ನಟ ರಜನಿಕಾಂತ್ಗೆ ಏನೂ ಆಗಿಲ್ಲ ಥ್ಯಾಂಕ್ ಗಾಡ್!
ತಳಬುಡ ಇಲ್ಲದ ಇಂತಹ ಸುದ್ದಿಗಳನ್ನು ಯಾರು ಹಬ್ಬಿಸುತ್ತಾರೋ ಆ ಭಗವಂತನೇ ಬಲ್ಲ. ತಮಿಳುನಾಡಿನಲ್ಲಿ ಕುಮಾರಿ ಜಯಲಲಿತ ಜಯಭೇರಿ ಬಾರಿಸಿದ್ದಕ್ಕೂ ಈ ಸುದ್ದಿಗೂ ಸುತಾರಾಂ ಸಂಬಂಧವಿಲ್ಲ. ಆದರೂ ಅಂತಹ ಸುದ್ದಿಯೊಂದು ಕಾಳ್ಗಿಚ್ಚಿನಂತೆ ಹಬ್ಬಿದೆ. ಈ ಸುದ್ದಿಯಿಂದ ರಜನಿಕಾಂತ್ ಅಭಿಮಾನಿಗಳು ಕ್ಷಣಕಾಲ ದಂಗುಬಡಿದವರಂತಾದರು. ಬಳಿಕ ಇದು ಕೇವಲ ವದಂತಿ ಅಷ್ಟೆ ಎಂಬುದು ಗೊತ್ತಾಗಿದೆ. ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕೆಲ ದಿನಗಳ ಹಿಂದಷ್ಟೆ ರಜನಿಕಾಂತ್ ಚೆನ್ನೈನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.ಸಂಪೂರ್ಣವಾಗಿ ಚೇತರಿಸಿಕೊಂಡಿದ್ದ ಅವರಿಗೆ ವೈದ್ಯರು ವಿಶ್ರಾಂತಿ ಪಡೆಯುಂತೆ ತಿಳಿಸಿದ್ದರು. ಆದರೆ ಇಂದು (ಮೇ.13) ರಜನಿಕಾಂತ್ ಮೃತಪಟ್ಟಿದ್ದಾರೆ ಎಂಬ ಕಿಂವದಂತಿ ಈ ಮೇಲ್ಗಳಲ್ಲಿ ಹರಿದಾಡಿದೆ. ಸುದ್ದಿಯ ಸತ್ಯಾಸತ್ಯತೆಯನ್ನು ಖಚಿತಪಡಿಸುವಂತೆ ಎಂದು ನಮ್ಮ ಚೆನ್ನೈ ಪ್ರತಿನಿಧಿಯನ್ನು ಕೋರಲಾಯಿತು.
ಅವರು ಕೊಟ್ಟ ಮಾಹಿತಿ ಏನೆಂದರೆ, ರಜನಿಕಾಂತ್ ಅವರಿಗೆ ಏನೂ ಆಗಿಲ್ಲ. ಅವರು ಆರೋಗ್ಯವಾಗಿಯೇ ಇದ್ದಾರೆ. ಇದೆಲ್ಲಾ ಯಾರೋ ಹಬ್ಬಿಸಿದ ಗಾಳಿಸುದ್ದಿ ಅಷ್ಟೆ ಎಂದು ರಜನಿಕಾಂತ್ ಕುಟುಂಬ ಮೂಲಗಳು ಹಾಗೂ ಅವರ ಪಿಆರ್ಒ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಮಂಡ್ಯ ಗಂಡು ಅಂಬರೀಷ್ ಹಾಗೂ ಕ್ರೇಜಿಸ್ಟಾರ್ ಅವರ ಬಗ್ಗೆಯೂ ಇದೇ ರೀತಿಯ ಗಾಳಿ ಸುದ್ದಿ ಹಬ್ಬಿಸಿರಲಿಲ್ಲವೆ. ರಜನಿಗೆ ಏನೂ ಆಗಿಲ್ಲ.ಅವರು ಆರೋಗ್ಯವಾಗಿಯೇ ಇದ್ದಾರೆ, ಥ್ಯಾಂಕ್ಸ್ ಗಾಡ್! (ದಟ್ಸ್ಕನ್ನಡ ಸಿನಿ ಬ್ಯೂರೋ)


Click it and Unblock the Notifications











