twitter
    For Quick Alerts
    ALLOW NOTIFICATIONS  
    For Daily Alerts

    ಚಿಂಗಾರಿ ಸಂತೋಷಕೂಟಕ್ಕೆ ನಿರ್ಮಾಪಕರೇಕೆ ಬಂದಿಲ್ಲ?

    By * ಶ್ರೀರಾಮ್ ಭಟ್
    |
    <ul id="pagination-digg"><li class="previous"><a href="/news/18-challenging-star-darshan-mahadev-manu-chingari-aid0172.html">« Previous</a>

    ಅಷ್ಟಕ್ಕೂ, ಚಿತ್ರ ಬಿಡುಯಾದ ದಿನ ನಿರ್ಮಾಪಕರು ಚಿತ್ರಕ್ಕೆ ಪರಿವಾರ ಸಮೇತ ಹೋಗಿದ್ದಾರೆ. ಚಿತ್ರದ ಕಲಾವಿದರ ಜೊತೆ ಬೆರೆತಿದ್ದಾರೆ. ನಂತರ ಇಡೀ ದಿನ ಕೂಡ ಚಿತ್ರದ ಕುರಿತು ಮಾಧ್ಯಮದ ಪ್ರತಿನಿಧಿಗಳೊಂದಿಗೆ ಹಾಗೂ ಪಿಆರ್ ಓಗಳೊಂದಿಗೆ ಅದರ ಬಗ್ಗೆ ಪ್ರೀತಿಯಿಂದಲೇ ಮಾತನಾಡಿದ್ದಾರೆ. ಚಿತ್ರ ಮಾರಾಟವಾದ ನಂತರವೂ ಓಡಾಡಿಕೊಂಡು ಚಿತ್ರಕ್ಕೆ ಬಂದ ಪ್ರತಿಕ್ರಿಯೆಗಳಿಂದ ಮುಖ ಅರಳಿಸಿಕೊಂಡಿದ್ದಾರೆ.

    ಹಾಗಾದರೆ ನಿಜವಾಗಿ ನಡೆದಿದ್ದೇನು? ಚಿತ್ರವನ್ನು ಮಾರಾಟ ಮಾಡಿದ ಮೇಲೆ ಚಿತ್ರದ ಪ್ರಚಾರ ಕಾರ್ಯವನ್ನು ನಿರ್ಮಾಪಕರು ಹಾಗೂ ವಿತರಕರು ಹೇಗೆ ಮಾಡಬೇಕೆಂದು ಚರ್ಚಿಸಿದ್ದರು? ಅವರ ಮಧ್ಯೆ ಯಾಕೆ ಭಿನ್ನಾಭಿಪ್ರಾಯ ಬಂತು? ನಿರ್ಮಾಪಕರು ಹಾಗೂ ದರ್ಶನ್ ಮಧ್ಯೆ ಮನಸ್ತಾಪ ಬಂದಿದ್ದು ಯಾವಾಗ? ಚಿಂಗಾರಿಗೂ ಮೊದಲು ಮಹಾದೇವ್, ಮನು ನಿರ್ಮಿಸಿದ್ದ 'ಶಿಶಿರ' ಚಿತ್ರ ಬಾಕ್ಸಾ ಆಫೀಸ್ ನಲ್ಲಿ ಸೋತರೂ ಅವರ ಪ್ರಚಾರ ಕಾರ್ಯ ಇಡೀ ಚಿತ್ರರಂಗದ ಗಮನಸೆಳೆದಿತ್ತು. ಚಿಂಗಾರಿಯ ವಿಷಯದಲ್ಲಿಯೂ ಆಡಿಯೋ ಬಿಡುಗಡೆವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು. ನಂತರ ಹೀಗೇಕಾಯಿತು?

    ದರ್ಶನ್ ಹಾಗು ಚಿಂಗಾರಿ ನಿರ್ಮಾಪಕ ನಡುವೆ ಮನಸ್ತಾಪ ನಡೆದಿದೆ ಎಂದರೆ ನಂಬಲಿಕ್ಕೆ ಸ್ವಲ್ಪ ಕಷ್ಟ. ಕಾರಣ ದರ್ಶನ್ ವೈಯಕ್ತಿಕ ಸಮಸ್ಯೆಯಿಂದ ಜೈಲಿನಲ್ಲಿದ್ದಾಗ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಕೇವಲ ಸಿನಿಮಾ ಪ್ರೀತಿಯಲ್ಲದೇ ದರ್ಶನ್ ಮೇಲಿನ ಪ್ರೀತಿಯೂ ಕಾರಣ ಎಂಬುದನ್ನು ಆಗ ಎಲ್ಲರೂ ಮಾತನಾಡುತ್ತಿದ್ದರು. ಈಗ ಇದ್ದಕ್ಕಿದ್ದಂತೆ ಇಬ್ಬರಲ್ಲಿ ಮನಸ್ತಾಪ ಯಾಕಾಗಿದೆ? ಈ ವಿಷಯವೀಗ ಯಾಕೆ ಪ್ರಚಾರ ಪಡೆಯುತ್ತಿದೆ?

    ನಿರ್ಮಾಪಕರು ಹಾಗೂ ದರ್ಶನ್ ಇಬ್ಬರೂ ಮನಸ್ತಾಪ ಆಗಿದ್ದು ನಿಜ ಎಂದಿದ್ದಾರೆ. ದರ್ಶನ್ ಹೇಳಿಕೆಗಳು ಮಾದ್ಯಮದಲ್ಲಿ ಸುದ್ದಿಯಾಗಿವೆ. ಆದರೆ ವಿತರಕ ಪ್ರಸಾದ್ ಹಾಗೂ ಚಿಂಗಾರಿ ನಿರ್ಮಾಪಕ ನಡುವಿನ ಬಾಂಧವ್ಯ ಚೆನ್ನಾಗಿಯೇ ಇದೆ ಎಂದು ಸ್ವತಃ ಮನು ಅವರೇ ಹೇಳಿದ್ದಾರೆ. ಆದರೆ ಸತ್ಯವೇನೆಂದು ಅವರಿಬ್ಬರಿಗೆ ಮಾತ್ರ ಗೊತ್ತು. ಹೇಳಲೇಬೇಕಾದ ವೇಳೆಯಲ್ಲಿ ಹೇಳಲಾಗದಿದ್ದರೂ ಈ ಕುರಿತು ಇಬ್ಬರೂ ಪರಸ್ಪರ ಚರ್ಚಿಸಿ ಅನಾವಶ್ಯಕ ವದಂತಿ ಹಬ್ಬದಂತೆ ನೋಡಿಕೊಂಡರೆ ಒಳ್ಳೆಯದು. ನಿರ್ಮಾಪಕ ಹಾಗೂ ನಟ ಇಬ್ಬರೂ ಚಿತ್ರರಂಗದ ಆಸ್ತಿಗಳು ಎಂಬುದನ್ನು ಯಾರೂ ಮರೆಯಲಾರರು.

    <ul id="pagination-digg"><li class="previous"><a href="/news/18-challenging-star-darshan-mahadev-manu-chingari-aid0172.html">« Previous</a>

    English summary
    There is News spreading that Misunderstanding happened between Challenging Star Darshan and Chingari movie Producers, Mahadev and Manu Gowda. &#13; &#13;
    Tuesday, February 21, 2012, 17:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X