twitter
    For Quick Alerts
    ALLOW NOTIFICATIONS  
    For Daily Alerts

    ವೀರ ಸಂಗೊಳ್ಳಿರಾಯಣ್ಣನಾಗಿ ದರ್ಶನ್

    By Staff
    |

    Darshan Toogudeepa
    ಕನ್ನಡದಲ್ಲಿ ಐತಿಹಾಸಿಕ, ಪೌರಾಣಿಕ ಚಿತ್ರಗಳ ಬರವನ್ನು ನೀಗಿಸಲು ಚಿತ್ರವೊಂದು ಸದ್ಯದಲ್ಲೇ ಸೆಟ್ಟೇರಲಿದೆ. ಹ್ಯಾಟ್ರಿಕ್ ಚಿತ್ರ ನಿರ್ದೇಶಕ ಎಂದು ಖ್ಯಾತಿ ಪಡೆದಿರುವ ನಾಗಣ್ಣ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ವೀರ ಸಂಗೊಳ್ಳಿ ರಾಯಣ್ಣನಾಗಿ ತೆರೆಗೆ ತರುತ್ತಿದ್ದಾರೆ.ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನ ಜನ್ಮದಿನೋತ್ಸವವಾದ ಆಗಸ್ಟ್ 15 ರಂದು ಚಿತ್ರ ಸೆಟ್ಟೇರಲಿದ್ದು, ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರವನ್ನ್ನು ಜಯಪ್ರದಾ ನಿರ್ವಹಿಸುವ ಸಾಧ್ಯತೆಯಿದೆ.

    ಈ ಮುಂಚೆ ಇದೇ ಹೆಸರಿನ ಚಿತ್ರವನ್ನು ಮಾಡುವುದಾಗಿ ತಮಿಳ್ಗನ್ನಡ ನಟ ಅರ್ಜುನ್ ಸರ್ಜಾ ಪ್ರಕಟಿಸಿದ್ದರು. ಆದರೆ, ಕಾರಣಾಂತರದಿಂದ ಅರ್ಜುನ್ ಚಿತ್ರವನ್ನು ಕೈಬಿಟ್ಟ ಹಿನ್ನೆಲೆಯಲ್ಲಿ ಈ ಸದವಕಾಶ ದರ್ಶನ್ ಗೆ ಒಲಿದು ಬಂದಿದೆ. ಸಂಗೊಳ್ಳಿ ರಾಯಣ್ಣನ ವೀರ ಚರಿತ್ರೆ ಆಧರಿಸಿ ಚಿತ್ರಕಥೆಯನ್ನು ಕೇಶವ ಆದಿತ್ಯ ಅವರು ಬರೆದಿದ್ದಾರೆ. ಆನಂದ್ ಅಪ್ಪುಗೊಳ್ ಅವರು ನಿರ್ಮಾಣದ ಈ ಚಿತ್ರದ ವಿವರಗಳು ಸದ್ಯದಲ್ಲೇ ಸಿಗಲಿದೆ. ರಾಯಣ್ಣನ ಬಗ್ಗೆ ಮಾಹಿತಿ ಕಲೆ ಹಾಕಲು ನಿರ್ದೇಶಕ ನಾಗಣ್ಣ ಅವರ ತಂಡ ಈಗಾಗಲೇ ಬೆಳಗಾವಿಯಲ್ಲಿ ಸಂಶೋಧನೆ ಆರಂಭಿಸಿದೆಯಂತೆ!

    ಲಾಂಗ್( ಆಧುನಿಕ ಮಾದರಿಯ ಕತ್ತಿ?!) ಹಿಡಿಯುವಲ್ಲಿ ಪಿಎಚ್ ಡಿ ಮಾಡಿರುವ ದರ್ಶನ್ ಅವರಿಗೆ ಈ ಚಿತ್ರದಲ್ಲಿ ಕತ್ತಿವರಸೆ ಸಲೀಸಾಗಬಹುದು. ಪುಡಿರೌಡಿಗಳ ಕೊಚ್ಚುತ್ತಿದ್ದ ಕತ್ತಿ, ದೇಶಪ್ರೇಮಕ್ಕಾಗಿ ಝಲಪಿಸುತ್ತಿರುವುದು ಸಾರ್ಥಕತೆ ಎನ್ನಬಹುದು. ಆದರೆ, ಐತಿಹಾಸಿಕ ಪಾತ್ರಧಾರಿಗೆ ಬೇಕಾದ ಸಂಭಾಷಣಾ ಚತುರತೆ, ವೈವಿಧ್ಯತೆಯನ್ನು ದರ್ಶನ್ ಎಷ್ಟರಮಟ್ಟಿಗೆ ಅಳವಡಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕು. ದರ್ಶನ್ ಈ ಪಾತ್ರ ಮಾಡಿ ಸೈ ಎನಿಸಿದರೆ, ಐತಿಹಾಸಿಕ, ಪೌರಾಣಿಕ ಪಾತ್ರಗಳಲ್ಲಿ ಮಿಂಚಿ ಮರೆಯಾದ ತನ್ನ ತಂದೆಗೆ ನಿಜವಾದ ಕಾಣಿಕೆ ಸಲ್ಲಿಸಿದಂತೆ.

    ಶಿವರಾಜ್ ಅವರ ಕುಮಾರರಾಮ, ವಿಜಯ್ ರಾಘವೇಂದ್ರರ ಕಲ್ಲರಳಿ ಹೂವಾಗಿ' ಚಿತ್ರಗಳು ಪ್ರೇಕ್ಷಕರ ಮನಮುಟ್ಟಿದ್ದು ಅಷ್ಟರಲ್ಲೇ ಇತ್ತು.ಇದ್ದುದ್ದರಲ್ಲಿ ಹಿಂದೂ ಮುಸ್ಲಿಂ ಪ್ರೇಮಕಥೆಯುಳ್ಳ 'ಕಲ್ಲರಳಿ ಹೂವಾಗಿ' ಚಿತ್ರ ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಆದರೆ, ಎರಡು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋಲುಂಡಿದ್ದವು.

    (ದಟ್ಸ್ ಕನ್ನಡ ಸಿನಿವಾರ್ತೆ)

    Monday, November 30, 2009, 15:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X