ಡಾ.ರಾಜ್ ಕಪ್ ಬೆಂಗ್ಳೂರಿಂದ ದಾವಣಗೆರೆಗೆ ಶಿಫ್ಟ್

By Rajendra

ಕನ್ನಡ ಚಿತ್ರರಂಗದ ನೃತ್ಯ ಕಲಾವಿದರ ಸಹಾಯಾರ್ಥ ಬೆಂಗಳೂರಿನಲ್ಲಿ ನಡೆಯಬೇಕಾಗಿದ್ದ "ಡಾ.ರಾಜ್ ಟ್ವೆಂಟಿ-20" ಕ್ರಿಕೆಟ್ ಪಂದ್ಯಾವಳಿ ದಾವಣಗೆರೆಗೆ ಸ್ಥಳಾಂತರವಾಗಿದೆ. ಕಿಚ್ಚ ಸುದೀಪ್ ಅವರ ಸಲಹೆ ಮೇರೆಗೆ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ದಾವಣಗೆರೆ ಕರ್ನಾಟಕದ ಕೇಂದ್ರ ಬಿಂದು. ದಾನಿಗಳ ತವರೂರು. ಅಲ್ಲೆ ಪಂದ್ಯ ನಡೆಸಿದರೆ ಉತ್ತಮ ಎಂಬುದು ಸುದೀಪ್ ಸಲಹೆ. ಹಾಗಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಡಾ ರಾಜ್ ಕಪ್ ದಾವಣಗೆರೆಗೆ ಸ್ಥಳಾಂತರವಾಗಿದೆ. ತಾರೆಗಳ ರಂಗಿನಾಟಕೆ ದಾವಣಗೆರೆ ಸಜ್ಜಾಗಿದೆ.

"ಡಾ.ರಾಜ್ ಕಪ್" ಗಾಗಿ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಜು.23 ರಿಂದ 25ರವರೆಗೆ ಕನ್ನಡ ಚಿತ್ರರಂಗದ ತಾರೆಗಳ ನಡುವೆ ಸೆಣೆಸಾಟ ನಡೆಯಲಿದೆ. ಆರಂಭದಲ್ಲಿ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳನ್ನು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಈ ವಿಚಾರವನ್ನು ಅಂತಿಮ ಕ್ಷಣದಲ್ಲಿ ಕೈಬಿಡಲಾಗಿದೆ. ಟಿಕೆಟ್ ದರ ರು.100 ನಿಗದಿಪಡಿಸಲಾಗಿದೆ. ಟಿಕೆಟ್ ಗಳು ಜಿಲ್ಲಾ ಕ್ರೀಡಾಂಗಣದಲ್ಲಿ ದೊರೆಯಲಿವೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X