Don't Miss!
- Technology ಸದ್ಯ ನೀವೇನಾದರೂ ಹೊಸ ರೆಡ್ಮಿ ಫೋನ್ ಖರೀದಿಸ್ತೀರಾ?..ಹಾಗಿದ್ರೆ, ಇಲ್ಲಿ ಗಮನಿಸಿ!
- News ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು: ಕಾರಣವೇನು?
- Lifestyle ದುಬೈ ಪ್ರವಾಹದ ವೈರಲ್ ವೀಡಿಯೋಗಳು: ಒಂದೊಂದು ದೃಶ್ಯವೂ ಬದುಕಿನ ಪಾಠ ಹೇಳುತ್ತೆ
- Finance Binance: ಫೈನ್ ಕಟ್ಟಿ ಭಾರತಕ್ಕೆ ಮರಳಿ ಬರಲಿದೆ ಕ್ರಿಫ್ಟೋಕರೆನ್ಸಿ ವಿನಿಮಯ ಕೇಂದ್ರ!
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜಕೀಯ ಎಂಟ್ರಿಗೆ ಈಡುಗಾಯಿ ಒಡೆದ ಕೆ ಮಂಜು
ತಾವು ರಾಜಕೀಯಕ್ಕೆ ಬರಲು ಬಲವಾದ ಕಾರಣ ಏನಾದರೂ ಇದೆಯೇ ಎಂದರೆ, ನನ್ನ ಆಸೆ ಬೇರೇನು ಇಲ್ಲ. ಜನಕ್ಕೆ ಒಳ್ಳೇದು ಮಾಡಬೇಕು. ನಾಗರೀಕರಿಗೆ ಸೇವೆ ಸಲ್ಲಿಸಬೇಕು ಎಂದಿದ್ದಾರೆ.
ಸಿನಿಮಾದಲ್ಲಿದ್ದುಕೊಂಡೇ ಮಾಡಬಹುದಲ್ಲಣ್ಣ ಎಂದರೆ. ಉತ್ತಮ ಸಿನಿಮಾಗಳನ್ನು ನಿರ್ಮಿಸುತ್ತೇನೆ. ಜೊತೆಗೆ ರಾಜಕೀಯದಲ್ಲೂ ಉತ್ತಮ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ನಮ್ಮ ತಂದೆಯವರು ಒಣ ಕೊಬ್ಬರಿ ಮಾರಾಟ ಮಾಡುತ್ತಿದ್ದರು. ಹಾಗಾಗಿ ಚಿತ್ರರಂಗ ನನ್ನನ್ನು ಕೊಬ್ರಿ ಮಂಜು ಎಂದು ಪ್ರೀತಿಯಿಂದ ಕರೆಯುತ್ತಿದೆ. ಕೊಬ್ಬರಿ ಕೀಳುವುದರ ಜೊತೆ ಜೊತೆಗೆ ಕನ್ನಡ ಚಿತ್ರಗಳನ್ನು ನೋಡುತ್ತಿದೆ. 1997ರಲ್ಲಿ ರು.2 ಲಕ್ಷ ಬಂಡವಾಳ ಹೂಡಿ 'ಅನುರಾಗ ಸ್ಪಂದನ' ಎಂಬ ಚಿತ್ರ ನಿರ್ಮಿಸಿದೆ.
ಅಲ್ಲಿಂದ ಶುರುವಾದ ನನ್ನ ಸಿನಿಮಾ ಪಯಣದಲ್ಲಿ ಇದುವರೆಗೂ 34 ಚಿತ್ರಗಳನ್ನು ನಿರ್ಮಿಸಿದ್ದೇನೆ. ಜ್ಯೋತಿಷ್ಯವನ್ನು ಬಲವಾಗಿ ನಂಬುವ ಮಂಜಣ್ಣನ ಭವಿಷ್ಯ ದೀಪಾವಳಿ ಹಬ್ಬದ ಬಳಿಕ ಬದಲಾಗಲಿದೆಯಂತೆ. ಇತ್ತೀಚೆಗೆ ತೆರೆಕಂಡ 'ಕಳ್ಳ ಮಳ್ಳ ಸುಳ್ಳ' ಚಿತ್ರ ಮಂಜಣ್ಣನ ಅಸಲಿಗೆ ಮೋಸ ಮಾಡಿಲ್ಲ. ಮಂಜಣ್ಣನಿಗೆ ನಾವು ನೀವು ಹೇಳಬೇಕಾದುದಿಷ್ಟೆ, ಗುಡ್ ಲಕ್... (ಒನ್ಇಂಡಿಯಾ ಕನ್ನಡ)