ಬೆಳ್ಳಿಪರದೆಗೆ ಮಾಜಿ ಡಾನ್ ಜೇಡರಹಳ್ಳಿ ಕೃಷ್ಣಪ್ಪ ಎಂಟ್ರಿ
ರೌಡಿಸಂಗೆ ಗುಡ್ ಬೈ ಹೇಳಿ ಈಗ ಸಮಾಜ ಸೇವೆಯಲ್ಲಿ ಸಕ್ರಿಯವಾಗಿರುವ ಎಚ್ ಕೃಷ್ಣಮೂರ್ತಿ ಅಲಿಯಾಸ್ ಜೇಡರಹಳ್ಳಿ ಕೃಷ್ಣಪ್ಪ(ಜೆಕೆ) ತಮ್ಮ ದಾದಾಗಿರಿಯ ದಿನಗಳನ್ನು ತೆರೆಗೆ ತರುತ್ತಿದ್ದಾರೆ. ಚಿತ್ರದ ಹೆಸರು 'ಜೇಡರಹಳ್ಳಿ'. ಅವರ ದಾದಾಗಿರಿ ದಿನಗಳನ್ನು ಕುರಿತ ಸತ್ಯ ಘಟನೆಗಳ ಆಧಾರಿತ ಚಿತ್ರವಿದು. ನಾಯಕ ನಟನ ಪಾತ್ರಕ್ಕೆ ದುನಿಯಾ ವಿಜಯ್ ಸೇರಿದಂತೆ ಹಲವರನ್ನು ಭೇಟಿ ಮಾಡಿ ಕಡೆಗೆ ತಾವೇ ನಾಯಕ ನಟರಾಗುತ್ತಿದ್ದಾರೆ ಜೆಕೆ.
ಇತ್ತೀಚೆಗೆ ತೆರೆಕಂಡ '5 ಈಡಿಯಟ್ಸ್' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಜೇಡರಲ್ಲಿ ಕೃಷ್ಣಪ್ಪ ಕಾಣಿಸಿದ್ದರು. ಹರ್ಷಿಕಾ ಪೂಣಚ್ಚ ತಂದೆಯಾಗಿ ಅಭಿನಯಿಸಿದ್ದ ಜೆಕೆ ದಾರಿತಪ್ಪಿದ ಹುಡುಗರನ್ನು ಸರಿದಾರಿಗೆ ತರುವ ಪಾತ್ರವನ್ನು ಪೋಷಿಸಿದ್ದರು. ಈಗ 'ಜೇಡರಳ್ಳಿ' ಚಿತ್ರ ಮಾರ್ಚ್ ತಿಂಗಳಲ್ಲಿ ಸೆಟ್ಟೇರಲಿದೆ. ಈ ಹಿಂದೆ ಉಪೇಂದ್ರ ನಿರ್ದೇಶನದ 'ಓಂ' ಚಿತ್ರದಲ್ಲಿ ಜೆಕೆ ರೌಡಿಯಾಗಿ ಕಾಣಿಸಿಕೊಂಡಿದ್ದರು.
ಗಾಂಧಿನಗರದ ಮೂಲಗಳ ಪ್ರಕಾರ, '5 ಈಡಿಯಟ್ಸ್' ಹಾಗೂ 'ಅಂಬಾರಿ' ಚಿತ್ರಗಳಿಗೆ ಕೆ ಎಂ ಕೃಷ್ಣಮೂರ್ತಿ ಎಂಬ ಹೆಸರಲ್ಲಿ ಜೆಕೆ ಫೈನಾನ್ಸ್ ಮಾಡಿದ್ದರು ಎಂಬ ಮಾತುಗಳು ಕೇಳಿಬಂದಿವೆ. ಒಟ್ಟಿನಲ್ಲಿ ಈ ಚಿತ್ರದ ಮೂಲಕ ಜೆಕೆ ಪೂರ್ಣ ಪ್ರಮಾಣದ ನಾಯಕ ನಟನಾಗಿ ಹಾಗೂ ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. 'ಗುಬ್ಬಿ' ಚಿತ್ರದ ನಿರ್ದೇಶಕ ವಿಜಯ್ ಆಕ್ಷನ್, ಕಟ್ನಲ್ಲಿ ಚಿತ್ರ ಮೂಡಿಬರಲಿದೆ.


Click it and Unblock the Notifications











