Don't Miss!
- News ಹಿರಿಯೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ಪಲ್ಟಿ: NHAIನ ಆ ಒಂದು ಯಡವಟ್ಟಿನ ವಿರುದ್ಧ ಭುಗಿಲೆದ್ದ ಆಕ್ರೋಶ
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಸಿದ್ದ ವ್ಯಕ್ತಿಯೊರ್ವನಿಂದ ನಾಯಕಿಯ ಅಪಹರಣ!
ಪ್ರಸಿದ್ದ ವ್ಯಕ್ತಿಯೊರ್ವನಿಂದ ನಾಯಕಿಯ ಅಪಹರಣ. ಈ ವಿಷಯ ತಿಳಿದ ನಾಯಕನಿಂದ ನಾಯಕಿಗಾಗಿ ಶೋಧ. ಕೊನೆಗೆ ಆಕೆಯಿರುವ ಸ್ಥಳ ಪತ್ತೆ ಹಚ್ಚುವಲ್ಲಿ ನಾಯಕ ಸಫಲ. ಚಕ್ರವ್ಯೂಹದಂತಿದ್ದ ಅಲ್ಲಿನ ಕಾವಲು ಪಡೆಯನ್ನು ಮಟ್ಟ ಹಾಕಿದ ನಾಯಕ ಒಳ ಪ್ರವೇಶಿಸುತ್ತಾನೆ. ನಂತರ ನಾಯಕ ಹಾಗೂ ಅಪಹರಿಸಿರುವ ವ್ಯಕ್ತಿಯ ನಡುವೆ ಹೊಡೆದಾಟವಾಗುತ್ತದೆ.
ಆ ಹೊಡೆದಾಟದಲ್ಲಿ ಜಯಶೀಲನಾದ ನಾಯಕ ನಾಯಕಿಯನ್ನು ಬಂಧನದಿಂದ ವಿಮುಕ್ತಿಗೊಳಿಸುತ್ತಾನೆ. ಈ ಸನ್ನಿವೇಶವನ್ನು ಮಿನರ್ವಮಿಲ್ನಲ್ಲಿ ಚಿತ್ರದ ನಾಯಕನೂ ಆಗಿರುವ ನಿರ್ದೇಶಕ ಹರೀಶ್ರಾಜ್ 'ಗನ್' ಚಿತ್ರಕ್ಕಾಗಿ ಚಿತ್ರಿಸಿಕೊಂಡರು. ಹರೀಶ್ರಾಜ್, ರಂಗಾಯಣರಘು ಹಾಗೂ ಮಲ್ಲಿಕಾಕಪೂರ್ ಅಭಿನಯಿಸಿದ ಈ ಸನ್ನಿವೇಶಕ್ಕೆ ಡಿಫ಼ರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದರು.
ಹರೀಶ್ರಾಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮುರಳಿ ಅವರೊಂದಿಗೆ ಹರೀಶ್ರಾಜ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಎಚ್.ಎಮ್.ರಾಮಚಂದ್ರ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಮಂಜು ಮಾಂಡವ್ಯ ಸಂಭಾಷಣೆ ಬರೆದಿದ್ದಾರೆ. ರಾನಿ ರಾಫಲ್ ಅವರ ಸಂಗೀತವಿರುವ 'ಗನ್' ಚಿತ್ರಕ್ಕೆ ಹರೀಶ್ರಾಜ್, ಮಲ್ಲಿಕಾಕಪೂರ್, ರಂಗಾಯಣರಘು, ಸುಂದರಶ್ರೀ, ಸಂಗೀತಾ, ಮೋಹನ್ಜುನೆಜಾ, ಪಿ.ಎನ್.ಸತ್ಯ, ಬುಲೆಟ್ಪ್ರಕಾಶ್ ತಾರಾಬಳಗವಿದೆ.