Just In
Don't Miss!
- News
20,000 ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ HCL
- Automobiles
ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ತರಲು ಪ್ರಧಾನಿ ನೇತೃತ್ವದ ಸಭೆಯಲ್ಲಿ ಮಹತ್ವದ ನಿರ್ಣಯ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಎಫ್ಸಿ vs ಕೇರಳ ಬ್ಲಾಸ್ಟರ್ಸ್, Live ಸ್ಕೋರ್
- Lifestyle
ಕುಂಭ ಮೇಳ ಪ್ರಾರಂಭ: ಕುಂಭ ಮೇಳ ವಿಶೇಷತೆ ಹಾಗೂ ಎಷ್ಟು ದಿನ ಇರುತ್ತದೆ?
- Education
BECIL Recruitment 2021: 11 ರೇಡಿಯೋಗ್ರಾಫರ್ ಅಥವಾ ಎಕ್ಸ್-ರೇ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಅಳಲು ಕೇಳುವವರಾರು
ಖಾಸಗಿ ಟಿವಿ ವಾಹಿನಿಯ ಸಂದರ್ಶನದಲ್ಲಿ ಬೇಸರ ವ್ಯಕ್ತ ಪಡಿಸಿದ ರಾಮು, ಕಳೆದ 20 ವರ್ಷಗಳಿಂದ "ಕಣಗಾಲ್ ನೃತ್ಯಾಲಯ" ಎನ್ನುವ ಹೆಸರಿನಲ್ಲಿ ನಾಟ್ಯ ಶಾಲೆ ನಡೆಸುತ್ತಿದ್ದಾರೆ. ಮದರಾಸಿನಲ್ಲಿ ಓದಿ ಬೆಳೆದಿದ್ದ ನನಗೆ ತಂದೆ ಶಿಸ್ತು ಮತ್ತು ಗೌರವಯುತವಾಗಿ ಬದುಕಲು ಹೇಳಿ ಕೊಟ್ಟಿದ್ದರು. ಅವರು ಹಾಕಿ ಕೊಟ್ಟ ಗೆರೆಯಲ್ಲೇ ಇಂದು ನಾವು ಬಾಳುತ್ತಿದ್ದೇವೆ. ನಮ್ಮ ತಂದೆಗೆ ಅಭಿಮಾನಿಗಳಿದ್ದಾರೆ. ಈಗಲೂ ಅಭಿಮಾನಿಗಳು ನನ್ನಲ್ಲಿ ನನ್ನ ತಂದೆಯನ್ನು ಕಾಣುತ್ತಾರೆ. ಆದರೆ ಚಿತ್ರೋದ್ಯಮದವರಲ್ಲ ಎಂದು ಅಳಲು ವ್ಯಕ್ತ ಪಡಿಸಿದ್ದಾರೆ.
ಪುಟ್ಟಣ್ಣ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಶಿಷ್ಟಾಚಾರಕ್ಕಾದರೂ ಪುಟ್ಟಣ್ಣ ಕುಡಿಗಳಾದ ನಮಗೆ ಆಹ್ವಾನ ನೀಡುವುದಿಲ್ಲ. ಚಿತ್ರರಂಗ 75 ವರ್ಷದ ಸಂಭ್ರಮದಲ್ಲಿ ಈ ರಾಜ್ಯ ಕಂಡ ಯಶಸ್ವೀ ನಿರ್ದೇಶಕ ಪುಟ್ಟಣ್ಣ ಅವರ ಕುಟುಂಬದವರಾದ ನಮಗೆ ಆಹ್ವಾನ ಪತ್ರಿಕೆ ಕಳುಹಿಸುವ ಸೌಜನ್ಯತೆ ಈ ಚಿತ್ರರಂಗದವರಿಗಿಲ್ಲ. ಮಾತು ಮಾತಿಗೆ ನಾವು ಪುಟ್ಟಣ್ಣ ಶಿಷ್ಯರೆಂದು ಹೇಳುತ್ತಾರೆಯೆ ಹೊರತು ಅವರಿಗೆ ನಮ್ಮ ತಂದೆಯ ಮೇಲೆ ಗೌರವವಿಲ್ಲ ಎಂದು ರಾಮು ಬೇಸರ ವ್ಯಕ್ತ ಪಡಿಸಿದ್ದಾರೆ.
ನಮ್ಮ ತಂದೆ ಶಕ್ತಿ ದೇವತೆಯ ಆರಾಧಕರು. ಅವರ ಚಿತ್ರದಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ಇರುತ್ತಿತ್ತು. ಇತ್ತೇಚೆಗೆ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ನಮ್ಮ ತಂದೆಯ ಒಂದು ಭಾವಚಿತ್ರದ ಸುಳಿವೇ ಇಲ್ಲ. ನನ್ನ ತಂದೆ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ನಗಣ್ಯವೆ? ಮಾತನಾಡಲು ಹೋದರೆ ಸರಿಯಾಗಿ ಮಾತನಾಡದೇ ಕಳುಹಿಸುತ್ತಾರೆ. ಅಭಿಮಾನಿಗಳಿಗೆ ಇರುವ ಪ್ರೀತಿ ವಿಶ್ವಾಸ ಈ ನಮ್ಮ ಉದ್ಯಮದವರಿಗಿಲ್ಲ ಎನ್ನುವ ನೋವು ನಮ್ಮ ಕುಟುಂಬದವರನ್ನು ಕಾಡುತ್ತಿದೆ ಎಂದು ರಾಮು ಕಣಗಾಲ್ ಬೇಸರ ವ್ಯಕ್ತ ಪಡಿಸಿದ್ದಾರೆ. (ದಟ್ಸ್ಕನ್ನಡ ಸಿನಿವಾರ್ತೆ)