Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೂರ್ಯಕಾಂತಿ, ಕಾಲ್ಪನಿಕ ಪ್ರೇಮಕಥಾ ಚಿತ್ರ
ನಾಸಿರ್, ಮನದೀಪ್ ರಾಜ್, ರಾಮಕೃಷ್ಣ, ಹಿಂದಿಯ ಟ್ಯಾಕ್ಸಿ ನಂ.1 ಚಿತ್ರದಲ್ಲಿ ನಟಿಸಿದ್ದ್ದ ಗಣೇಶ್ ಯಾದವ್ ಚಿತ್ರದ ತಾರಾಗಣದಲ್ಲಿದ್ದಾರೆ. ಧೀನ, ರಮಣ, ಸ್ಟ್ಯಾಲಿನ್, ಗಜನಿ ಯಂತಹ ಯಶಸ್ವಿ ಚಿತ್ರಗಳನ್ನು ಕೊಟ್ಟ ನಿರ್ದೇಶಕ ಎ.ಎಂ.ಮುರುಗದಾಸ್ ಸಹ 'ಸೂರ್ಯಕಾಂತಿ' ತಂಡಕ್ಕೆ ಶುಭ ಕೋರಲು ಆಗಮಿಸಿದ್ದರು. ನಿರ್ದೇಶಕ ಕೆ.ಎಂ.ಚೈತನ್ಯ ಅವರಿಗೆ ಇವರು ಫೇಸ್ ಬುಕ್ ಸೋಷಲ್ ನೆಟ್ ವರ್ಕ್ ತಾಣದ ಮೂಲಕ ಗೆಳೆಯರಾದರಂತೆ. ಆ ಸ್ನೇಹ ಮುರುಗದಾಸರನ್ನು ಇಲ್ಲಿಯವರೆಗೂ ಕರೆತಂದಿತ್ತು.
ಮುರುಗದಾಸ್ ಮೊದಲ ದೃಶ್ಯವನ್ನು ನಿರ್ದೇಶಿಸುವ ಮೂಲಕ ಸೂರ್ಯಕಾಂತಿ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು. ಜ್ಞಾನಪೀಠ ವಿಜೇತ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಕ್ಲಾಪ್ ಮಾಡಿದರು. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ಅವರು ಕ್ಯಾಮೆರಾ ಚಾಲು ಮಾಡಿದರು. ಈ ಎಲ್ಲಾ ಕಾರ್ಯಕ್ರಮಗಳು ಸಾಂಗವಾಗಿ ಭಾನುವಾರ ಧರ್ಮಗಿರಿ ಶ್ರೀಮಂಜುನಾಥ ದೇವಾಲಯದಲ್ಲಿ ನಡೆದದ್ದು ವಿಶೇಷ.
''ಚಿತ್ರೀಕರಣ ಬೆಂಗಳೂರು, ಬೆಳಗಾವಿ, ಗೋವಾ ಮತ್ತು ಉಜ್ಬೆಕಿಸ್ತಾನಗಳಲ್ಲಿ 70 ದಿನಗಳ ಕಾಲ ನಡೆಯಲಿದೆ. ಚಿತ್ರಕತೆಯನ್ನು ಬಹಳ ಅದ್ಭುತವಾಗಿ ಬರೆದಿದ್ದಾರೆ ನಮ್ಮ ಗುರು ನಾರಾಯಣಸ್ವಾಮಿ'' ಎಂದರು ಚೈತನ್ಯ. ಇದೊಂದು ವಿಭಿನ್ನ ಪ್ರೇಮಕಥೆ ಎನ್ನುತ್ತಾರೆ ಅವರು. ಆದಿನಗಳು, ಬಿರುಗಾಳಿ ಖ್ಯಾತಿಯ ಚೇತನ್ ಈ ಚಿತ್ರದಲ್ಲಿ ಬಾಡಿಗೆ ಹಂತಕನಾಗಿ ಕಾಣಿಸಲಿದ್ದಾರೆ. ಈ ಚಿತ್ರದ ಪಾತ್ರ ಪೋಷಣೆಗಾಗಿ ಚೇತನ್ ಕರಾಟೆ ಸಹ ಕಲಿಯಬೇಕಾಯಿತಂತೆ.
ಚಿತ್ರದ ನಾಯಕಿ ರೆಜಿನಾ. ನೂರಕ್ಕೂ ಅಧಿಕ ಜಾಹೀರಾತುಗಳಲ್ಲಿ ನಟಿಸಿದ ಅನುಭವಿ ಈಕೆ. ಚೆನ್ನೈ ಮೂಲದ ರೂಪದರ್ಶಿ. ಪ್ರಸ್ತುತ ಮನಃಶಾಸ್ತ್ರ ಓದುತ್ತಿರುವ ಈಕೆ ಬಾಲ ಕಲಾವಿದೆಯಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದರಂತೆ. ನಿರ್ದೇಶಕ ಮುರುಗದಾಸ್ ಮಾತನಾಡುತ್ತಾ, ಯಾವುದೇ ನಿರ್ದೇಶಕನಿಗೆ ಎರಡನೇ ಚಿತ್ರ ಬಹಳ ಮುಖ್ಯ. ಅದರಲ್ಲೂ ಮೊದಲನೇ ಚಿತ್ರ ಸೂಪರ್ ಹಿಟ್ ಆಗಿದ್ದ್ದರಂತೂ ಎರಡನೇ ಚಿತ್ರ ಅತಿದೊಡ್ಡ ಸವಾಲು. ಈ ಸವಾಲನ್ನು ಕೆ.ಎಂ.ಚೈತನ್ಯ ಖಂಡಿತ ನಿಭಾಯಿಸುತ್ತಾರೆ ಎಂದರು. ತಾರಾ, ರಮೇಶ್ ಅರವಿಂದ್, ನಾಗತಿಹಳ್ಳಿ ಚಂದ್ರಶೇಖರ್, ನಿರ್ಮಾಪಕ ಕೆ ಮಂಜು ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ಚಿತ್ರವಾರ್ತೆ)
ಆ
ದಿನಗಳು
ಚೈತನ್ಯರ
ಹೊಸ
ಚಿತ್ರ
ಸೂರ್ಯಕಾಂತಿ
ಬಿರುಗಾಳಿ:
ಗಾಳಿಯಲ್ಲೊಂದು
ಹೊಸ
ಗೋಪುರ
ಆ
ದಿನಗಳು
ಚೇತನ್
ರ
ಬಿರುಗಾಳಿ
ಟ್ರೈಲರ್
ಚೇತನ್,
ಏನಿದು
ವೈರಾಗ್ಯ?
ಏನಿದು
ಗಾಂಭೀರ್ಯ?