Don't Miss!
- News Lok Sabha Election 2024: ಈ 6 ಜಿಲ್ಲೆಗಳಲ್ಲಿ 0% ಮತದಾನ-ಎಲ್ಲಿ ಹಾಗೂ ಕಾರಣ ಏನು?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡದ ಕಿರಣ್ ಬೇಡಿ ಈಗ ಆಂಧ್ರ ಕಿರಣ್ ಬೇಡಿ!
'ಕನ್ನಡದ ಕಿರಣ್ ಬೇಡಿ' ಮಾಲಾಶ್ರೀ ಆಂಧ್ರಗೆ ಹೋಗಿದ್ದಾರೆ. ತೊಂಬತ್ತರ ದಶಕದಲ್ಲಿ ಮಾಲಾಶ್ರೀ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ತೆಲುಗಿನ ಪ್ರೇಮ ಖೈದಿ ಮತ್ತು ಭಾವ ಭಾವಮರ್ದಿ ಚಿತ್ರಗಳಲ್ಲಿನ ಅವರ ಅಮೋಘ ನಟನೆಯನ್ನು ತೆಲುಗು ಚಿತ್ರ ಪ್ರೇಕ್ಷಕರು ಇನ್ನೂ ಮರೆತಿಲ್ಲ. ಕಾರಣಾಂತರಗಳಿಂದ ತೆಲುಗು ಚಿತ್ರರಂಗದಿಂದ ಸ್ವಯಂ ನಿವೃತ್ತಿ ಘೋಷಿಸಿಕೊಂಡಿದ್ದರು.
ಸುದೀರ್ಘ ಹತ್ತು ವರ್ಷಗಳ ನಂತರ ಮಾಲಾಶ್ರೀ ಈಗ 'ಆಂಧ್ರ ಕಿರಣ್ ಬೇಡಿ'ಯಾಗಿ ತೆಲುಗು ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ಓಂ ಪ್ರಕಾಶ್ ರಾವ್ ನಿರ್ದೇಶಿಸಿದ ಕನ್ನಡ ಕಿರಣ್ ಬೇಡಿಯನ್ನು ತೆಲುಗಿಗೆ ಡಬ್ ಮಾಡಲಾಗಿದೆ. ಈಗ ಚಿತ್ರ ಆಂಧ್ರದಲ್ಲಿ ಬಿಡುಗಡೆಗೆ ಅಣಿಯಾಗಿದೆ.
ಈ ಕುರಿತು ಮಾತನಾಡಿದ ಮಾಲಾಶ್ರೀ, ತೆಲುಗು ಪ್ರೇಕ್ಷಕರಿಗೆ ಆದರ್ಶ ನಾಯಕಿಯಾಗಿ, ಅನುರಾಗ ಮೂರ್ತಿಯಾಗಿ ನಾನು ಪರಿಚಿತ. ಆದರೆ ಕನ್ನಡಿಗರಿಗೆ ನಾನು ಆಕ್ಷನ್ ನಟಿಯಾಗಿ ಚಿರಪರಿಚಿತ. ಕುತೂಹಲಭರಿತ ಪಾತ್ರ ಸಿಕ್ಕರೆ ಈಗಲೂ ನಾನು ತೆಲುಗಿನಲ್ಲಿ ನಟಿಸಲು ಸಿದ್ಧ. ಏನೇ ಆಗಲಿ ಹತ್ತು ವರ್ಷಗಳ ಬಳಿಕ ಮತ್ತೆ ತೆಲುಗು ಚಿತ್ರದಲ್ಲಿ ಕಾಣಿಸುತ್ತಿರುವುದು ಖುಷಿ ಕೊಟ್ಟಿದೆ ಎನ್ನುತ್ತಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)