ನವಗ್ರಹಗಳ ಕೃಪೆಗಾಗಿ ಹೊನ್ನಾವರಕ್ಕೆ ಬಂದ ಸಂಜಯದತ್

ಉತ್ತರ ಕನ್ನಡ ಜಿಲ್ಲೆಯ ರಾಯಲ್ಕೇರಿಯಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಸೋಮವಾರ ಸಂಜೆ ತನಕ ಅವರು ಹೋಮ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಸಂಕಷ್ಟಗಳ ನಿವಾರಣೆಗಾಗಿ ಹೋಮ ಮಾಡಲಾಗಿದೆ. ಇಬ್ಬರು ಆಪ್ತರ ಜೊತೆ ಅವರು ಕರ್ನಾಟಕಕ್ಕೆ ಬಂದಿದ್ದಾರೆ. ಇದು ವೈಯಕ್ತಿಕ ಕಾರ್ಯವಾಗಿದ್ದು, ಯಾರಿಗೂ ಅಲ್ಲಿ ಪ್ರವೇಶ ಇರಲಿಲ್ಲ.
ಹೋಮ ಪೂರ್ಣವಾದ ಮೇಲೆ ಪುರೋಹಿತರ ಮನೆಯಲ್ಲಿಯೇ ಊಟ ಮುಗಿಸಿ, ಸಂಜಯ್ ಗೋವಾಗೆ ತೆರಳಿದರು. ಅಲ್ಲಿಂದ ಮುಂಬೈ ವಿಮಾನ ಹತ್ತಲಿದ್ದಾರೆ. ಸಂಜಯ ದತ್ ನೋಡಲು ಅಪಾರ ಅಭಿಮಾನಿಗಳು ಹೊರಗಡೆ ನೆರೆದಿದ್ದರು. 1993ರ ಮುಂಬೈ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ 6ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಅವರು ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications











