ಯೋಗೇಶ್ ವಿರುದ್ಧ ತಿರುಗಿ ಬಿದ್ದ ನಿರ್ಮಾಪಕರ ಸಂಘ

ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಹೇಳಿಕೆಗೆ ತಿರುಗೇಟು ನೀಡಿದ್ದ ನಟ ಲೂಸ್ ಮಾದ ಯೋಗೇಶ್ ವಿರುದ್ಧ ಈಗ ನಿರ್ಮಾಪಕರ ಸಂಘ ತಿರುಗಿ ಬಿದ್ದಿದೆ. ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಅಶೋಕ್ ಅವರಿಗೆ ನಟ ಯೋಗಿ ಚಿತ್ರಗಳಿಗೆ ಅಸಹಕಾರ ಕೋರಿ ಬರೆದಿರುವ ಪತ್ರವನ್ನು ನಿರ್ಮಾಪಕರ ಸಂಘ ಕಳಿಸಿದೆ.
ಇಂದು ಸಂಜೆ (ಮಾರ್ಚ್ 29, 2012) 4-00 ಗಂಟೆಗೆ ಸಭೆ ಸೇರಲಿರುವ ನಿರ್ಮಾಪಕರ ಸಂಘ ಯೋಗಿ ವಿರುದ್ಧ ಯಾವ ನಿರ್ಣಯ ಕೈಗೊಳ್ಳಲಿದೆ ಎಂಬ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಯೋಗಿ ಹೇಳಿಕೆಯಿಂದ ಅನ್ನದಾತರ ಸ್ಥಾನಮಾನಕ್ಕೆ ಧಕ್ಕೆಯಾಗಿದೆ ಎಂಬುದು ನಿರ್ಮಾಪಕರ ಆರೋಪ.
ಆದರೆ ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಅಶೋಕ್, ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಮುನಿರತ್ನ ಅವರು ಆಗಾಗ ಇಂತಹ ಹೇಳಿಕೆಗಳನ್ನು ಕೊಡುತ್ತಲೇ ಇರುತ್ತಾರೆ. ಚಲನಚಿತ್ರ ಕಾರ್ಮಿಕರು, ಕಲಾವಿದರುಗಳ ಗೌರವಧನ ಸುಪ್ರೀಮ್ ಕೋರ್ಟ್ ಜಡ್ಜ್ ಗಳಿಗಿಂತ ಹೆಚ್ಚು ಎಂಬ ಅವರ ಹೇಳಿಕೆಯೇ ಹಾಸ್ಯಾಸ್ಪದವಾದದ್ದು" ಎಂದಿದ್ದಾರೆ. ಮುಂದಿನ ಪುಟ ನೋಡಿ...
More from Filmibeat
English summary
Today, there is a meeting in Producers Association today (March 29 2012) on actor Loose Mada Yogesh sentence against producers association president Munirthna.


Click it and Unblock the Notifications











