ಸಿಂಗಾಪುರದಲ್ಲಿ ರಜನಿಕಾಂತ್ ಗೆ ಅತ್ಯುತ್ತಮ ಚಿಕಿತ್ಸೆ

ಈ ಹಿಂದೆ, ಭಾರತೀಯ ಚಿತ್ರರಂಗದ ಮತ್ತೊಬ್ಬ ಮೇರುನಟ ಅಮಿತಾಭ್ ಬಚ್ಚನ್ ಅವರು ಅನೇಕ ತಿಂಗಳುಗಳ ಕಾಲ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಹಿರಿಯ ರಾಜಕಾರಣಿ ಅಮರ್ ಸಿಂಗ್ ಗೆ ಬದಲಿ ಮೂತ್ರಪಿಂಡ ಜೋಡಣೆಯನ್ನು ಸಹ ಈ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಮಾಡಲಾಗಿತ್ತು.
61 ವರ್ಷದ ರಜನೀಕಾಂತ್ ತನ್ನ ಪತ್ನಿ ಮತ್ತು ಇಬ್ಬರು ಪುತ್ರಿಯರೊಂದಿಗೆ ಶನಿವಾರ ಆಸ್ಪತ್ರೆಗೆ ದಾಖಲಾದರು. ಉಸಿರಾಟ ಮತ್ತು ಉದರ ಸಂಬಂಧಿ ಸಮಸ್ಯೆಗಳಿಗಾಗಿ ಚೆನ್ನೈನ ಶ್ರೀ ರಾಮಚಂದ್ರ ವೈದ್ಯಕೀಯ ಕೇಂದ್ರದಲ್ಲಿ ಅವರು ಎರಡು ವಾರಗಳ ಚಿಕಿತ್ಸೆ ಪಡೆದು ಶುಕ್ರವಾರ ಬಿಡುಗಡೆಗೊಂಡಿದ್ದರು.
ಇದೇ ವೇಳೆ, ಆದರೆ ರಜನೀಕಾಂತ್ ಅವರ ಆರೋಗ್ಯದ ಬಗ್ಗೆ ಯಾವುದೇ ವಿವರ ನೀಡಲು ಆಸ್ಪತ್ರೆ ನಿರಾಕರಿಸಿದೆ. ರೋಗಿಗಳು ಸಂಪೂರ್ಣ ಏಕಾಂತವನ್ನು ಬಯಸಿದರೆ, ತಾನು ಅವರ ಕುರಿತು ಯಾವುದೇ ವಿವರಗಳನ್ನು ನೀಡುವುದಿಲ್ಲವೆಂದು ಅದು ತಿಳಿಸಿದೆ.
ಇದಕ್ಕೂ ಮುನ್ನ, ರಜನೀಕಾಂತ್ ಉಲ್ಲಸಿತರಾಗಿರುವರು. ಅವರ ಆರೋಗ್ಯ ಸುಧಾರಿಸುತ್ತಿದೆ. ಅವರು ಸ್ವಯಂ ಆಹಾರ ತೆಗೆದುಕೊಳ್ಳುತ್ತಿರುವರು. ಬದಲಾವಣೆಗಾಗಿ ಮತ್ತು ವಿಶ್ರಾಂತಿಗಾಗಿ ಅವರು ವಿದೇಶಿ ಯಾನ ಕೈಗೊಳ್ಳುತ್ತಿರುವರು. ಅಲ್ಲಿ ಅವರು ಕೆಲವು ತಪಾಸಣೆಗಳನ್ನು ಮಾಡಿಸಿಕೊಳ್ಳಲಿರುವರು ಎಂದು ಶ್ರೀ ರಾಮಚಂದ್ರ ವೈದ್ಯಕೀಯ ಕೇಂದ್ರ ಶುಕ್ರವಾರ ಪ್ರಕಟನೆಯಲ್ಲಿ ತಿಳಿಸಿತ್ತು.


Click it and Unblock the Notifications











