Don't Miss!
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Finance ತನ್ನ ಯುಪಿಐ ಬಳಕೆದಾರರನ್ನು ನಾಲ್ಕು ಬ್ಯಾಂಕ್ಗಳಿಗೆ ವರ್ಗಾಯಿಸುವ ಪ್ರಕ್ರಿಯೆ ಆರಂಭಿಸಿದ Paytm
- Sports ಟಿ20 ವಿಶ್ವಕಪ್ 2024: ಟೀಮ್ ಇಂಡಿಯಾಗೆ ದೊಡ್ಡ ಚಿಂತೆಯಾದ ಈ ಆರಂಭಿಕನ ಫಾರ್ಮ್
- Technology iPhone: ಐಫೋನ್ 16 ಸರಣಿಯ ಕ್ಯಾಮೆರಾ ಫೀಚರ್ಸ್ ಲೀಕ್! ಏನೆಲ್ಲಾ ವಿಶೇಷತೆ ಇವೆ?..
- News Tamarind Fruit Juice: ಬಾಯಾರಿಕೆ ನೀಗಿಸಲು ಹುಣಸೆ ಹಣ್ಣಿನ ಪಾನಕ ಪರಿಚಯಿಸಿದ ಆಯುಷ್ ಇಲಾಖೆ, ಮಾಡುವುದು ಹೇಗೆ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರೌಡಿಗಳಿಗೆ ಮಣ್ಣು ಮುಕ್ಕಿಸಿದ ದುನಿಯಾ ವಿಜಯ್!
ಮೈಸೂರಿನ ಲಲಿತ ಮಹಲ್ ಅರಮನೆ ಹೆಲಿಪ್ಯಾಡ್ ನಲ್ಲಿ ದುನಿಯಾ ವಿಜಯ್ ಹಾಗೂ ರೌಡಿಗಳ ನಡುವೆ ಮಾರಾಮಾರಿ. ಆದರೆ ರೌಡಿಗಳಿಗೆ ಮಣ್ಣು ಮುಕ್ಕಿಸುವಲ್ಲಿ ದುನಿಯಾ ವಿಜಯ್ ಕಡೆಗೂ ಯಶಸ್ವಿಯಾಗುತ್ತಾರೆ. ಈ ಸಾಹಸ ಸನ್ನಿವೇಶದ ಚಿತ್ರೀಕರಣವನ್ನು 'ಕಂಠೀರವ' ಚಿತ್ರಕ್ಕಾಗಿ ಮೈಸೂರಿನಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.
ಕಳೆದ ಒಂದು ತಿಂಗಳಿಂದ ಮೈಸೂರಿನಲ್ಲಿ 'ಕಂಠೀರವ' ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ದೇವರಿಗೆ ಸಮರ್ಪಿಸಲು ಚಿನ್ನದ ಕಿರೀಟವನ್ನು ನಟರಾದ ಶ್ರೀನಿವಾಸಮೂರ್ತಿ, ರೇಖಾ, ಸಂಗೀತಾ ಮತ್ತು ವಿಜಯಕಾಶಿ ತೆಗೆದುಕೊಂಡು ಹೋಗುತ್ತಿರುತ್ತಾರೆ. ರೌಡಿಗಳ ಗುಂಪೊಂದು ದಾಳಿ ಮಾಡುತ್ತದೆ. ಆಗ ದುನಿಯಾ ವಿಜಯ್ ಬಂದು ರೌಡಿಗಳನ್ನು ಬೆಂಡೆತ್ತುವ ಸನ್ನಿವೇಶವನ್ನು ಚಿತ್ರೀಕಸಿಕೊಂಡಿದ್ದಾಗಿ ನಿರ್ದೇಶಕ ತುಷಾರ್ ರಂಗನಾಥ್ ತಿಳಿಸಿದ್ದಾರೆ.
ಸುದೀರ್ಘವಾದ ಈ ಸಾಹಸ ಸನ್ನಿವೇಶದ ಚಿತ್ರೀಕರಣದ ಬಳಿಕ ದುನಿಯಾ ವಿಜಯ್ ಸಹ ಸುಸ್ತಾದಂತೆ ಕಾಣುತ್ತಿದ್ದರು. ಬಳಿಕ ಅವರು ಮರದ ನೆರಳನ್ನು ಆಶ್ರಯಿಸಿ ಕೊಂಚ ಕಾಲ ವಿರಮಿಸಿಕೊಂಡರು. ರಾಮು ಎಂಟರ್ ಪ್ರೈಸಸ್ ನಿರ್ಮಾಣದ ಮತ್ತೊಂದು ಅದ್ದೂರಿ ಚಿತ್ರ ಕಂಠೀರವ. ರಿಶಿಕಾ ಸಿಂಗ್ ಮತ್ತು ಶುಭಾ ಪೂಂಜಾ ಚಿತ್ರದ ತಾರಾಬಳಗದಲ್ಲಿದ್ದಾರೆ.