Don't Miss!
- News ಲೋಕಸಭೆ ಚುನಾವಣೆ : ಶೇ 100ರಷ್ಟು ಮತದಾನವಾದರೆ ಸಿಗಲಿದೆ ಪ್ರಶಸ್ತಿ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಡ್ಡಿ ಶೋಭಾ ಸಂಬಂಧ ಆಯ್ತು ಭ್ರಷ್ಟಾಚಾರಕ್ಕೆ ಆಹಾರ
ಆದರೆ, ನಿರ್ದೇಶಕ ಸಾಯಿಪ್ರಕಾಶ್ ಅವರು ಜೈಲುಹಕ್ಕಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಹಾಲಿ ಇಂಧನ ಮಂತ್ರಿ ಶೋಭಾ ಕರಂದ್ಲಾಜೆ ಅವರನ್ನು ಹೋಲುವಂತಹ ಎರಡು ವ್ಯಕ್ತಿಗಳನ್ನು ತಮ್ಮ ಚಿತ್ರದಲ್ಲಿ ಪರಿಚಯಿಸುತ್ತಿದ್ದಾರಂತೆ.
ಇದೇ ಅಸಲಿಗೆ ಯಡಿಯೂರಪ್ಪ ಹಾಗೂ ಶೋಭಾ ಅವರ ನಡುವಿನ ಕಥೆಯೇ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಅದರೆ, ಓಂ ಸಾಯಿಪ್ರಕಾಶ್ ಅವರ ಹೊಸ ಚಿತ್ರ 'ಭ್ರಷ್ಟಾಚಾರ' ದಲ್ಲಿ ಗಣಿಗಾರಿಕೆ, ರಾಜಕೀಯ ತಂತ್ರಗಾರಿಕೆಯೇ ಪ್ರಧಾನ ಪಾತ್ರವಂತೆ.
ನಿರ್ಮಾಪಕ ನರ್ಗೀಸ್ ಬಾಬು ಅವರ ಪುತ್ರ ಕಮ್ಮರ್ ಹೆಸರಿನಲ್ಲಿ ರೆಹಾನ್ ಎಂಟರ್ಪ್ರೈಸಸ್ ಬ್ಯಾನರ್ನಲ್ಲಿ ತಯಾರಿಸುತ್ತಿರುವ ಈ ಚಿತ್ರ ಭ್ರಷ್ಟಾಚಾರ ಎಲ್ಲ ರೀತಿಉಯ ಮುಖಗಳನ್ನು ತೋರಿಸಲಿದೆಯಂತೆ.
ನಾಗರೀಕ ಪ್ರಜ್ಞೆ ಹೆಚ್ಚಿಸಿ, ಜನತೆಗೆ ಒಳ್ಳೆ ಸಂದೇಶ ನೀಡಲಿದೆ ಎಂದು ಚಿತ್ರತಂಡ ಹೇಳುತ್ತಿದೆ.
ಕಿಶೋರ್ ಹಾಗೂ ಭಾವನ ರಾವ್ ಅವರು ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಆದಿ ಲೋಕೇಶ್ ಹಾಗೂ ಇನ್ನಿತರರು ತಾರಾಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಏನಾದರೂ ಸಂಚಲನ ಮೂಡಿಸುತ್ತದೆಯೋ ಅಥವಾ ಇದು ಬರೀ ಪ್ರಚಾರಕ್ಕಾಗಿ ಮಾಡಿರುವ ಗಿಮಕ್ ಏನೋ ಕಾದು ನೋಡಬೇಕಿದೆ.