ನ್ಯಾಷನಲ್ ಮೈದಾನದ ಸುತ್ತಮುತ್ತ ಉದ್ರಿಕ್ತ ಸ್ಥಿತಿ

ಪ್ರತಿಯಾಗಿ ಪೊಲೀಸರು 30 ಸುತ್ತು ಅಶ್ರವಾಯು ಸಿಡಿಸಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿದ್ದು, ಉದ್ರಿಕ್ತ ಗುಂಪು ಚೆದುರಿಸಲು ಲಘು ಲಾಠಿ ಪ್ರಹಾರವನ್ನು ಮಾಡಿದ್ದಾರೆ, ಡಿವಿಜಿ ರಸ್ತೆಯಲ್ಲಿರುವ ಬ್ಯಾಂಕ್ ಕಟ್ಟಡ, ಕಚೇರಿಗಳಿಗೆ ಮೇಲೆ ಅಭಿಮಾನಿಗಳ ದಾಂಧಲೆ ನಡೆಸಿದ್ದು, ಪೊಲೀಸರ ಹಾರಿಸಿದ ಗುಂಡು ಒಬ್ಬ ಅಭಿಮಾನಿಯ ತೊಡೆಗೆ ತಗುಲಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಗುವಿನ ವಾತಾವರಣ ಮುಂದುವರೆದಿದೆ. ರಾಜ್ಯದ ವಿವಿಧಡೆಯಿಂದ ಅಭಿಮಾನಿಗಳು ಹರಿದು ಬರುತ್ತಿದ್ದು, ಪೊಲೀಸರಿಗೆ ರಕ್ಷಣೆ ನೀಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಡಿವಿಜಿ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳು ಎಲ್ಲಿ ಬೇಕೆಂದರಲ್ಲಿ ಚೆಲ್ಲಾಪಿಲ್ಲಿಯಾಗಿವೆ. ನಿಯಂತ್ರಿಸಲು ಬಂದಿರುವ ಪೊಲೀಸರ ಮೇಲೆ ಕಲ್ಲುಗಳ ಸುರಿಮಳೆಯಾಗುತ್ತಿದೆ. ಕಟ್ಟಡಗಳ ಗಾಜುಗಳು ಕೂಡ ಪುಡಿಪುಡಿಯಾಗಿವೆ. ಅಂತ್ಯಯಾತ್ರೆಯನ್ನು ಬನಶಂಕರಿಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ನಡೆಸಲಾಗುವುದೆಂಬ ಸುದ್ದಿಯೂ ಅವರ ಆಕ್ರೋಶಕ್ಕೆ ಕಾರಣವಾಗಿತ್ತು.
Pay your tributes to Dr. Vishnuvardhan. Click Here.


Click it and Unblock the Notifications











