Don't Miss!
- News Bank Holidays in April: ಏಪ್ರಿಲ್ನಲ್ಲಿ 14 ದಿನಗಳ ಕಾಲ ಬ್ಯಾಂಕ್ ರಜೆ, ಪಟ್ಟಿ ಇಲ್ಲಿದೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಚಿತ್ರರಂಗಕ್ಕೆ ಗ್ರಹಣ ಹಿಡಿದಿದೆ: ದ್ವಾರಕೀಶ್
ದ್ವಾರಕೀಶ್ ಅವರು ಮಾತನಾಡುತ್ತಾ, ನಾವು ಒಬ್ಬೊಬ್ಬರೆ ಕಲಾವಿದರನ್ನು ಕಳೆದುಕೊಳ್ಳುತ್ತಿದ್ದೇವೆ. ಇನ್ನೂ ವಿಷ್ಣುವರ್ಧನ್ ಅವರ ಸಾವಿನ ನೋವಿನಿಂದ ಹೊರಬಂದಿಲ್ಲ. ಆಗಲೇ ಅಶ್ವತ್ಥ್ ಅವರ ಸಾವಿನ ಸುದ್ದಿ ಕನ್ನಡ ಚಿತ್ರರಂಗವನ್ನು ದಿಗ್ಭ್ರಾಂತರನ್ನಾಗಿ ಮಾಡಿದೆ. ಕನ್ನಡ ಚಿತ್ರರಂಗಕ್ಕೆ ಎಂತಹದೋ ಗ್ರಹಣ ಹಿಡಿದಿದೆ ಎಂದು ನೋವು ವ್ಯಕ್ತಪಡಿಸಿದರು.
ಮೇರುನಟ ಅಶ್ವಥ್ ಚಿತ್ರಸಂಪುಟ
ತಮ್ಮದೇ ಆದ ಶಿಸ್ತನ್ನು ಅಶ್ವತ್ಥ್ ಅವರು ಮೈಗೂಡಿಸಿಕೊಂಡಿದ್ದರು. ಯಾವುದೇ ದೊಡ್ಡಸ್ಥಿಕೆಗೆ ತಲೆಬಾಗದೆ ತನ್ನದೇ ಆದ ಜೀವನ ವಿಧಾನವನ್ನು ಅನುಸರಿಸುತ್ತಿದ್ದಂತಹ ಹಿರಿಯ ಕಲಾವಿದ. ಅಶ್ವತ್ಥ್ ಅವರ ಪಾತ್ರವನ್ನು ತುಂಬುವ ಮತ್ತೊಬ್ಬ ಕಲಾವಿದನಿಲ್ಲ. ಕನ್ನಡ ಚಿತ್ರರಂಗಕ್ಕೆ ಇಂತಹ ನಟರು ಬೇಕು ಎಂದು ದ್ವಾರಕೀಶ್ ಕಣ್ಣೀರಾದರು.
ನಾಗಹಾವಿನ ಸ್ಟುಡೆಂಟ್ ಹೋದ ಮೇಲೆ ಅವರ ಹಿಂದೆಯೇ ಅವರ ಮೇಷ್ಟ್ರು ಹೊರಟು ಹೋದರು. ನಮ್ಮನ್ನು ದೂರ ಮಾಡಿ ಈಗ ಇಬ್ಬರೂ ಒಂದಾಗಿರುತ್ತಾರೆ ಎಂದು ದುಃಖಿತರಾದರು. ಎಷ್ಟೇ ದೊಡ್ಡವರಾದರೂ ಚಿಕ್ಕದಾಗಿ ಬಾಳುವುದನ್ನು ಕಲಿಸಿದ ಮಹಾನ್ ನಟ. ಅಶ್ವತ್ಥ್ ದೊಡ್ಡ ನಟರಾಗಿದ್ದಾಗಲೂ ಮೈಸೂರಿನಲ್ಲಿ ಜಟಕಾದಲ್ಲಿ ಓಡಾಡುತ್ತಿದ್ದರು. ಸರಳ, ಸಜ್ಜನ ವ್ಯಕ್ತಿ. ಅವರ ಆಶೀರ್ವಾದ ಸದಾ ಕನ್ನಡ ಚಿತ್ರರಂಗಕ್ಕೆ ಇರಲಿ ಎಂದು ಆಶಿಸುತ್ತೇನೆ ಎಂದು ದ್ವಾರಕೀಶ್ ಹೇಳಿದರು.