ಡಾ.ರಾಜ್ ಕಪ್ ಬೆಂಗ್ಳೂರಿಂದ ದಾವಣಗೆರೆಗೆ ಶಿಫ್ಟ್
ಕನ್ನಡ ಚಿತ್ರರಂಗದ ನೃತ್ಯ ಕಲಾವಿದರ ಸಹಾಯಾರ್ಥ ಬೆಂಗಳೂರಿನಲ್ಲಿ ನಡೆಯಬೇಕಾಗಿದ್ದ "ಡಾ.ರಾಜ್ ಟ್ವೆಂಟಿ-20" ಕ್ರಿಕೆಟ್ ಪಂದ್ಯಾವಳಿ ದಾವಣಗೆರೆಗೆ ಸ್ಥಳಾಂತರವಾಗಿದೆ. ಕಿಚ್ಚ ಸುದೀಪ್ ಅವರ ಸಲಹೆ ಮೇರೆಗೆ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ದಾವಣಗೆರೆ ಕರ್ನಾಟಕದ ಕೇಂದ್ರ ಬಿಂದು. ದಾನಿಗಳ ತವರೂರು. ಅಲ್ಲೆ ಪಂದ್ಯ ನಡೆಸಿದರೆ ಉತ್ತಮ ಎಂಬುದು ಸುದೀಪ್ ಸಲಹೆ. ಹಾಗಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಡಾ ರಾಜ್ ಕಪ್ ದಾವಣಗೆರೆಗೆ ಸ್ಥಳಾಂತರವಾಗಿದೆ. ತಾರೆಗಳ ರಂಗಿನಾಟಕೆ ದಾವಣಗೆರೆ ಸಜ್ಜಾಗಿದೆ.
"ಡಾ.ರಾಜ್ ಕಪ್" ಗಾಗಿ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಜು.23 ರಿಂದ 25ರವರೆಗೆ ಕನ್ನಡ ಚಿತ್ರರಂಗದ ತಾರೆಗಳ ನಡುವೆ ಸೆಣೆಸಾಟ ನಡೆಯಲಿದೆ. ಆರಂಭದಲ್ಲಿ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳನ್ನು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಈ ವಿಚಾರವನ್ನು ಅಂತಿಮ ಕ್ಷಣದಲ್ಲಿ ಕೈಬಿಡಲಾಗಿದೆ. ಟಿಕೆಟ್ ದರ ರು.100 ನಿಗದಿಪಡಿಸಲಾಗಿದೆ. ಟಿಕೆಟ್ ಗಳು ಜಿಲ್ಲಾ ಕ್ರೀಡಾಂಗಣದಲ್ಲಿ ದೊರೆಯಲಿವೆ.
More from Filmibeat
ಡಾರಾಜ್ ಕಪ್ ಸುದೀಪ್ ದಾವಣಗೆರೆ ಕನ್ನಡ ಸಿನಿ ತಾರೆಗಳ ಕ್ರಿಕೆಟ್ ಕ್ರಿಕೆಟ್ ಕರ್ನಾಟಕ ನೃತ್ಯ ನಿರ್ದೇಶಕರ ಸಂಘ ಕ್ರೇಜಿ ಸ್ಟಾರ್ ದರ್ಶನ್ dr rajkumar sandalwood t20 cricket sudeep t20 kannada film stars cricket


Click it and Unblock the Notifications











