Just In
- 6 hrs ago
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- 6 hrs ago
Bigg Boss Tamil 4: ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೇ ವಿಜೇತ!
- 7 hrs ago
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- 9 hrs ago
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
Don't Miss!
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Automobiles
ಅನಾವರಣವಾಯ್ತು 2021ರ ಎಪ್ರಿಲಿಯಾ ಆರ್ಎಸ್ವಿ4 ಬೈಕುಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಾಜಕೀಯ ಎಂಟ್ರಿ ಬಗ್ಗೆ ಮೌನ ಮುರಿದ ಉಪೇಂದ್ರ
'ಸೂಪರ್' ಚಿತ್ರದಲ್ಲಿ ಮುಖ್ಯಮಂತ್ರಿಯಾಗಿ ಅವತರಿಸಿದ್ದ ಉಪೇಂದ್ರ ನಿಜ ಅವತಾರದಲ್ಲಿ ರಾಜಕೀಯಕ್ಕೆ ಎಂಟ್ರಿಯಾಗಲು ಇನ್ನೂ ಸಮಯ ಪಕ್ವವಾಗಿಲ್ಲ ಎಂದಿದ್ದಾರೆ. ತನ್ನ ಕಮಿಟ್ಮೆಂಟ್ ಮುಗಿದ ಮೇಲೆ ರಾಜಕೀಯದ ಬಗ್ಗೆ ನೋಡೋಣ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದಾರೆ.
ಯಾವುದೇ ವ್ಯಕ್ತಿ ರಾಜಕೀಯ ಸೇರುವ ಮುಂಚೆ ಆತನಿಗೆ ನಿರ್ದಿಷ್ಟವಾದ ಪ್ಲಾನ್ ಅಗತ್ಯ. ಜನರಿಗೆ ಒಳ್ಳೇದು ಮಾಡಬೇಕು ಎನ್ನುವುದು ಆತನ ಮುಖ್ಯ ಗುರಿಯಾಗಿರಬೇಕು. ಸುಳ್ಳು ಆಶ್ವಾಸನೆ ನೀಡಿ ಓಟು ಗಿಟ್ಟಿಸುವುದು ಈಗಿನ ರಾಜಕೀಯದ ಸ್ಟೈಲ್. ಟಿವಿ ಕೊಡ್ತೀವಿ, ಲ್ಯಾಪ್ ಟಾಪ್ ಕೊಡ್ತೀವಿ ಎಂದು ಚುನಾವಣೆಯ ಸಮಯದಲ್ಲಿ ಜನರಿಗೆ ಭರವಸೆ ನೀಡಿ ವೋಟ್ ಗಿಟ್ಟಿಸುವುದಷ್ಟೇ ಈಗಿನ ರಾಜಕೀಯ ತಂತ್ರ ಎಂದು ಉಪೇಂದ್ರ ಡೈಲಾಗ್ ಹೊಡೆದಿದ್ದಾರೆ.
ಎಲ್ಲರಿಗಿಂತ ಮಿಗಿಲಾದದ್ದು ದೇವ್ರು. ಅವನೇ ಇಡೀ ಜಗತ್ತಿಗೆ ದೊಡ್ಡ ಅಡ್ಮಿನಿಸ್ಟ್ರೆಟರ್. ಅವನೇ ಸೂಪರ್ ಪವರ್. ಅವನ ಮುಂದೆ ಯಾವುದೂ ಇಲ್ಲ. ರಾಜಕೀಯದಲ್ಲಿ ಎಲ್ಲರೂ ಭ್ರಷ್ಟರೆಂದು ಹೇಳಲಾಗದು. ಒಳ್ಳೆಯವರೂ ಇದ್ದಾರೆ. ಅಮೆರಿಕಾದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ತಾನು ಅಧಿಕಾರಕ್ಕೆ ಬಂದರೆ ದೇಶವನ್ನು ಬದಲಾವಣೆಯ ಹಾದಿಯಲ್ಲಿ ಮುನ್ನಡೆಸಲು ತಮ್ಮ ದೂರಾಲೋಚನೆ ಏನೆನ್ನುವುದನ್ನು ಜನರ ಮುಂದಿಡುತ್ತಾರೆ. ಜನ ಅದನ್ನೆಲ್ಲಾ ಗಮನಿಸಿ ವೋಟ್ ನೀಡುತ್ತಾರೆ ಎಂದು ಉಪ್ಪಿ ಟಿವಿ ಮಾಧ್ಯಮಗಳಲ್ಲಿ ಹೇಳಿದ್ದಾರೆ.
ಪಾಲಿಟಿಕ್ಸ್ ಸೇರುವ ಬಗ್ಗೆ ಈಗಲೇ ಏನನ್ನೂ ಹೇಳಲಾಗದು. ನನ್ನ ಈಗಿನ ವೃತ್ತಿ ಜೀವನದಲ್ಲಿ ಮಾಡಬೇಕಾದಂತ, ಮುಗಿಸ ಬೇಕಾದಂತ ಕೆಲಸಗಳು ಬಹಳಷ್ಟಿವೆ. ನೋಡೋಣ, ಏನೇನು ಆಗಬೇಕೆಂದು ದೇವರ ಇಚ್ಛೆ ಇದೆಯೋ ಹಾಗೆ ಆಗಲಿ ಎಂದು ಪಕ್ಕಾ ಸಿನಿಮಾ ಡೈಲಾಗ್ ಹೊಡಿದಿದ್ದಾರೆ.
ಉಪ್ಪಿಗೇನೋ ರಾಜಕೀಯಕ್ಕೆ ಎಂಟ್ರಿ ಕೊಡಬೇಕೆಂದು ಬೆಟ್ಟದಷ್ಟು ಆಸೆ ಇದೆ. ಆದರೆ ಅವರ ಧರ್ಮಪತ್ನಿ ಪ್ರಿಯಾಂಕಾ ಅವರಿಗೆ ಉಪ್ಪಿ ರಾಜಕೀಯಕ್ಕೆ ಬರುವುದು ಇಷ್ಟವಿಲ್ಲ. ತಮ್ಮ ಪತಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವುದು ತಮಗೆ ಅಷ್ಟಾಗಿ ಒಪ್ಪಿಗೆ ಇಲ್ಲ ಎಂದಿದ್ದಾರೆ. ಮನೆಯಲ್ಲಿ ಗ್ರೀನ್ ಸಿಗ್ನಲ್ ಸಿಗಲಿಲ್ಲ ಎಂದರೆ ಉಪ್ಪಿ ರಾಜಕೀಯ ಎಂಟ್ರಿ ಕೊಂಚ ಕಷ್ಟಾನೆ. (ದಟ್ಸ್ಕನ್ನಡ ಸಿನಿವಾರ್ತೆ)