Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟೈಮ್ಸ್ ಅಭಿಯಾನದಲ್ಲಿ ಕನ್ನಡಿಗರ ಕಿರುಚಿತ್ರ
"ಇಲ್ಲೇ
ಸ್ವಲ್ಪ
ಕೆಲ್ಸ
ಇತ್ತು
....ಸರ್ಕಾರಿ
ಕಛೇರಿಗೆ
ಬಂದಿದ್ದೆ"
"ಹೋ
ಹೌದಾ!
ಸರಿ
ಸರಿ,
ನಾಳೆ
ಆಫೀಸ್ಗೆ
ಬರ್ತಿಯಾ
ತಾನೆ?"
"ಇಲ್ಲ
ಅನ್ಸುತ್ತೆ"
"ಯಾಕೆ?"
"ನಿಂಗೆ
ಗೊತ್ತಲ್ಲ,
ಸರ್ಕಾರಿ
ಕೆಲಸ
ಅಂದ್ರೆ
ಎಲ್ಲಿ
ಸಲೀಸಾಗಿ
ಆಗುತ್ತೆ,
ಎಲ್ಲಾ
ಕಡೆ
ಟೇಬಲ್
ಕೆಳಗೆ
ತಳ್ಳಬೇಕು,
ಎಲ್ಲೆಲ್ಲಿ
ತಳ್ಳಬೇಕು,
ಎಷ್ಟು
ತಳ್ಳಬೇಕು
ಅಂತ
ವಿಚಾರಿಸಬೇಕು,
ದೊಡ್ಡ
ತಲೆ
ನೋವು
ಮಾರಾಯ"
"ಸರಿ...ಸರಿ ಇನ್ನೇನು ಮಾಡೋಕೆ ಆಗುತ್ತೆ...ಸ್ವಲ್ಪ ಚೌಕಾಸಿ ಮಾಡು" ಅಂತ ಹೇಳಿಟ್ಟೆ. ಕೋಡ್ಬೇಡ ಅಂತ ಹೇಳ್ಬೇಕನಿಸಿದರೂ ಕೊಡಲಿಲ್ಲ ಅಂದ್ರೆ ಅವನ ಕೆಲಸ ಆಗ್ಬೇಕಲ್ಲ ಅಂತ ಸುಮ್ಮನಾದೆ.
"ಛೇ! ಹೇಗಾಗಿ ಬಿಟ್ಟಿದೆಯಲ್ಲ ಈಗಿನ ಪರಿಸ್ಥಿತಿ" ಅಂತ ಮನಸ್ಸಿನಲ್ಲಿ ಬೇಡ ಅಂದ್ರೂ ಬೇಸರ ನುಸುಳಿಕೊಂಡು ಬಂತು.ಇದು ಕಾರ್ಯಾಂಗದ ನಿಯತ್ತಾದರೆ, ನ್ಯಾಯ ದೊರಕಿಸಿಕೊಡಬೇಕಾದ ನ್ಯಾಯಾಂಗ ಸಹ, ನೋಟಿಗೆ ತಲೆಬಾಗಿದೆ. ದುಡ್ಡಿದ್ದೋನ ಪರ ತೀರ್ಪು ಸಾಮಾನ್ಯವಾಗಿದೆ. ಜೊತೆಗೆ ಈ ಮಾಧ್ಯಮಗಳು, ಇಲ್ಲದ್ದನ್ನು ಇದೆ ಅಂತ ಕಲ್ಪಿಸಿ, ಬೇರೆಯವರಿಗಿಂತ ಹೇಗೆ ಚಿತ್ತಾರವಾಗಿ ಬಿತ್ತರಿಸಲು ಸಾಧ್ಯವೆಂದು ಯೋಚಿಸಿ ಬಿತ್ತರಿಸುವುದರಲ್ಲಿಯೆ ಕಾಲ ಕಳೆಯುತ್ತವೆ. ಇನ್ನು ಶಾಸಕಾ೦ಗದ ಬಗ್ಗೆ ಏನೂ ಹೇಳೋದು ಅಗತ್ಯವಿಲ್ಲವೆಂದು ಕೊಂಡಿದ್ದೇನೆ, ನಿಮಗೆಲ್ಲಾ ತಿಳಿದಿದೆ.
ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಾದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಮತ್ತು ಮಾಧ್ಯಮ ರoಗಗಳು ದುಡ್ಡಿಗೋಸ್ಕರ ಅವರವರ ಸ್ವಾರ್ಥಕ್ಕೋಸ್ಕರ ದೇಶವನ್ನೇ ಕಿತ್ತು ತಿನ್ನುತ್ತಾ ಇದ್ದಾರೆ. ಏನೂ ಅರಿಯದ ಮುಗ್ಧ ಸಾಮಾನ್ಯ ಪ್ರತಿದಿನ ಬಲಿಯಾಗ್ತಾ ಇದ್ದಾನೆ. ಭಾರತ ಹಳ್ಳಿಗಳ ದೇಶ ಅನ್ನೋದು ನಿಜ, ಆದರೆ ಈ ಆಧಾರ ಸ್ತಂಭಗಳು, ಈ ಹಳ್ಳಿಗಳ ಉದ್ಧಾರಕ್ಕಾಗಿ ಶ್ರಮಿಸದೆ, ತಮಗೆ ಸಿಗೋ ಉದ್ದನೆ ಹಾರಕ್ಕಾಗಿ ಹರಿದರಿದು ಹಾರಿ ಹಾರಿ ಹಳ್ಳಿಗಳನ್ನೇ ತಿಂದು ತೇಗ್ತಾ ಇದ್ದಾರೆ. ಭ್ರಷ್ಟಾಚಾರಕ್ಕೆ ತನ್ನದೇಯಾದ ಅಸ್ತಿತ್ವವಿಲ್ಲ, ಇವರುಗಳ ಮೂಲಕ ತನ್ನ ಅಸ್ತಿತ್ವ ಪಡೆದುಕೊಂಡು ಆಕಾಶದಗಲ ಹರಡಿರುವ ಇದರ ಆದಿ-ಅಂತ್ಯದ ಕುರುಹು ಸಹ ಯಾರಿಗೂ ಸಿಗುತ್ತಿಲ್ಲ.
ಪೆಡಂಭೂತವಾಗಿ ಕಾಡುತ್ತಿರುವ ಇವರು ಮಣ್ಣಿನ ಮಕ್ಕಳ ಪರಿಶ್ರಮದ ಫಲವನ್ನು ಅನುಭವಿಸುತ್ತಾ ಇರೋದು, ಎಷ್ಟರಮಟ್ಟಿಗೆ ಸಮಂಜಸ? ಅಂತ್ಯಕ್ಕಿಂತ ಮೊದಲು ಮಾಡಿದ ಯಾವುದೇ ಪ್ರಯತ್ನವೂ ವ್ಯರ್ಥವಲ್ಲ, ಕೀಳಲ್ಲ! ಇನ್ನಾದರೂ ನಾವು ದನಿಗೂಡಿಸಿ, ಈ ವ್ಯವಸ್ಥೆಯ ವಿರುದ್ಧ ನಮ್ಮ ದನಿಯೆತ್ತ ಬೇಕಾಗಿದೆ.
ಇಂಥಾ ಒಂದು ಪ್ರಯತ್ನವೆ, ಈ "ಡೆಮಾನ್-ಕ್ರಸಿ". ಇದರೆಡೆಗೆ ನಮ್ಮ ಬೈಟೂ ಕಾಫೀ ಬಳಗದಿಂದ ಒಂದು ಕಿರು ಪ್ರಯತ್ನ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯವರು ಪ್ರಾರಂಭ ಮಾಡಿರುವ "ಭಾರತದ ಜೀವನದಲ್ಲಿ ಒಂದು ದಿನ"ದ ಶೀರ್ಷಿಕೆಯ ಅಡಿಯಲ್ಲಿ ಈ ದೃಶ್ಯಾವಳಿಯನ್ನು ಹಾಕಲಾಗಿದೆ.
ಚೆನ್ನಾಗಿದೆ ಎಂದು ಅನ್ನಿಸಿದವರು ದಯವಿಟ್ಟು ವೋಟ್ ಮಾಡಿ, ಈ ಕೂಗು ಇನ್ನೂ ಹೆಚ್ಚು ಜನರಿಗೆ ತಲುಪುವಂತಾಗಲಿ. ವೀಕ್ಷಿಸಿ ವೋಟ್ ಮಾಡಲು ಈ ಕೊಂಡಿಗೆ ಭೇಟಿಕೊಡಿ, ವೋಟ್ ಮಾಡಿ ನಮ್ಮ ಪ್ರಯತ್ನದ ಜೊತೆಗೆ ನಿಮ್ಮ ಪ್ರಯತ್ನದ ಪರಿಚಯ ಪ್ರಪಂಚಕ್ಕೆ ಆಗುವಂತಾಗಲಿ...