ಜುಲೈನಲ್ಲಿ 'ಕೆಂಚ' ಯುವ ಹೃದಯಗಳಿಗೆ ಲಗ್ಗೆ

By Staff

ರಮೇಶ್ ಯಾದವ್ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಕೆಂಚ' ಚಿತ್ರ ಜುಲೈ ಮೊದಲವಾರ ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ರಮೇಶ್ ಯಾದವ್ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರು.

ಇಲ್ಲಿಯವರೆಗೂ ಸಾಕಷ್ಟು ಚಿತ್ರಗಳನ್ನು ನಿರ್ಮಿಸಿರುವ ಇವರು 'ಶಾಂತಿ'ಎಂಬ ಗಿನ್ನಿಸ್ ದಾಖಲೆಗೆ ಭಾಜನವಾದ ಚಿತ್ರವನ್ನು ತೆರೆಗಿತ್ತವರು. ನಿರ್ಮಾಣಕ್ಕೆ ಸೀಮಿತರಾಗದ ನಿರ್ಮಾಪಕರು ತಮ್ಮ ಸಂಸ್ಥೆಯ ಹೆಸರಿನಲ್ಲಿ ಆಡಿಯೋ ಕಂಪನಿಯನ್ನು ತೆರೆದರು.'ಕೆಂಚ' ಚಿತ್ರ ಉತ್ತಮ ಪ್ರೇಮಕಥೆಯಿಂದ ಕೂಡಿದ್ದು, ಯುವ ಪ್ರೇಮಿಗಳ ಹೃದಯಕ್ಕೆ ಲಗ್ಗೆ ಹಾಕಲಿದೆ ಹಾಗೂ ಚಿತ್ರದಲ್ಲಿ ಬರುವ ಸಾಹಸ ಸನ್ನಿವೇಶಗಳು ಸಾಹಸಪ್ರಿಯರ ಮೆಚ್ಚುಗೆಗೆ ಪಾತ್ರವಾಗಲಿದೆ ಎಂಬ ಅಭಿಪ್ರಾಯ ರಮೇಶ್ ಯಾದವ್ ಅವರದು.

ಪಿ.ಎನ್.ಸತ್ಯ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ನೀಡಿದ್ದಾರೆ. ಪಿ.ಎಲ್.ರವಿ ಛಾಯಾಗ್ರಹಣ, ವರ್ಮನ್ ಸಂಕಲನ, ಮುರುಳಿ, ದೇವ ಸಂಪತ್, ಅರವಿಂದ್ ನೃತ್ಯ ನಿರ್ದೇಶನ, ಪಳನಿರಾಜ್, ಡಿಫರೆಂಟ್ ಡ್ಯಾನಿ ಸಾಹಸ, ರಂಗಸ್ವಾಮಿ ನಿರ್ಮಾಣ ನಿರ್ವಹಣೆಯಿರುವ 'ಕೆಂಚ ಚಿತ್ರದ ತಾರಾಬಳಗದಲ್ಲಿ ಪ್ರಜ್ವಲ್ ದೇವರಾಜ್, ಶ್ರೀಪ್ರಜ್ಞ, ಶರತ್ ಲೋಹಿತಾಶ್ವ, ಭವ್ಯ, ಪಿ.ಎನ್.ಸತ್ಯ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X