Don't Miss!
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- News Kotak Mahindra Bank: ಕೋಟಕ್ ಮಹಿಂದ್ರಾ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಗ್ರಾಹಕರ ಮೇಲೆ ಪರಿಣಾಮಗಳೇನು?
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೆಲುಗು, ತಮಿಳು ಬಾಗಿಲು ತಟ್ಟಿದ ದೀಪಾ ಸನ್ನಿಧಿ
ಕನ್ನಡ ಚಿತ್ರರಂಗದಲ್ಲಿ ಕಂಪು ಬೀರುತ್ತಿರುವ ಮಲೆನಾಡ ಮಲ್ಲಿಗೆ ದೀಪಾ ಸನ್ನಿಧಿ ಈಗ ಆಂಧ್ರ ಹಾಗೂ ತಮಿಳುನಾಡಿನಲ್ಲೂ ಪರಿಮಳ ಬೀರಲು ಹೊರಟಿದ್ದಾರೆ. ಈಗಾಗಲೆ ಹೈದರಾಬಾದ್ ಹಾಗೂ ಚೆನ್ನೈಗೆ ಭೇಟಿ ನೀಡಿ ಅಲ್ಲಿನ ನಿರ್ಮಾಪಕರೊಂದಿಗೆ ಮಾತನಾಡಿಕೊಂಡು ಬಂದಿದ್ದಾರೆ. ಅಲ್ಲಿಂದ ಯಾವಾಗ ಕರೆ ಬರುತ್ತದೋ ಗೊತ್ತಿಲ್ಲ.
ಸದ್ಯಕ್ಕೆ ಅವರು ಕರೆಯ ನಿರೀಕ್ಷೆಯಲ್ಲಿದ್ದು ತೆಲುಗು, ತಮಿಳು ಚಿತ್ರಗಳಿಗೆ ಸಹಿ ಹಾಕುವ ಉತ್ಸಾಹದಲ್ಲಿದ್ದಾರೆ. ಇಷ್ಟಕ್ಕೂ ಆಕೆ ಪರಭಾಷಾ ಚಿತ್ರಗಳಿಗೆ ಜಿಗಿಯಲು ಕಾರಣ ಏನು? ಇಲ್ಲಿ ಅವಕಾಶಗಳಿಗೇನು ಆಕೆಗೆ ಬರವಿಲ್ಲ. ಆದರೆ ಅವಕಾಶಗಳನ್ನು ಇನ್ನಷ್ಟು ಬಾಚಿಕೊಳ್ಳುವ ಸಲುವಾಗಿ ತೆಲುಗು, ತಮಿಳು ಚಿತ್ರರಂಗದ ಬಾಗಿಲು ತಟ್ಟಿದ್ದಾರೆ ಅಷ್ಟೇ.
ದೀಪಾ ಅಭಿನಯದ ಎರಡು ಬಿಗ್ ಬಜೆಟ್ ಚಿತ್ರಗಳು ಬಾಕ್ಸಾಫೀಸಲ್ಲಿ ಸಕ್ಸಸ್ ಆಗಿದ್ದು ಗೊತ್ತೇ ಇದೆ. ಅವುಗಳಲ್ಲಿ ಪುನೀತ್ ಜೊತೆಗಿನ 'ಪರಮಾತ್ಮ' ಹಾಗೂ ದರ್ಶನ್ ಜೊತೆಗಿನ 'ಸಾರಥಿ' ಚಿತ್ರಗಳು. ಯಶ್ ಜೊತೆ 'ಜಾನೂ' ಮುಗಿಸಿದ ಬಳಿಕ ಇದೀಗ ಸುದೀಪ್ ಜೊತೆಗಿನ ಬಚ್ಚನ್ ಚಿತ್ರಕ್ಕೂ ದೀಪಾ ಆಯ್ಕೆಯಾಗಿದ್ದಾರೆ. ಒಟ್ಟಿನಲ್ಲಿ ಸ್ಯಾಂಡಲ್ವುಡ್ನಲ್ಲಿ 'ಲಕ್ಕಿ' ಸ್ಟಾರ್ ಎಂದು ಗುರುತಿಸಿಕೊಂಡಿದ್ದಾರೆ. (ಏಜೆನ್ಸೀಸ್)