Don't Miss!
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- News Darshan: ಡಿ.ಕೆ. ಸುರೇಶ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ರಜನಿಕಾಂತ್ಗೆ ಏನೂ ಆಗಿಲ್ಲ ಥ್ಯಾಂಕ್ ಗಾಡ್!
ತಳಬುಡ ಇಲ್ಲದ ಇಂತಹ ಸುದ್ದಿಗಳನ್ನು ಯಾರು ಹಬ್ಬಿಸುತ್ತಾರೋ ಆ ಭಗವಂತನೇ ಬಲ್ಲ. ತಮಿಳುನಾಡಿನಲ್ಲಿ ಕುಮಾರಿ ಜಯಲಲಿತ ಜಯಭೇರಿ ಬಾರಿಸಿದ್ದಕ್ಕೂ ಈ ಸುದ್ದಿಗೂ ಸುತಾರಾಂ ಸಂಬಂಧವಿಲ್ಲ. ಆದರೂ ಅಂತಹ ಸುದ್ದಿಯೊಂದು ಕಾಳ್ಗಿಚ್ಚಿನಂತೆ ಹಬ್ಬಿದೆ. ಈ ಸುದ್ದಿಯಿಂದ ರಜನಿಕಾಂತ್ ಅಭಿಮಾನಿಗಳು ಕ್ಷಣಕಾಲ ದಂಗುಬಡಿದವರಂತಾದರು. ಬಳಿಕ ಇದು ಕೇವಲ ವದಂತಿ ಅಷ್ಟೆ ಎಂಬುದು ಗೊತ್ತಾಗಿದೆ. ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕೆಲ ದಿನಗಳ ಹಿಂದಷ್ಟೆ ರಜನಿಕಾಂತ್ ಚೆನ್ನೈನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.ಸಂಪೂರ್ಣವಾಗಿ ಚೇತರಿಸಿಕೊಂಡಿದ್ದ ಅವರಿಗೆ ವೈದ್ಯರು ವಿಶ್ರಾಂತಿ ಪಡೆಯುಂತೆ ತಿಳಿಸಿದ್ದರು. ಆದರೆ ಇಂದು (ಮೇ.13) ರಜನಿಕಾಂತ್ ಮೃತಪಟ್ಟಿದ್ದಾರೆ ಎಂಬ ಕಿಂವದಂತಿ ಈ ಮೇಲ್ಗಳಲ್ಲಿ ಹರಿದಾಡಿದೆ. ಸುದ್ದಿಯ ಸತ್ಯಾಸತ್ಯತೆಯನ್ನು ಖಚಿತಪಡಿಸುವಂತೆ ಎಂದು ನಮ್ಮ ಚೆನ್ನೈ ಪ್ರತಿನಿಧಿಯನ್ನು ಕೋರಲಾಯಿತು.
ಅವರು ಕೊಟ್ಟ ಮಾಹಿತಿ ಏನೆಂದರೆ, ರಜನಿಕಾಂತ್ ಅವರಿಗೆ ಏನೂ ಆಗಿಲ್ಲ. ಅವರು ಆರೋಗ್ಯವಾಗಿಯೇ ಇದ್ದಾರೆ. ಇದೆಲ್ಲಾ ಯಾರೋ ಹಬ್ಬಿಸಿದ ಗಾಳಿಸುದ್ದಿ ಅಷ್ಟೆ ಎಂದು ರಜನಿಕಾಂತ್ ಕುಟುಂಬ ಮೂಲಗಳು ಹಾಗೂ ಅವರ ಪಿಆರ್ಒ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಮಂಡ್ಯ ಗಂಡು ಅಂಬರೀಷ್ ಹಾಗೂ ಕ್ರೇಜಿಸ್ಟಾರ್ ಅವರ ಬಗ್ಗೆಯೂ ಇದೇ ರೀತಿಯ ಗಾಳಿ ಸುದ್ದಿ ಹಬ್ಬಿಸಿರಲಿಲ್ಲವೆ. ರಜನಿಗೆ ಏನೂ ಆಗಿಲ್ಲ.ಅವರು ಆರೋಗ್ಯವಾಗಿಯೇ ಇದ್ದಾರೆ, ಥ್ಯಾಂಕ್ಸ್ ಗಾಡ್! (ದಟ್ಸ್ಕನ್ನಡ ಸಿನಿ ಬ್ಯೂರೋ)