twitter
    For Quick Alerts
    ALLOW NOTIFICATIONS  
    For Daily Alerts

    ತಿರುಪತಿಗೆ ಕಾಲ್ನಡಿಗೆಯಲ್ಲಿ ಪಾಟೀಲ್ ಯಾತ್ರೆ!

    By Staff
    |

    ಕನ್ನಡ ಚಿತ್ರರಂಗದ ನಿರ್ಮಾಪಕ ಬಸಂತಕುಮಾರ್ ಪಾಟೀಲ್ ಹೊಸ ಸಾಹಕ್ಕೆ ಕೈಹಾಕಿದ್ದಾರೆ. ಗಿರೀಶ್ ಕಾಸರವಳ್ಳಿ ಅವರೊಂದಿಗೆ 'ಕನಸೆಂಬ ಕುದುರೆಯನೇರಿ' ಚಿತ್ರ ನಿರ್ಮಿಸುತ್ತಿದ್ದಾರಲ್ಲಾ. ಈಗ ಮತ್ತೊಂದು ಚಿತ್ರ ನಿರ್ಮಿಸುತ್ತಾರಾ ಹೇಗೆ ಎಂದು ಕೇಳಬೇಡಿ! ಈಗವರು ಕಾಲ್ನಡಿಗೆಯಲ್ಲಿ ತಿರುಪತಿ ತಿಮ್ಮಪ್ಪನ ಬೆಟ್ಟಕ್ಕೆ ಹೋರಟಿದ್ದಾರೆ.

    ಇದನ್ನು ಅವರು ಯಾವುದೇ ಚಿತ್ರದ ಯಶಸ್ವಿಗಾಗಿ ಮಾಡುತ್ತಿಲ್ಲ. ಅವರ ತಾಯಿ ತುಳಸಿಬಾಯಿ ಪಾಟೀಲರು ದೈವಾದೀನರಾಗಿ ಒಂದು ವರ್ಷ ಕಳೆದಿದೆ. ಮೊದಲ ವರ್ಷದ ಪುಣ್ಯ ತಿಥಿಗಾಗಿ ಬಸಂತಕುಮಾರ್ ಪಾಟೀಲ್ ಅವರು ತಿರುಪತಿಗೆ ಕಾಲ್ನಡಿಗೆ ಯಾತ್ರೆ ಮಾಡುತ್ತಿದ್ದಾರೆ.

    ದಿನವೊಂದಕ್ಕೆ 40 ಕಿ.ಮೀ ಸವೆಸಿ ಸೆಪ್ಟೆಂಬರ್ 25ಕ್ಕೆ ಅವರು ತಿರುಪತಿ ತಲುಪುತ್ತಾರೆ. ಅವರ ಕುಟುಂಬದ ಇತರೆ ಸದಸ್ಯರು ಶನಿವಾರ (ಸೆ.26)ತಿರುಪತಿ ತಿಮ್ಮಪ್ಪನ ಬೆಟ್ಟದಲ್ಲಿ ಪಾಟೀಲರನ್ನು ಬರಮಾಡಿಕೊಳ್ಳಲಿದ್ದಾರೆ. ಅಬ್ಬಾಯಿ ನಾಯ್ಡು ಅವರು ಪ್ರತಿ ವರ್ಷ ತಿರುಪತಿ ತಿಮ್ಮಪ್ಪನ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರಂತೆ.ಇರಲಿ, ತಿರುಪತಿಯಿಂದ ಪಾಟೀಲರು ಕ್ಷೇಮವಾಗಿ ಹಿಂತಿರುಗಲಿ ಎಂದು ಹಾರೈಸೋಣ.

    (ದಟ್ಸ್ ಕನ್ನಡ ಚಿತ್ರವಾರ್ತೆ)

    Friday, September 25, 2009, 14:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X