twitter
    For Quick Alerts
    ALLOW NOTIFICATIONS  
    For Daily Alerts

    ಕ್ಯಾನ್ಸರ್‌ಗೆ ಬಲಿಯಾದ ಖ್ಯಾತ ಖಳ ನಟ ರಾಮಿ ರೆಡ್ಡಿ

    By Rajendra
    |

    Actor Rami Reddy
    ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಭೋಜ್‌ಪುರಿ ಚಿತ್ರಗಳಲ್ಲಿ ತಮ್ಮದೇ ಆದಂತಹ ವಿಭಿನ್ನ ಖಳ ನಟನೆಗೆ ಪಾತ್ರರಾಗಿದ್ದ ರಾಮಿ ರೆಡ್ಡಿ ಗುರುವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಹೈದರಾಬಾದ್‌ನ ಕಿಮ್ಸ್ ಆಸ್ಪತ್ರೆಯಲ್ಲಿ ಇಂದು ಕಣ್ಮುಚ್ಚಿದರು.

    ಕನ್ನಡದ ಅಭಿಮನ್ಯು ಸೇರಿದಂತೆ ಪ್ರಭಾಕರ್ ಹಾಗೂ ಶಶಿಕುಮಾರ್ ಅವರ ಚಿತ್ರಗಳಲ್ಲಿ ಖಳನಟನಾಗಿ ರಾಮಿ ರೆಡ್ಡಿ ಅಭಿನಯಿಸಿದ್ದರು. ಕನ್ನಡ ವಜ್ರಮುನಿ ಅವರಷ್ಟೇ ತೆಲುಗಿನಲ್ಲಿ ರಾಮಿರೆಡ್ಡಿ ತಮ್ಮ ವಿಭಿನ್ನ ನಟನೆಗೆ ಹೆಸರಾಗಿದ್ದರು. ಅವರ ಬಕ್ಕ ತಲೆ, ಕಣ್ಣಿನ ನೋಟ ಖಳನಟನೆಗೆ ಹೇಳಿ ಮಾಡಿಸಿದಂತಿತ್ತು. ಸರಿಸುಮಾರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಮಿ ರೆಡ್ಡಿ ಅಭಿನಯಿಸಿದ್ದಾರೆ.

    ತೆಲುಗಿನ 'ಅಂಕುಶಂ' ಚಿತ್ರ ರಾಮಿರೆಡ್ಡಿ ಅವರಿಗೆ ಅಪಾರ ಹೆಸರು ತಂದುಕೊಟ್ಟಿತ್ತು. ಕಿಡ್ನಿ ವೈಫಲ್ಯ ಹಾಗೂ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಂದ ರಾಮಿ ರೆಡ್ಡಿ ಬಳಲುತ್ತಿದ್ದರು. ಅವರ ಹಠಾತ್ ನಿಧನಕ್ಕೆ ತೆಲುಗು ಚಿತ್ರರಂಗ ಕಂಬನಿ ಮಿಡಿದಿದೆ. ತೆರೆಯ ಮೇಲೆ ಗಂಭೀರ, ಭಯಾನಕವಾಗಿ ಕಾಣುವ ರಾಮಿ ರೆಡ್ಡಿ ವೈಯಕ್ತಿಕವಾಗಿ ತೀರಾ ಸಂಕೋಚದ, ಸೂಕ್ಷ್ಮ ಮನಸ್ಸಿನ ವ್ಯಕ್ತಿಯಾಗಿದ್ದರು.

    ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ರಾಮಿ ರೆಡ್ಡಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದರು. ಉರ್ದು ಮತ್ತು ಹಿಂದಿ ಪತ್ರಿಕೆಗಳಿಗೆ ಬರೆಯುತ್ತಿದ್ದರು. ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವೀಧರರಾಗಿದ್ದರು. ರಾಮಿ ರೆಡ್ಡಿ ಅವರ ತೆಲಂಗಾಣ ಶೈಲಿಯ ಲಾಕ್ಷಣಿಕ ಡೈಲಾಗ್‌ಗಳು ಬಹಳ ಜನಪ್ರಿಯವಾಗಿದ್ದವು.

    English summary
    Vajramuni of south cinema, villain Rami Reddy passed away in KIMS Hyderabad on 14th April 2011. He was suffering from kidney failure for the last couple of years. He was introduced to the silver screen by directer Kodi Ramakrishna. Reddy acted in couple of Kannada movies including " Abhimanyu"
    Thursday, April 14, 2011, 17:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X