Don't Miss!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೈಟೂ ಕಾಫಿ ಕುಡಿದು ಒಂದು ಕಿರುಚಿತ್ರ ಕಳಿಸಿ ನೋಡೋಣ
ಅಂತಹವರಿಗೋಸ್ಕರ ಪ್ರವೇಶ ಶುಲ್ಕವಿರದೆ ಕಿರುಚಿತ್ರ ಹಬ್ಬವನ್ನು ನಡೆಸುವುದು ನಮ್ಮ ಮೂಲ ಉದ್ದೇಶ. ಬೇರೆ ರಾಜ್ಯಗಳಲ್ಲಿ ನಡೆಯುವಂತೆ ಪ್ರಭಾವಶಾಲಿ ಮಾಧ್ಯಮವಾಗಿ ಕಿರುಚಿತ್ರ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲ. ಅಲ್ಲದೆ ಕಿರುಚಿತ್ರ ತಯಾರಕರನ್ನು ಒಂದೆಡೆ ಸೇರಿಸಲು ಸುವರ್ಣಾವಕಾಶ ಮತ್ತು ಪ್ರಾಯೋಜಕರಿಗೆ ಮತ್ತೊಂದು ಸಮೂಹವನ್ನು ತಲುಪುವ ಅವಕಾಶವನ್ನು ದೊರಕಿಸಿ ಕೊಡುವುದು ಸಹ ನಮ್ಮ ಉದ್ದೇಶ ಎಂದು ಚಿತ್ರೋತ್ಸವದ ಉಸ್ತುವಾರಿ ವಹಿಸಿಕೊಂಡಿರುವ ಶ್ರೀಧರ್ ರೆಡ್ಡಿ ವಿವರಿಸಿದರು.
ಯಾರಿವರು ಬೈಟೂಕಾಫಿ: ಕಳೆದೆರಡು ವರುಷಗಳಿಂದ ಸಮಾಜಿಕ ಸಂದೇಶಗಳ ಕಿರುಚಿತ್ರಗಳ ತಯಾರಿಕೆಯಲ್ಲಿ ಸಕ್ರಿಯವಾಗಿದೆ. "ನನ್ನ ಕನಸು" -ಕಿರುಚಿತ್ರದಿಂದ ಶಿಕ್ಷಣ ಎಂಬ ಕಾರ್ಯಕ್ರಮದ ಮುಖಾಂತರ "ನಿರಂತರ ಫೌಂಡೇಶನ್" ಜೊತೆಗೂಡಿ ಶಾಲೆಗಳ ಬಡ ಮಕ್ಕಳಿಗೆ ವಿಭಿನ್ನ ರೀತಿಯ ಶಿಕ್ಷಣ ಕೊಡುತ್ತಾ ಸಮಾಜ ಸೇವೆ ಮಾಡುತ್ತಲಿದೆ. ಅಲ್ಲದೆ ಇತರ ರಾಜ್ಯಗಳಲ್ಲಿ ನಡೆದಂತಹ ರಾಷ್ಟ್ರೀಯ ಮಟ್ಟದ ಕಿರುಚಿತ್ರ ಹಬ್ಬಗಳಲ್ಲಿ ಕಿರುಚಿತ್ರಗಳು ಪ್ರದರ್ಶನ ಕಂಡಿವೆ. ಹೀಗೆ ಭಾಗವಹಿಸುತ್ತಾ ಪ್ರಸಕ್ತ ಪರಿಸ್ಥಿತಿಯ ಅರಿತಿದ್ದರಿಂದ ಈ ಒಂದು ಪ್ರಯತ್ನಕ್ಕೆ ಕೈ ಹಾಕಲಾಗಿದೆ.
ಆಸಕ್ತರು 2010-11ರಲ್ಲಿ ತಯಾರಿಸಿದ ತಮ್ಮ ಕಿರು-ಚಲನಚಿತ್ರಗಳನ್ನು, ಜೂನ್-24ರಿಂದ ಸೆಪ್ಟಂಬರ್-30ರ ಒಳಗಾಗಿ ಕಳುಹಿಸಬಹುದು. ಪ್ರಾಯೋಜಕತೆಗೆ, ಪ್ರವೇಶ ಪತ್ರಕ್ಕೆ ಹಾಗೂ ಹೆಚ್ಚಿನ ಮಾಹಿತಿಗಾಗಿ 99163 15540 ಮೋಬೈಲ್ ನಂಬರನ್ನು ಸಂಪರ್ಕಿಸ ಬಹುದು ಅಥವಾ http://shortfilmfest.by2coffeefilms.com/ ಗೆ ಭೇಟಿ ಕೊಡಬಹುದು.
ಉತ್ತಮ ಪ್ರವೇಶಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಹಾಗೂ ನವೆಂಬರ್ 27ರಂದು ಆಯೋಜಿಸುವ ಕಿರುಚಿತ್ರ ಹಬ್ಬದಲ್ಲಿ ಪ್ರದರ್ಶಿಸಲಾಗುವುದು.ಒಂದೊಂದು ಕಪ್ ಕಾಫೀ ಕೊಡುವ ನವೊಲ್ಲಾಸವನ್ನು ಬೈಟೂ ಕಾಫಿ ಸಹ ಕೊಡಬಲ್ಲದು, ಅದರಂತೆ ಕೆಲವು ಘಂಟೆಗಳ ಸಿನಿಮಾ ಕೊಡುವ ಸಂದೇಶವನ್ನು ಕೆಲವೇ ಕ್ಷಣಗಳ ಕಿರುಚಿತ್ರ ಸಹ ಕೊಡಬಲ್ಲದು.
ಸಾಹಿತ್ಯ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲಿ ವೈಶಿಷ್ಟ್ಯಪೂರ್ಣ ಹಿರಿಮೆ ಸಾಧಿಸಿರುವ ಗಿರೀಶ್ ಕಾಸರವಳ್ಳಿ, ಮನು ಚಕ್ರವರ್ತಿ, ಪಿ. ಶೇಷಾದ್ರಿ, ಬಿ. ಸುರೇಶ್, ಜಿ. ಎಸ್. ಭಾಸ್ಕರ್, ಬಿ. ಆರ್. ವಿಶ್ವನಾಥ್, ಎಸ್. ದಿವಾಕರ್, ಟಿ. ಪಿ. ಅಶೋಕ್, ಗೋಪಾಲಕೃಷ್ಣ ಪೈ, ರಮೇಶ್ ಅರವಿಂದ್ ಮತ್ತು ಮುಂತಾದವರ ಮಾರ್ಗದರ್ಶನ ನಿಮಗೆ ಸಿಗಲಿದೆ.