Just In
- 7 min ago
ರಚಿತಾ ರಾಮ್ ಮತ್ತೊಂದು ಸಿನಿಮಾ: 'ಲವ್ ಯೂ ರಚ್ಚು' ಎಂದ ಸ್ಟಾರ್ ನಟ
- 18 min ago
ಪ್ರಭಾಸ್ ಮದುವೆ ಯಾವಾಗ? ದೊಡ್ಡಪ್ಪ ಕೃಷ್ಣಂರಾಜು ಹೇಳಿದ್ದು ಹೀಗೆ
- 25 min ago
ಮಗುವಿಗೆ ಜನ್ಮ ನೀಡಿದ ಬಳಿಕ ಮೊದಲ ಬಾರಿಗೆ ಕ್ಯಾಮರಾ ಮುಂದೆ ಕಾಣಿಸಿಕೊಂಡ ನಟಿ ಅನುಷ್ಕಾ ಶರ್ಮಾ
- 1 hr ago
ಫೆಬ್ರವರಿ ಟು ಮೇ: ಸ್ಟಾರ್ಸ್ ಚಿತ್ರಗಳ ರಿಲೀಸ್ ದಿನಾಂಕ ಫಿಕ್ಸ್, ಡೇಟ್ ಈಗಲೇ ಲಾಕ್ ಮಾಡ್ಕೊಳ್ಳಿ!
Don't Miss!
- News
ಮಂಡ್ಯದಲ್ಲಿ ಜೆಡಿಎಸ್ ಭದ್ರವಾಗಿಸಲು ನಿಖಿಲ್ ರೈತ ತಂತ್ರ!
- Sports
ಐಪಿಎಲ್ 2021: ವಿದೇಶಿ ಆಟಗಾರರ ಲಭ್ಯತೆ ಹಾಗೂ ತಂಡಗಳಲ್ಲಿ ಉಳಿದಿರುವ ಸ್ಥಾನ
- Lifestyle
ಡಾರ್ಕ್ ಸರ್ಕಲ್ ವಿರುದ್ಧ ಉತ್ತಮವಾಗಿ ಹೋರಾಡುತ್ತೆ ಈ ಎಣ್ಣೆ...
- Finance
ರಿಲಯನ್ಸ್ ಇಂಡಸ್ಟ್ರೀಸ್- ಫ್ಯೂಚರ್ ಸಮೂಹದ ವ್ಯವಹಾರಕ್ಕೆ ಸೆಬಿ ಸಮ್ಮತಿ
- Automobiles
ಆಕ್ಸೆಸ್ 125 ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದ ಸುಜುಕಿ ಮೋಟಾರ್ಸೈಕಲ್
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಕನ್ನಡ ಹಬ್ಬ'ಕ್ಕೆ ಶಿವಣ್ಣ, ರವಿಚಂದ್ರನ್, ಶ್ರೀಮುರಳಿ ನೀಡ್ತಾರೆ ಭರ್ಜರಿ ಉಡುಗೊರೆ!
ಈ ಬಾರಿಯ 'ಕನ್ನಡ ರಾಜ್ಯೋತ್ಸವ'ಕ್ಕೆ ಎರಡೇ ದಿನ ಬಾಕಿ ಇದೆ. ಕನ್ನಡ ಹಬ್ಬಕ್ಕೆ ಕನ್ನಡಿಗರು ಸಜ್ಜಾಗುತ್ತಿದ್ದಾರೆ. ಇದರ ಜೊತೆಗೆ ಕನ್ನಡ ಸಿನಿಮಾರಂಗ ಕೂಡ 'ಕನ್ನಡ ರಾಜ್ಯೋತ್ಸವ'ದ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡುತ್ತಿದೆ.
85ನೇ ವಯಸ್ಸಿನಲ್ಲಿ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟ ನಿರ್ದೇಶಕ ಭಗವಾನ್!
ನಟ ಅನಂತ್ ನಾಗ್, ಶಿವರಾಜ್ ಕುಮಾರ್, ರವಿಚಂದ್ರನ್, ಶ್ರೀಮುರಳಿ, ದುನಿಯಾ ವಿಜಯ್ ಈ ವರ್ಷದ ರಾಜ್ಯೋತ್ಸವಕ್ಕೆ ಉಡುಗೊರೆ ನೀಡಲಿದ್ದಾರೆ. ಇದೇ ನವೆಂಬರ್ 1ಕ್ಕೆ ಕನ್ನಡದ ಎರಡು ಸಿನಿಮಾಗಳ ಲಾಂಚ್ ಹಾಗೂ ಮೂರು ಸಿನಿಮಾದ ಟ್ರೇಲರ್ ಬಿಡುಗಡೆಯಾಗಲಿದೆ. ಮುಂದೆ ಓದಿ...

'ಶಿವಣ್ಣ' ಹೊಸ ಸಿನಿಮಾ ಲಾಂಚ್
ಶಿವರಾಜ್ ಕುಮಾರ್ ಅಭಿನಯದ ಹೊಸ ಸಿನಿಮಾ ನವೆಂಬರ್ 1ಕ್ಕೆ ಲಾಂಚ್ ಆಗಲಿದೆ. ಶಿವಣ್ಣ ಸಂಬಂಧಿಯೇ ಆದ ಲಕ್ಕಿ ಗೋಪಾಲ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ಚಿತ್ರಕ್ಕೆ 'ಎಸ್.ಆರ್.ಕೆ' ಎಂಬ ಟೈಟಲ್ ಇಡಲಾಗಿದೆ.

'ಮಫ್ತಿ' ಟ್ರೇಲರ್
ಶ್ರೀಮುರಳಿ ಅಭಿನಯದ 'ಮಫ್ತಿ' ಚಿತ್ರದ ಟ್ರೇಲರ್ ಕನ್ನಡ ರಾಜ್ಯೋತ್ಸವದ ವಿಶೇಷವಾಗಿ ರಿಲೀಸ್ ಆಗಲಿದೆ. ಈ ಚಿತ್ರವನ್ನು ನರ್ತನ್ ನಿರ್ದೇಶನ ಮಾಡಿದ್ದು, ಶಿವಣ್ಣ ಚಿತ್ರದ ಒಂದು ಪಾತ್ರದಲ್ಲಿ ನಟಿಸಿದ್ದಾರೆ.
ಶಿವಣ್ಣನ ಹೊಸ ಚಿತ್ರದ ಮುಹೂರ್ತಕ್ಕೆ 'ದೊಡ್ಮನೆ' ಅತಿಥಿಗಳು.! ಯಾರದು?

'ಕನಕ' ಟ್ರೇಲರ್
ದುನಿಯಾ ವಿಜಯ್ ಅವರ 'ಕನಕ' ಚಿತ್ರದ ಟ್ರೇಲರ್ ಅನ್ನು ನವೆಂಬರ್ 1ಕ್ಕೆ ಬಿಡುಗಡೆ ಮಾಡುವ ತಯಾರಿಯನ್ನು ನಿರ್ದೇಶಕ ಆರ್.ಚಂದ್ರು ಮಾಡಿದ್ದಾರೆ.

'ಆಡುವ ಗೊಂಬೆ' ಚಿತ್ರದ ಮುಹೂರ್ತ
ಕನ್ನಡ ರಾಜ್ಯೋತ್ಸವದ ವಿಶೇಷವಾಗಿ ಅನಂತ್ ನಾಗ್ ಅವರ 'ಆಡುವ ಗೊಂಬೆ' ಚಿತ್ರದ ಮುಹೂರ್ತ ಚಿಕ್ಕಮಗಳೂರಿನಲ್ಲಿ ನಡೆಯಲಿದೆ. ಈ ಚಿತ್ರದ ಮೂಲಕ ಹಿರಿಯ ನಿರ್ದೇಶಕ ಭಗವಾನ್ 20 ವರ್ಷಗಳ ಕಮ್ ಬ್ಯಾಕ್ ಮಾಡಿದ್ದು, ತಮ್ಮ 85ನೇ ವಯಸ್ಸಿನಲ್ಲಿ ಚಿತ್ರವನ್ನು ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ.

'ಬಕಾಸುರ' ಟ್ರೇಲರ್
ಹಾಡುಗಳು ಮೂಲಕ ಸದ್ದು ಮಾಡುತ್ತಿರುವ 'ಬಕಾಸುರ' ಚಿತ್ರದ ಟ್ರೇಲರ್ ನವೆಂಬರ್ ತಿಂಗಳ ಮೊದಲ ದಿನ ಬಿಡುಗಡೆಯಾಗಲಿದೆ. 'ಕರ್ವ' ಖ್ಯಾತಿಯ ನವನೀತ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ರವಿಚಂದ್ರನ್ ಸಿನಿಮಾದಲ್ಲಿ ನಟಿಸಿದ್ದಾರೆ.