕಾರ್ಯಕ್ರಮ ನಡೆಸುವರೆಂದು ಆಶಿಸೋಣ ಎಂದರು ಶ್ರೀಧರ್.
ಅರ್ಥವಿಲ್ಲದ ಚೌಕಟ್ಟುಗಳನ್ನು ಹಾಕಿಕೊಳ್ಳುವ ಬದಲು ಶಿಸ್ತಿನಿಂದ ಹಾಗೂ ಯೋಜನಾಬದ್ಧವಾಗಿ ಸಿನಿಮಾ ನಿರ್ಮಿಸಿದರೆ ನಷ್ಟದ ಮಾತಿಲ್ಲ ಎನ್ನುವುದು ಶ್ರೀಧರ್ ನಂಬಿಕೆ.