ಕೂರ್ಮಾವತಾರದಲ್ಲಿ ಗಿರೀಶ್ ಕಾಸರವಳ್ಳಿ ಬ್ಯುಸಿ

ಕಳೆದ ಆರು ದಶಕದಲ್ಲಿ ಆದಂತಹ ಬದಲಾವಣೆಗಳ ಸುತ್ತ ಕತೆ ಸುತ್ತುತ್ತದೆ. 1986ರಲ್ಲಿ ತೆರೆಕಂಡ 'ತಬರನ ಕಥೆ' ಚಿತ್ರವನ್ನು ನೆನಪಿಸುತ್ತದೆ. ಇಂದಿಗೂ ಗಾಂಧಿ ಎಷ್ಟು ಪ್ರಸ್ತುತ ಎಂಬುದನ್ನು ಕತೆಗೆ ಸೇರಿಸಿದ್ದೇನೆ. ಚಿತ್ರವನ್ನು ನೋಡಿದ ಪ್ರೇಕ್ಷಕರು ಆತ್ಮವಿಮರ್ಶೆಗೆ ಒಳಗಾಗುತ್ತಾರೆ ಎಂದಿದ್ದಾರೆ ಕಾಸರವಳ್ಳಿ.
ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣಕತೆ ಆಧಾರವಾಗಿ 'ತಬರನ ಕತೆ' ಚಿತ್ರ ತೆರೆಕಂಡಿತ್ತು. ಈ ಚಿತ್ರ ಪ್ರತಿಷ್ಠಿತ ಸ್ವರ್ಣ ಕಮಲ ಪ್ರಶಸ್ತಿಗೆ ಭಾಜನವಾಗಿತ್ತು. 'ಕೂರ್ಮಾವತಾರ' ಚಿತ್ರವನ್ನು ಬಸಂತಕುಮಾರ್ ಪಾಟೀಲ್ ನಿರ್ಮಿಸುತ್ತಿದ್ದಾರೆ. ಈ ಹಿಂದೆ ಇವರು 'ನಾಯಿ ನೆರಳು', 'ಕನಸೆಂಬ ಕುದುರೆಯನೇರಿ' ಚಿತ್ರಗಳನ್ನು ನಿರ್ಮಿಸಿದ್ದರು.
ಕಾಸರವಳ್ಳಿ ಅವರೊಂದಿಗೆ ಪಾಟೀಲ್ ನಿರ್ಮಿಸುತ್ತಿರುವ ಮೂರನೇ ಚಿತ್ರ ಇದಾಗಿದೆ. ಈಗಾಗಲೆ 15 ದಿನಗಳ ಚಿತ್ರೀಕರಣ ಮುಗಿದಿದ್ದು ಅಭಿನಯ ಶಾರದೆ ಜಯಂತಿ ಹಾಗೂ ಶಿಕಾರಿಪುರ ಕೃಷ್ಣಮೂರ್ತಿ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಎಚ್ ಜಿ ಸೋಮಶೇಖರ ರಾವ್, ಗೋವಾ ದತ್ತು, ವಿಕ್ರಂ ಸೂರಿ ಹಾಗೂ ರಶ್ಮಿ ಉಳಿದ ಪಾತ್ರಧಾರಿಗಳು. (ಒನ್ಇಂಡಿಯಾ ಕನ್ನಡ)


Click it and Unblock the Notifications











