Don't Miss!
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- News ಮಳೆ.. ಮಳೆ.. ಅಲ್ಲಲ್ಲ ಮುಂದಿನ 1 ವಾರ ಬೆಂಗಳೂರಲ್ಲಿ ಭಾರಿ ಬಿಸಿಲು!
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿಂಗಾರಿ ಸಂತೋಷಕೂಟಕ್ಕೆ ನಿರ್ಮಾಪಕರೇಕೆ ಬಂದಿಲ್ಲ?
ಹಾಗಾದರೆ ನಿಜವಾಗಿ ನಡೆದಿದ್ದೇನು? ಚಿತ್ರವನ್ನು ಮಾರಾಟ ಮಾಡಿದ ಮೇಲೆ ಚಿತ್ರದ ಪ್ರಚಾರ ಕಾರ್ಯವನ್ನು ನಿರ್ಮಾಪಕರು ಹಾಗೂ ವಿತರಕರು ಹೇಗೆ ಮಾಡಬೇಕೆಂದು ಚರ್ಚಿಸಿದ್ದರು? ಅವರ ಮಧ್ಯೆ ಯಾಕೆ ಭಿನ್ನಾಭಿಪ್ರಾಯ ಬಂತು? ನಿರ್ಮಾಪಕರು ಹಾಗೂ ದರ್ಶನ್ ಮಧ್ಯೆ ಮನಸ್ತಾಪ ಬಂದಿದ್ದು ಯಾವಾಗ? ಚಿಂಗಾರಿಗೂ ಮೊದಲು ಮಹಾದೇವ್, ಮನು ನಿರ್ಮಿಸಿದ್ದ 'ಶಿಶಿರ' ಚಿತ್ರ ಬಾಕ್ಸಾ ಆಫೀಸ್ ನಲ್ಲಿ ಸೋತರೂ ಅವರ ಪ್ರಚಾರ ಕಾರ್ಯ ಇಡೀ ಚಿತ್ರರಂಗದ ಗಮನಸೆಳೆದಿತ್ತು. ಚಿಂಗಾರಿಯ ವಿಷಯದಲ್ಲಿಯೂ ಆಡಿಯೋ ಬಿಡುಗಡೆವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು. ನಂತರ ಹೀಗೇಕಾಯಿತು?
ದರ್ಶನ್ ಹಾಗು ಚಿಂಗಾರಿ ನಿರ್ಮಾಪಕ ನಡುವೆ ಮನಸ್ತಾಪ ನಡೆದಿದೆ ಎಂದರೆ ನಂಬಲಿಕ್ಕೆ ಸ್ವಲ್ಪ ಕಷ್ಟ. ಕಾರಣ ದರ್ಶನ್ ವೈಯಕ್ತಿಕ ಸಮಸ್ಯೆಯಿಂದ ಜೈಲಿನಲ್ಲಿದ್ದಾಗ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಕೇವಲ ಸಿನಿಮಾ ಪ್ರೀತಿಯಲ್ಲದೇ ದರ್ಶನ್ ಮೇಲಿನ ಪ್ರೀತಿಯೂ ಕಾರಣ ಎಂಬುದನ್ನು ಆಗ ಎಲ್ಲರೂ ಮಾತನಾಡುತ್ತಿದ್ದರು. ಈಗ ಇದ್ದಕ್ಕಿದ್ದಂತೆ ಇಬ್ಬರಲ್ಲಿ ಮನಸ್ತಾಪ ಯಾಕಾಗಿದೆ? ಈ ವಿಷಯವೀಗ ಯಾಕೆ ಪ್ರಚಾರ ಪಡೆಯುತ್ತಿದೆ?
ನಿರ್ಮಾಪಕರು ಹಾಗೂ ದರ್ಶನ್ ಇಬ್ಬರೂ ಮನಸ್ತಾಪ ಆಗಿದ್ದು ನಿಜ ಎಂದಿದ್ದಾರೆ. ದರ್ಶನ್ ಹೇಳಿಕೆಗಳು ಮಾದ್ಯಮದಲ್ಲಿ ಸುದ್ದಿಯಾಗಿವೆ. ಆದರೆ ವಿತರಕ ಪ್ರಸಾದ್ ಹಾಗೂ ಚಿಂಗಾರಿ ನಿರ್ಮಾಪಕ ನಡುವಿನ ಬಾಂಧವ್ಯ ಚೆನ್ನಾಗಿಯೇ ಇದೆ ಎಂದು ಸ್ವತಃ ಮನು ಅವರೇ ಹೇಳಿದ್ದಾರೆ. ಆದರೆ ಸತ್ಯವೇನೆಂದು ಅವರಿಬ್ಬರಿಗೆ ಮಾತ್ರ ಗೊತ್ತು. ಹೇಳಲೇಬೇಕಾದ ವೇಳೆಯಲ್ಲಿ ಹೇಳಲಾಗದಿದ್ದರೂ ಈ ಕುರಿತು ಇಬ್ಬರೂ ಪರಸ್ಪರ ಚರ್ಚಿಸಿ ಅನಾವಶ್ಯಕ ವದಂತಿ ಹಬ್ಬದಂತೆ ನೋಡಿಕೊಂಡರೆ ಒಳ್ಳೆಯದು. ನಿರ್ಮಾಪಕ ಹಾಗೂ ನಟ ಇಬ್ಬರೂ ಚಿತ್ರರಂಗದ ಆಸ್ತಿಗಳು ಎಂಬುದನ್ನು ಯಾರೂ ಮರೆಯಲಾರರು.