twitter
    For Quick Alerts
    ALLOW NOTIFICATIONS  
    For Daily Alerts

    ಕಾವೇರಿದ ಜಟಾಪಟಿ; ಅಂಬರೀಷ್ ಸಂಧಾನಕ್ಕೆ ಸಜ್ಜು

    |

    Ambarish K Manju Munirathna
    ನಿರ್ಮಾಪಕರಾದ ಮಂಜು ಹಾಗೂ ಮುನಿರತ್ನ ಜಟಾಪಟಿ ಇನ್ನೂ ಮುಂದುವರಿಯುತ್ತಲೇ ಇದೆ. ಕಠಾರಿವೀರ ಹಾಗೂ ಗಾಡ್ ಫಾದರ್ ಈ ಎರಡು ಚಿತ್ರಗಳ ಬಿಡುಗಡೆ ವಿಷಯದಲ್ಲಿ ಎದ್ದಿರುವ ವಿವಾದಕ್ಕೆ ಹೊಸ ಹೊಸ ತಿರುವುಗಳೂ ಬಂದು ಸೇರಿಕೊಳ್ಳುತ್ತಿವೆ. ಸೂಪರ್ ಸ್ಟಾರ್ ಹಾಗೂ ಈ ಎರಡೂ ಚಿತ್ರಗಳ ನಾಯಕ ನಟ ಉಪೇಂದ್ರ ಮನೆಯಲ್ಲಿ ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಇಂದು ಪಿಲಂ ಚೇಂಬರರ್ ನಲ್ಲಿ ಸಭೆ ಕರೆಯಲಾಗಿತ್ತು.

    ಇಂದೂ ಸಂಧಾನ ವಿಫಲವಾದರೆ ಅಥವಾ ತಮ್ಮ ಪರವಾಗಿ ತೀರ್ಪು ಬಾರದಿದ್ದರೆ ತಾವು ಫಿಲಂ ಚೇಂಬರ್ ಮುಂದೆ ಧರಣಿ ಕುಳುತುಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದಾರೆ ಕೆ ಮಂಜು. ಅವರ ಬೆದರಿಕೆಯ ಪರಿಣಾಮವೋ ಏನೋ, ಸಂಧಾನ ಸಭೆ ಈಗ ಮುಂದೂಡಲ್ಪಟ್ಟಿದೆ. ನಾಳೆ 4 ಗಂಟೆಗೆ ಹಿರಿಯ ನಟ ಅಂಬರೀಷ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಲಾಗುವುದೆಂಬ ಮಾಹಿತಿ ಬಂದಿದೆ.

    ಈ ಮಧ್ಯೆ ಟಿವಿ ವಾಹಿನಿಯೊಂದರಲ್ಲಿ ತಮ್ಮ ಕುರಿತು ಕೆ ಮಂಜು 'ಚೇಲಾ' ಎಂದಿದ್ದಾರೆಂದೂ, ಅದಕ್ಕೆ ಮನನೊಂದು ತಾವು ರಾಜೀನಾಮೆ ನೀಡಿದ್ದಾಗಿಯೂ ಫಿಲಂ ಚೇಂಬರ್ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸೂರಪ್ಪ ಬಾಬು ಹೇಳಿದ್ದಾರೆ. ಆದರೆ ಅದಕ್ಕೆ ತಾವು ಹೊಣೆಗಾರರಲ್ಲ ಎಂದು ಮಂಜು ತಿರುಗೇಟು ನೀಡಿದ್ದಾರೆ. ಒಟ್ಟಿನಲ್ಲಿ ಮುಂದೇನಾಗುತ್ತೋ ಎನ್ನುವ ಕುತೂಹಲ ಎಲ್ಲರಲ್ಲಿದೆ. (ಒನ್ ಇಂಡಿಯಾ ಕನ್ನಡ)

    English summary
    Ambarish Leadership Reconciliation Meeting is to Solve producers K Manju and Munirthna Controversy, Tomorrow on 24th April 2012. 
 
    Monday, April 23, 2012, 15:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X