Don't Miss!
- News Soumya Reddy in Tirupati:ಸೌಮ್ಯ ರೆಡ್ಡಿ ಫೋಟೋ ಹಿಡಿದು ತಿರುಪತಿ ದೇವಸ್ಥಾನದ ಮುಂದೆ ಫೋಸ್ ಕೊಟ್ಟ ಭಕ್ತ!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Automobiles ಬೈಕಿನಂತೆ ಮೈಲೇಜ್ ಕೊಡೋದ್ರಿಂದ ಈ ಹ್ಯುಂಡೈ ಕಾರಿನ ಮಾಲೀಕರು ಫುಲ್ ಖುಷ್
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂತು ಇಂತು 'ರಾಜ್' ಚಿತ್ರೀಕರಣ ಮುಕ್ತಾಯ
ಕನ್ನಡ ಚಿತ್ರೋದ್ಯಮದಲ್ಲಿ ತೀವ್ರಕುತೂಹಲ ಮೂಡಿಸಿರುವ 'ರಾಜ್ ದ ಶೋಮ್ಯಾನ್' ಚಿತ್ರೀಕರಣ ಮುಕ್ತಾಯವಾಗಿದೆ. ಕೊನೆಯ ಹಂತದ ಚಿತ್ರೀಕರಣದಲ್ಲಿ ಚಿತ್ರತಂಡ ಕ್ಲಿಷ್ಟಕರ ಸನ್ನಿವೇಶಗಳಿಂದ ಪಾರಾಗಿ ಬಂದಿದೆ. ದಕ್ಷಿಣಾ ಆಫ್ರಿಕಾದಲ್ಲಿ 'ಹೇ ಪಾರು...' ಹಾಗೂ 'ಪೋಲಿ ಇವನು...' ಹಾಡನ್ನು ಲಡಾಖ್ ನಲ್ಲಿ ಚಿತ್ರೀಕರಿಸಲಾಗಿದೆ.
''ಹಿಂದಿಯ 'ಕಭಿ ಖುಷಿ ಕಭಿ ಘಮ್'ಗಿಂತಲೂ ಸುಂದರವಾಗಿ ಲಡಾಖ್ ನ್ನು ಸೆರೆಹಿಡಿದಿದ್ದೇವೆ . ತಮ್ಮ ಚಿತ್ರದಲ್ಲಿ ಮಂಜು ಮುಸಿಕಿದ ಬೆಟ್ಟಗಳನ್ನು ಸೆರೆಹಿಡಿಯಲು ಸ್ಥಳೀಯ ಗೈಡ್ ಸಹಾಯದಿಂದ ಲಡಾಖ್ ಗೆ ಹೋಗಿದ್ದೆವು. ಅಷ್ಟು ಎತ್ತರಕ್ಕೆ ಹೋದರೆ ಆಮ್ಲಜನಕದ ಕೊರತೆ ಇರುತ್ತೆ, ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ಬಳಿಕ ಚಿತ್ರೀಕರಣ ಮಾಡಿ ಎಂಬ ಸಲಹೆ ಸೂಚನೆಗಳನ್ನು ನಮ್ಮ ಗೈಡ್ ಕೊಟ್ಟಿದ್ದ'' ಎನ್ನುತ್ತಾರೆ ಪ್ರೇಮ್.
ಆದರೆ ನಾವು ಯಾವುದೇ ರೀತಿಯಲ್ಲೂ ಸಿದ್ಧರಾಗದೆ ಚಿತ್ರೀಕರಣ ಸ್ಥಳಕ್ಕೆ ಹೋಗಿದ್ದೆವು. ಮೌಂಟ್ ಎವರೆಸ್ಟ್ ಗಿಂತ 100 ಅಡಿ ಕೆಳಗಿದ್ದೆವು ಅಷ್ಟೇ. ಹಾಡಿನ ಒಂದು ಭಾಗವನ್ನು ಚಿತ್ರೀಕರಿಸಿದೆವು. ಮುಂದಿನ ಭಾಗ ಚಿತ್ರೀಕರಿಸಬೇಕಾದರೆ ಚಿತ್ರತಂಡದ ಒಬ್ಬೊಬ್ಬರೆ ಪ್ರಜ್ಞೆ ತಪ್ಪಿ ಬೀಳುವಂತಾಯಿತು. ನಿಶಾ ಕೋಠಾರಿ ಅವರ ತಾಯಿ ಸಹ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟರು ಎಂದು ಘಟನೆಯನ್ನು ಪ್ರೇಮ್ ವಿವರಿಸಿದರು.
ಅದೃಷ್ಟವಶಾತ್ ಪುನೀತ್ ರಾಜ್ ಕುಮಾರ್ ಗೆ ಯಾವುದೇ ತೊಂದರೆ ಆಗಲಿಲ್ಲ.ಆ ಹಾಡಿನಲ್ಲಿ ಪುನೀತ್ ಅದ್ಭುತವಾಗಿ ಅಭಿನಯಿಸಿದರು. ಚಿತ್ರೀಕರಣಕ್ಕೆ ಪ್ಯಾಕಪ್ ಹೇಳಿ ಸುರಕ್ಷಿತ ಸ್ಥಳಕ್ಕೆ ಹೊರಟೆವು.ಅಲ್ಲೇ ಸನಿಹದಲ್ಲಿದ್ದ ಆರ್ಮಿ ಕ್ಯಾಂಪ್ ನಲ್ಲಿ ಚಿಕಿತ್ಸೆ ತೆಗೆದುಕೊಂಡು ಚಿತ್ರೀಕರಣವನ್ನು ಮುಗಿಸಿದೆವು.ಚಿತ್ರತಂಡದ ಸಹಕಾರ ನಿಜಕ್ಕೂ ಮರೆಯುವಂತಿಲ್ಲ. ಖ್ಯಾತ ನಿರ್ದೇಶಕ ಮಣಿರತ್ನಂರ ದಿಲ್ ಸೆ ಚಿತ್ರದ ಹಾಡನ್ನ್ನು ಇಲ್ಲೇ ಚಿತ್ರೀಕರಿಸಿದ್ದಾರೆ ಎಂಬ ವಿವರಗಳನ್ನು ಪ್ರೇಮ್ ನೀಡಿದರು.
(ದಟ್ಸ್ ಕನ್ನಡ ಚಿತ್ರವಾರ್ತೆ)