ಭಾರತೀಯ ಪನೋರಮಾಕ್ಕೆ ಸಿನಿಮಾ ಬೆಟ್ಟದ ಜೀವ

ಮುಂದಿನ ತಿಂಗಳು ನವೆಂಬರ್ 23 ರಿಂದ ಗೋವಾದ ಪಣಜಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರ ಪ್ರದರ್ಶನವಾಗಲಿದೆ. ಈ ವರ್ಷ ಕೇವಲ 'ಬೆಟ್ಟದ ಜೀವ' ಚಿತ್ರ ಮಾತ್ರ ಆಯ್ಕೆ ಆಗಿದೆ. ಕಳೆದ ವರ್ಷ ನಾಲ್ಕು ಕನ್ನಡ ಚಿತ್ರಗಳು ಪನೋರಮಾಕ್ಕೆ ಆಯ್ಕೆ ಆಗಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಕಾದಂಬರಿ 'ಬೆಟ್ಟದ ಜೀವ' ಈ ಚಿತ್ರಕ್ಕೆ ಆಧಾರ ಸ್ಥಂಭ. ದತ್ತಣ್ಣ, ಸುಚೇಂದ್ರ ಪ್ರಸಾದ್ ಹಾಗೂ ಲಕ್ಷ್ಮೀ ಹೆಗಡೆ ತಾರಾಗಣದಲ್ಲಿರುವ ಪ್ರಮುಖರು. ಮನಮುಟ್ಟುವ ನಿರೂಪಣೆ ಮತ್ತು ಅಭಿನಯವೇ ಈ ಚಿತ್ರದ ಜೀವಾಳ. ಇದೀಗ ಪನೋರಮಾಕ್ಕೆ ಆಯ್ಕೆ, ಕನ್ನಡಕ್ಕೆ ಕಾಣಿಕೆ.
ಸ್ಪರ್ಧೆಯಲ್ಲಿದ್ದ ಒಟ್ಟೂ ಚಿತ್ರಗಳು 118. ಅವುಗಳಲ್ಲಿ ಪನೋರಮಾಕ್ಕೆ ಆಯ್ಕೆಯಾದ ಭಾರತೀಯ ಚಿತ್ರಗಳು 23. ಕನ್ನಡ ಚಿತ್ರ ಪಿ. ಶೇಷಾದ್ರಿಯ ಬೆಟ್ಟದ ಜೀವ ಮಾತ್ರ. ಯಾಕೆ ಹೀಗೆ ಎಂಬ ಯಕ್ಷ ಪ್ರಶ್ನೆಗೆ 'ಎಲ್ಲ ವರ್ಷವೂ 2010 ಅಲ್ಲ' ಎಂಬ ಉತ್ತರ ಕಲಾತ್ಮಕ ಚಿತ್ರಗಳ ನಿರ್ಮಾಪಕ, ನಿರ್ದೇಶಕರಿಂದ ಬಂದರೆ ಆಶ್ಚರ್ಯವಿಲ್ಲ!


Click it and Unblock the Notifications











