ನನ್ನ ಮೊದಲ ಹೆಜ್ಜೆಯ ಗುರುತು ಸೂರ್ಯಾಸ್ತ

By Staff

ದಟ್ಸ್ ಕನ್ನಡ ಓದುಗ ಮಿತ್ರರಿಗೆ ನನ್ನ ನಮಸ್ಕಾರಗಳು. ನಾನು ಯಾರೂಂತ ಗೊತ್ತಾಗಿಲ್ಲವೆ?...ಸರಿ ಬಿಡಿ ನಾನು ಕೂಡ ಆಗಾಗ ಡಟ್ಸ್ ಕನ್ನಡದಲ್ಲಿ ಲೇಖನಗಳನ್ನು ಬರೆಯುತ್ತಿರುವ ನಿಮ್ಮಗಳ ಗೆಳೆಯ ಕೆ. ಆರ್. ರವೀಂದ್ರ. ಸಿನಿಮಾ ಎಂಬ ಮೂರಕ್ಷರದ ಮಾಯೆಯ ಬೆನ್ನೇರಿ ನಾನು ಹೊರಟಿದ್ದು ಮೊದಲು ಗೀತ ರಚನೆಕಾರನಾಗಬೇಕೆಂದು. ಆನಂತರ ಆಯ್ಕೆ ಮಾಡಿಕೊಂಡಿದ್ದು ಕಥಾಲೋಕವನ್ನು...ಆದ್ರೂ ನಿರಾಶೆಯ ಕಾರ್ಮೋಡದ ಮಧ್ಯೆ ಗಾಂಧಿನಗರದಲ್ಲಿ ಅವಕಾಶ ಕೇಳುವ ಸಾಹಸವೇ ಬೇಡವೆಂದು ಸುಮ್ಮನಾದೆ.

*ಕೆ. ಆರ್. ರವೀಂದ್ರ

ಆದರೂ ಮನಸ್ಸಿನಲ್ಲಿ ಏನಾದ್ರೂ ಮಾಡಿ ತೋರಿಸಬೇಕೆಂಬ ತುಡಿತ ಮಾತ್ರ ಬಲವಾಗಿ ಕಾಡುತ್ತಲೇ ಇತ್ತು. ಹೊಸದರೆಡೆಗೆ ನೋಡುವ ಮನಸ್ತತ್ವದ ನಾನು ಕೊನೆಗೆ ಸಿದ್ದ ಮಾಡಿಕೊಂಡ ಕತೆಯೇ ಈ 'ಸೂರ್ಯಾಸ್ತ.' ಹಾಗಂತ ಇದು ಯಾವುದೇ ಕಮರ್ಷಿಯಲ್ ಸಿನಿಮಾ ಅಲ್ಲ. ಬದಲಾಗಿ ಇದೊಂದು ಕಲಾತ್ಮಕ ಸಿನಿಮಾ (ಕಿರುಚಿತ್ರ). ಇದು ಕೇವಲ ಎರೆಡೇ ಎರಡು ಅಪರಿಚಿತ ಪಾತ್ರಗಳ ಮಧ್ಯೆ ಒಂದು ಸೂರ್ಯಾಸ್ತದ ಸಮಯದಲ್ಲಿ ನಡೆಯುವ ಕತೆ. ಸಾಧಾರಣವಾಗಿ ಕಿರುಚಿತ್ರಗಳೆಂದರೆ ಸಾಮಾನ್ಯ ಪ್ರೇಕ್ಷಕನಿಗೆ ಜೀರ್ಣಕೊಳ್ಳಲು ಕಷ್ಟವೆಂಬ ವಾದ ಕೂಡ ಇದೆ. ಅದು ಎಷ್ಟರ ಮಟ್ಟಿಗೆ ಸರಿಯೋ ನನಗೆ ಗೊತ್ತಿಲ್ಲ. ನನ್ನ ಉದ್ದೇಶ ನಾನು ನನ್ನ ಚಿತ್ರದ ಮೂಲಕ ಆಸಿಡ್‌ದಾಳಿ, ಏಡ್ಸ್, ಸನಾತನ ಧರ್ಮದಲ್ಲಿನ ಮೌಲ್ಯಗಳು; ಈ ಮೂರು ವಿಚಾರಗಳನ್ನು ಒಂದೆ ಕಥಾವಸ್ತುವಿನ ಮೂಲಕ ಹೊರತರಲು ಯತ್ನಿಸುತ್ತಿದ್ದೇನೆ.

ಇಲ್ಲಿ ಆಸಿಡ್ ದಾಳಿಗೆ ಒಳಗಾದ ಮಹಿಳೆಯ ಜೊತೆಗೆ ಆ ಕುಟುಂಬಗಳ ಮೇಲೆ ಈ ದಾಳಿಯ ನಂತರ ಉಂಟಾಗುವ ತಲ್ಲಣಗಳೇ ಇಲ್ಲಿ ನಿರೂಪಣೆಗೆ ಆಯ್ಕೆ ಮಾಡಿಕೊಂಡಿರುವ ವಿಷಯ. ದಾಳಿಯ ನಂತರದ ದಿನಗಳಲ್ಲಿ ಆ ಕುಟುಂಬ ದಾಳಿಗೊಳದವರ ಬಗ್ಗೆ ತೋರಿಸಬೇಕಾದ ಕಾಳಜಿ, ಪದೇ ಪದೇ ಚಿಕ್ಸತೆಗಾಗಿ ನೀರಿನಂತೆ ಹಣವನ್ನು ವ್ಯಯಿಸಬೇಕಾದ ಅನಿವಾರ್ಯತೆ. ಇದರ ಜತೆಗೆ ನಿರಂತರವಾಗಿ ಕೋರ್ಟ್‌ಗಳಿಗೆ ಅಲೆಯಬೇಕಾದ ಒತ್ತಡದಲ್ಲಿ ದಾಳಿಗೊಳದವರ ಯಾತನೆ ಇದೇ ಅಂಶಗಳನ್ನು ನಾನು ಪ್ರಮುಖವಾಗಿ ಪ್ರಸ್ತಾಪಿಸಲು ಯತ್ನಿಸುತ್ತಿದ್ದೇನೆ. ಇದೇ ಸಮಯದಲ್ಲಿ ನನಗೆ ಆಸಿಡ್ ದಾಳಿಗೊಳಗಾದವರ ಕುರೂಪತೆಯನ್ನು ತೋರಿಸಿ ಪ್ರೇಕ್ಷಕರನ್ನು ಮೆಚ್ಚಿಸುವ ಇಚ್ಛೆಯಿಲ್ಲ. ಹೀಗಾಗಿ ಅವರ ಧ್ವನಿಯಾಗಿ ಒಂದು ಪಾತ್ರ ಎಲ್ಲವನ್ನು ಇಲ್ಲಿ ಹೇಳುತ್ತದೆ. ಸರಳವಾದ ಶೈಲಿ ತುಸು ಮನೋರಂಜನೆಯನ್ನು ಕೂಡ ಸೇರಿಸಿ (ಹಾಗಂತ ಅಶ್ಲೀಲತೆಯಲ್ಲ) ಸರಳವಾದ ಚಿತ್ರಕತೆಯ ಮೂಲಕ ಶ್ರೀಸಾಮಾನ್ಯನ ಮುಂದೆ ಸಮಾಜಮುಖಿಯಾದ ಸಮಸ್ಯೆಗಳನ್ನು ತೆರೆದಿಡುವ ಪ್ರಯತ್ನಕ್ಕೆ ಕೈಹಾಕಿದ್ದೇನೆ.

ಈಗಾಗಲೇ ಕತೆ, ಚಿತ್ರಕತೆ, ಸಂಭಾಷಣೆ ಮತ್ತು ಸಾಹಿತ್ಯವನ್ನು ಸಿದ್ದಪಡಿಸಿಕೊಂಡು ಮುಂದಿನ ತಿಂಗಳ ಮೊದಲನೆ ವಾರದಲ್ಲಿ ಚಿತ್ರಕರಣಕ್ಕೆ ಅಣಿಯಾಗಿದ್ದೇನೆ. ಈ ನನ್ನ ಪ್ರಯತ್ನದಲ್ಲಿ ಅರುಣಾಚಲೇಶ್ವರ ಪ್ರೋಡಕ್ಷನ್ಸ್‌ನ ಗೆಳೆಯ-ನಿರ್ಮಾಪಕ ರಾ. ಹರ್ಷ ಸಾಥ್ ನೀಡುತ್ತಿದ್ದಾರೆ. ಪ್ರಯೋಗಗಳೆಡೆಗೆ ಒಲವಿರುವ ಛಾಯಾಗ್ರಾಹಕ ಮೋಹನ್ ಅವರ ಛಾಯಾಗ್ರಹಣವಿದ್ದು, ಕಿಶೋರ್ ಎಂ. ನಾಡಿಗೇರ್ ಧ್ವನಿಯಲ್ಲಿ ಚಿತ್ರದ ಎರಡು ಹಾಡುಗಳು ಮೂಡಿಬಂದಿದೆ. ಇನ್ನು ಯುವ ಸಂಗೀತ ನಿರ್ದೇಶಕ ಅಸ್ಲಿ ಮೇಡೊಂನ್ಸಾರ ಸಂಗೀತವಿದ್ದು, ಸಾಣೆಹಳ್ಳಿ ರಂಗಪ್ರತಿಭೆ ತೇಜಸ್ವಿ ಮತ್ತು ಕಿರುತರೆಯ ಪ್ರತಿಭೆ ಪ್ರಿಯಾರೆಡ್ಡಿ ನನ್ನ ಭಾವನೆಗಳನ್ನು ಪಾತ್ರಗಳ ಮೂಲಕ ಅಭಿವ್ಯಕ್ತಗೊಳಿಸಲು ಅಣಿಯಾಗಿದ್ದಾರೆ. ಸಿನಿಮಾ ತಯಾರಾದ ನಂತರ ಮತ್ತೊಮ್ಮೆ ನಿಮ್ಮಗಳ ಜೊತೆಯಲ್ಲಿ ಇನ್ನಷ್ಟು ವಿಚಾರಗಳನ್ನು ಹಂಚಿಕೊಳ್ಳುವ ಬಯಕೆ ನನ್ನದಾಗಿದೆ. ಒಟ್ಟಿನಲ್ಲಿ ನಿಮ್ಮಗಳ ಕಡೆಯಿಂದ ಈ ಗೆಳೆಯನ ತಂಡಕ್ಕೊಂದು ಶುಭಹಾರೈಕೆ ಒಂದು ಇರಲಿ.

ಇದೂ ಓದಿ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X