ಗೋಪಿಕಾ ಮಾನಸ ಚೋರನಿಗೆ ರಮ್ಯಾ ಹೂಮಾಲೆ ಸೇವೆ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರುವ ಗೋಲ್ಡನ್ ಗರ್ಲ್ ರಮ್ಯಾ ಉಡುಪಿಗೆ ಭೇಟಿ ನೀಡಿ ಭಕ್ತ ವತ್ಸಲ ಶ್ರೀಕೃಷ್ಣನ ದರ್ಶನ ಭಾಗ್ಯ ಪಡೆದರು. ಶ್ರೀಕೃಷ್ಣನಿಗೆ ಹೂ ಮಾಲೆ ಸೇವೆಯನ್ನೂ ಸಲ್ಲಿಸಿದರು.
ಆದರೆ ಹೂ ಮಾಲೆ ಕಟ್ಟಲು ರಮ್ಯಾ ಅವರಿಗೆ ಬರಲಿಲ್ಲ. ಅಲ್ಲಿನ ಮಹಿಳೆಯರ ಸಹಾಯದೊಂದಿಗೆ ಹೂ ಮಾಲೆಯನ್ನು ಕಟ್ಟಿ ಗೋಪಿಕಾ ಮಾನಸ ಚೋರನಿಗೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಅವರು ಹೂ ಮಾಲೆ ಕಟ್ಟುವುದು ಹೇಗೆ ಎಂಬುದನ್ನು ಕಲಿತುಕೊಂಡರು.
ಬಳಿಕ ಅವರು ಪರ್ಯಾಯ ಮಠಾಧಿಪತಿಗಳಾದ ವಿಶ್ವವಲ್ಲಭ ತೀರ್ಥ ಸ್ವಾಮಿಜಿಗಳನ್ನು ಭೇಟಿ ಮಾಡಿ ಅವರ ಆಶೀರ್ವಚನ ಪಡೆದರು. ಕನಕದಾಸರ ಕಿಂಡಿ ಮೂಲಕ ಗೋಪಿಲೋಲ ಗೋಪಾಲನ ದರ್ಶನ ಭಾಗ್ಯವನ್ನು ಪಡೆದು ರಮ್ಯಾ ಭಕ್ತಿಯಲ್ಲಿ ಪರವಶರಾದರು. (ಏಜೆನ್ಸೀಸ್)
More from Filmibeat
English summary
Golden Girl Ramya visits Udupi and offers specila puja at Sri Krishna Mutt. The actress campaigning in Kundapura, Udupi Dist for Congress candidate Jayaprakash Hegde.


Click it and Unblock the Notifications











