Don't Miss!
- News Neha Hiremath: ನೇಹಾ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡಕ್ಕೆ ತಮಿಳಿನ ದಿಂಡಿಗಲ್ ಸಾರಥಿ ರೀಮೇಕ್
ಮೊದಲ ಸಿನಿಮಾ ಮಿಸ್ಟರ್ ಪೇಂಟರ್. ದಿನೇಶ್ ಬಾಬು ಈ ಚಿತ್ರದ ನಿರ್ದೇಶಕ. ಸಕಲೇಶಪುರದಲ್ಲಿ ಹತ್ತೇ ದಿನ ಚಿತ್ರೀಕರಣ ನಡೆಸಿ ಸಿನಿಮಾ ಮುಗಿಸಿಕೊಡುವುದು ದಿನೇಶ್ ಬಾಬು ಸಂಕಲ್ಪ. ಎಂಟು ದಿನ ರವಿಶಂಕರ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಾರೆ. ರಂಗಾಯಣ ರಘು, ತಾರಾ, ಶರಣ್, ಜೈಜಗದೀಶ್ ತಾರಾಗಣವಿದೆ. ಯೋಗೀಶ್ ಕೂಡ ಮಧ್ಯಂತರದ ನಂತರದ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
'ನಂಜನಗೂಡು ನಂಜುಂಡ', ರವಿಶಂಕರ್ ಸಹಿ ಹಾಕಿರುವ ಇನ್ನೊಂದು ಚಿತ್ರ. ಇದು ತಮಿಳಿನ ದಿಂಡಿಗಲ್ ಸಾರಥಿ ಸಿನಿಮಾದ ರೀಮೇಕ್. ಮೇ 10 ಅಥವಾ 15ರಿಂದ ಈ ಚಿತ್ರ ಸೆಟ್ಟೇರುವ ನಿರೀಕ್ಷೆ ಇದೆ. ಪ್ರಚಂಡ ರಾವಣ ನಿರ್ದೇಶಿಸಿದ್ದ ಶ್ರೀನಿವಾಸ ಪ್ರಸಾದ್ ಈ ಸಿನಿಮಾ ನಿರ್ದೇಶಕ. ನಂಜನಗೂಡಿನ ದೇವಸ್ಥಾನದ ಸುತ್ತಮುತ್ತಲೇ ಚಿತ್ರದ ಬಹುಪಾಲು ಚಿತ್ರೀಕರಣ ನಡೆಯಲಿದ್ದು, ನಾಯಕಿಗಾಗಿ ತಲಾಷು ನಡೆದಿದೆ. ಮೂಲ ಚಿತ್ರದ ನಾಯಕಿ ಕಾರ್ತಿಕಾ ಅವರೇ ಈ ಸಿನಿಮಾದಲ್ಲೂ ನಟಿಸಿದರೆ ಚೆನ್ನ ಎಂಬ ಕಾರಣಕ್ಕೆ ಅವರನ್ನು ಸಂಪರ್ಕಿಸುವ ಯತ್ನ ನಡೆದಿದೆ. ಆದರೆ ಇನ್ನೂ ಅವರು ಒಪ್ಪಿಲ್ಲ.
ಅದು ಸರಿ, ರವಿಶಂಕರ್ಗೆ ಒಂದಾದ ಮೇಲೊಂದರಂತೆ ಸಿನಿಮಾ ಸಿಗಲು ಕಾರಣವೇನು? ಅವರ ಮೊದಲ ಚಿತ್ರ ಪಯಣ 45 ಲಕ್ಷ ರೂ. ಲಾಭ ಮಾಡಿದೆಯಂತೆ. ಚಿತ್ರಮಂದಿರದಲ್ಲಿ ಜನ ನೋಡದೇ ಇದ್ದರೂ ಇಷ್ಟು ಲಾಭ ಮಾಡಿದ್ದು ಹೇಗೆ ಎಂಬುದು ಮಾತ್ರ ಗುಟ್ಟು. ನಿರ್ದೇಶಕ ಕಿರಣ್ ಗೋವಿ ಹಾಗೂ ರವಿಶಂಕರ್ ಹೀಗೆ ಹೇಳಿಕೊಂಡು ಗಾಂಧಿನಗರದಲ್ಲಿ ಓಡಾಡಿಕೊಂಡಿರುವುದಂತೂ ಸುಳ್ಳಲ್ಲ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಹಿರಿತೆರೆಯಲ್ಲಿ
ರವಿಶಂಕರ್
ಪಯಣ
ಹೀಗಿದೆ
ರಜನಿ
ಚಿತ್ರಕ್ಕೆ
ಮೈಸೂರಿನಲ್ಲಿ
ಅದ್ದೂರಿ
ಕ್ಲೈಮ್ಯಾಕ್ಸ್
ಜಸ್ಟ್
ಮಾತ್
ಮಾತಲ್ಲಿ
ಒಂದಾದ
ಸುದೀಪ್,
ರಮ್ಯಾ!
ರಾಕ್
ಲೈನ್
ಮಗ
ಮತ್ತು
ಮುನಿ
ಮಗಳ
ಮದುವೆ