Don't Miss!
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- News ಎನ್ಕೌಂಟರ್ ಮಾಡುವುದಾಗಿ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗುಂಡ್ಲುಪೇಟೆಯಲ್ಲಿ ಚಿತ್ರ ನಿರ್ದೇಶಕ ರತ್ನಜ ವಿವಾಹ!
ಕನ್ನಡದ ಸದಭಿರುಚಿಯ ಚಿತ್ರ ನಿರ್ದೇಶಕ ರತ್ನಜ ಸದ್ದಿಲ್ಲದಂತೆ ಗುರುವಾರ(ಆ.26) ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಅವರ ವಿವಾಹವು ಗುಂಡ್ಲುಪೇಟೆಯ ಗೋಪಾಲಸ್ವಾಮಿ ಬೆಟ್ಟದಲ್ಲಿ ನೆರವೇರಿತು. ಅಕ್ಕನ ಮಗಳನ್ನು ರತ್ನಜ ವರಿಸಿದ್ದಾರೆ.
ತುಂಬ ಸರಳವಾಗಿ ನಡೆದ ವಿವಾಹ ಮಹೋತ್ಸವಕ್ಕೆ ರತ್ನಜ ಕುಟುಂಬಿಕರು ಹಾಗೂ ಬೆರಳೆಣಿಕೆಯಷ್ಟು ಮಂದಿ ಚಿತ್ರರಂಗದ ಗಣ್ಯರು ಆಗಮಿಸಿ ಶುಭ ಹಾರೈಸಿದರು. ಗುಂಡ್ಲುಪೇಟೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಇವರ ಮದುವೆ ನಡೆಯಿತು.
ಕೆಲದಿನಗಳ ಹಿಂದೆ ಚಿತ್ರನಟಿ ಅಮೂಲ್ಯ ಜೊತೆಗಿನ ಚುಂಬನ ದೃಶ್ಯಗಳು ಕನ್ನಡ ಚಿತ್ರರಂಗದಲ್ಲಿ ಭಾರಿ ಗುಲ್ಲೆಬ್ಬಿಸಿದ್ದವು. ಅಮೂಲ್ಯ ಮತ್ತು ರತ್ನಜ ಪರಸ್ಪರ ಪ್ರೇಮಿಸಿಕೊಳ್ಳುತ್ತ್ತಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈ ಸುದ್ದಿಯನ್ನು ರತ್ನಜ ಮತ್ತು ಅಮೂಲ್ಯ ಇಬ್ಬರೂ ನಿರಾಕರಿಸಿದ್ದರು.
ಅಕ್ಕನ ಮಗಳನ್ನು ಮದುವೆಯಾಗುವ ಮೂಲಕ ರತ್ನಜ ಮತ್ತು ಅಮೂಲ್ಯ ನಡುವಿನ ಗುಸುಗುಸು ಸುದ್ದಿಗಳಿಗೆ ಬ್ರೇಕ್ ಬಿದ್ದಿದೆ. ನೆನಪಿರಲಿ, ಹೊಂಗನಸು, ಪ್ರೇಮಿಸಂ ನಂತಹ ಸದಭಿರುಚಿಯ ಚಿತ್ರಗಳನ್ನು ಕೊಟ್ಟಂತಹ ನಿರ್ದೇಶಕ ರತ್ನಜ. ಅವರ ದಾಂಪತ್ಯ ಜೀವನ ಚಿರಕಾಲ ಇರಲಿ ಎಂದು ಹಾರೈಸೋಣ.