twitter
    For Quick Alerts
    ALLOW NOTIFICATIONS  
    For Daily Alerts

    ಮಲೆ ಮಾದೇಶ್ವರನ ಸನ್ನಿಧಿಯಲ್ಲಿ ಕರಿ ಚಿರತೆ

    By Super
    |

    ಮುಗ್ಧ ಶಿವಲಿಂಗು ಪಾತ್ರದಿಂದ ಕನ್ನಡಿಗರ ಮನದಲ್ಲಿ ನೆಲೆಯೂರಿದ್ದ ವಿಜಯ್ ಈಗ ದುಷ್ಟರನ್ನು ಬೇಟೆಯಾಡುವ 'ಕರಿ ಚಿರತೆ'ಯಾಗಿ ಸಾಹಸ ಪ್ರಿಯರ ಮನ ತಣಿಸಲು ಅಣಿಯಾಗುತ್ತಿದ್ದಾರೆ. ಮೋಹನ ಕುಮಾರ.ಎನ್. ಅರ್ಪಿಸಿ ಮೋಹನ ಪ್ರೊಡಕ್ಷನ್ಸ್ ಲಾಛನದಲ್ಲಿ ಕೃಷ್ಣಯ್ಯ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಗಜ ಹಾಗೂ ಪ್ರೀತ್ಸೆ ಪ್ರೀತ್ಸೆ ನಿರ್ದೇಶಿಸಿದ್ದ ಕೆ. ಮಾದೇಶ್ ಕ್ಯಾಪ್ಟನ್ ಆಗಿದ್ದಾರೆ.

    ಜೂನ್ 19 ರಿಂದ ಈ ಚಿತ್ರದ ಚಿತ್ರೀಕರಣ ಪ್ರಾರಂಭಿಸಿದ್ದು, ಕಳೆದ ವಾರ ಮಲೆ ಮಾದೇಶ್ವರ ಸ್ವಾಮಿ ಬೆಟ್ಟದಲ್ಲಿ ಹಾಡೊಂದನ್ನು 4 ದಿನಗಳ ಕಾಲ ಚಿತ್ರೀಕರಿಸಲಾಯಿತು. ಮಾದೇಶ್ವರ ಸ್ವಾಮಿಯನ್ನು ನಾಯಕ ವಿಜಯ್ ವೀರಾವೇಶದಿಂದ ಹಾಡಿ ಹೊಗಳುವ ಈ ಹಾಡಿನ ಚಿತ್ರೀಕರಣದಲ್ಲಿ ಡೋಲು, ಡೊಳ್ಳು ಕುಣಿತ, ವೀರಗಾಸೆ ತಾಳ, ಮದ್ದಲೆ, ಕಲಾವಿದರ ಜೊತೆಗೆ 100 ಜನ ನೃತ್ಯ ಕಲಾವಿದರೂ ಭಾಗವಹಿಸಿದರು.

    ಪರಿಚಯ ಚಿತ್ರದ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದ ರಾಮು ಈ ಹಾಡಿಗೆ ನೃತ್ಯ ನಿರ್ದೇಶಕರಾಗಿದ್ದಾರೆ. ವಿಜಯ ಅಭಿನಯಿಸಿದ್ದಾರೆ. ಸಾಧುಕೋಕಿಲ ಅವರ ಸಂಗೀತ ಸಂಯೋಜನೆ, ಎಂ.ಆರ್. ಸೀನು ಅವರ ಛಾಯಾಗ್ರಹಣ, ಪಳನಿರಾಜ್‌ರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.

    (ದಟ್ಸ್ ಕನ್ನಡ ಚಿತ್ರವಾರ್ತೆ)

    English summary
    Film Kari Chirate
    Thursday, November 21, 2013, 13:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X