ಶಾಲಾ ಬಾಲಕಿ ಅಮೂಲ್ಯ ಈಗ ಕಾಲೇಜು ಹುಡುಗಿ

ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಎರಡು ಹೊಸ ಮುಖಗಳನ್ನು ರತ್ನಜ ತೆರೆಗೆ ಪರಿಚಯಿಸಲಿದ್ದಾರೆ. ರತ್ನಜರ 'ನೆನಪಿರಲಿ' ಮತ್ತು 'ಹೊಂಗನಸು'ಚಿತ್ರಗಳಲ್ಲಿ ನಟಿಸಿದ ಪ್ರೇಮ್ ಕುಮಾರ್ ಹೆಸರಿಡದ ಚಿತ್ರದ ನಾಯಕ. ಈ ಹೊಸ ಚಿತ್ರ ಯಶಸ್ವಿಯಾಗುತ್ತದೆ ಎಂಬ ಭರವಸೆಯಲ್ಲಿ ನೆನಪಿರಲಿ ಪ್ರೇಮ್ ಮತ್ತು ರತ್ನಜ ಹೊಂಗನಸು ಕಾಣುತ್ತಿದ್ದಾರೆ.
ಅಮೂಲ್ಯ ನಟಿಸಿದ್ದ ಎರಡು ಚಿತ್ರಗಳಲ್ಲಿ ಒಂದು ಚಿತ್ರ ಮಾತ್ರ ಯಶಸ್ವಿಯಾಗಿತ್ತು. ಎಸ್.ನಾರಾಯಣ್ ರ ಮಗ ಪಂಕಜ್ ಜತೆ ನಟಿಸಿದ್ದ 'ಚೈತ್ರದ ಚಂದ್ರಮ' ಮಕಾಡೆ ಮಲಗಿತ್ತು. ಶಾಲಾ ರಜಾ ದಿನಗಳಲ್ಲಿ ಅಮೂಲ್ಯ ಈ ಎರಡು ಚಿತ್ರಗಳಲ್ಲಿ ನಟಿಸಿದ್ದರು. ಈಗ ನಟನೆಯಲ್ಲಿ ಮತ್ತಷ್ಟು ತೊಡಗಿಸಿಕೊಳ್ಳುವ ಕಾಲ ಕೂಡಿ ಬಂದಿರುವ ಕಾರಣ ತಮ್ಮ ಪಾತ್ರದ ಕಡೆಗೆ ಹೆಚ್ಚು ಗಮನ ಕೊಡಬಹುದು.
(ದಟ್ಸ್ ಕನ್ನಡ ಚಿತ್ರವಾರ್ತೆ)
ರಂಗು, ರಂಗಿನ ಚೆಲುವಿನ ಚಿತ್ತಾರ...
ದುನಿಯಾ ವಿಜಯ್ ಮೇಲೆ ಎಸ್.ನಾರಾಯಣ್ ಕಿಡಿ!
ಎಸ್.ನಾರಾಯಣ್ ಮನೆಗೆ ವಿಜಯ್ ಅಭಿಮಾನಿಗಳ ಕಲ್ಲು
More from Filmibeat
ಕನ್ನಡ ಸಿನಿಮಾ kannada movies s narayan ಎಸ್ನಾರಾಯಣ್ ನೆನಪಿರಲಿ ಪ್ರೇಮ್ ಅಮೂಲ್ಯ ಚೆಲುವಿನ ಚಿತ್ತಾರ ಚೈತ್ರದ ಚಂದ್ರಮ ರತ್ನಜ ammoolya cheluvina chittara chaitradha chandrama ratnaja prem kumar


Click it and Unblock the Notifications











