twitter
    For Quick Alerts
    ALLOW NOTIFICATIONS  
    For Daily Alerts

    ರೇಡಿಯೋದಲ್ಲಿ ಹೊಸ ಕಾರ್ಯಕ್ರಮ ಆರಂಭಿಸಿದ ಆರ್ ಜೆ ಶೃತಿ

    |

    92.7 ಬಿಗ್ ಎಫ್ ಎಂ ಬೆಂಗಳೂರು 'ಧುನ್ ಬದಲ್ ಕೆ ತೋ ದೇಖೋ ವಿದ್ ವಿದ್ಯಾ ಬಾಲನ್' ಎಂಬ ಹಿಂದಿ ಕಾರ್ಯಕ್ರಮದ ಕನ್ನಡ ಆವೃತ್ತಿಯನ್ನು ಆರ್.ಜೆ. ಶೃತಿ ಆರಂಭಿಸಲಿದ್ದಾರೆ 'ಯೋಚ್ನೆ ಯಾಕೆ ಚೇಂಜ್ ಓಕೆ' ಕಾರ್ಯಕ್ರಮದ ಬೆಂಗಳೂರಿನ ಜನಪ್ರಿಯ ಆರ್.ಜೆ.ಪಟಾಕಿ ಶೃತಿ ತನ್ನ 'ಪಟಾಕಿ ಮಾರ್ನಿಂಗ್ಸ್' ನಲ್ಲಿ ಒಂದು ಗಂಟೆ ಸಮಯವನ್ನು ಇದಕ್ಕಾಗಿ ಮೀಸಲಿಡಲಿದ್ದಾರೆ.

    ಈ ಕಾರ್ಯಕ್ರಮವು ಸಾಮಾಜಿಕ ವಿಷಯಗಳ ಬಗ್ಗೆ ಧನಾತ್ಮಕ ಸಂಭಾಷಣೆಗಳ ಮೂಲಕ ಪ್ರಚೋದನೆ ನೀಡುವ ಉದ್ದೇಶ ಹೊಂದಿದೆ. ಪ್ರಸಕ್ತ ವಿದ್ಯಮಾನಗಳ ಬಗ್ಗೆ, ಪ್ರಭಾವ ಬೀರುವ ವ್ಯಕ್ತಿತ್ವಗಳ ಕುರಿತು ಆರ್ ಜೆ ಶೃತಿ ಮಾತುಕತೆ ನಡೆಸಲಿದ್ದಾರೆ. 10 ರಿಂದ 11 ಗಂಟೆವರೆಗೆ ಪ್ರತಿ ವಾರದಲ್ಲಿ ಎರಡು ವಿಷಯಗಳಂತೆ 1 ಗಂಟೆಯ ವಿಭಾಗವಾಗಿ ಪ್ರಸಾರವಾಗುತ್ತದೆ.

    Rap ಹಾಡಿನ ಮೂಲಕ ಮತದಾನದ ಜಾಗೃತಿ ಮೂಡಿಸಿದ ಆರ್ ಜೆ ಪ್ರದೀಪ Rap ಹಾಡಿನ ಮೂಲಕ ಮತದಾನದ ಜಾಗೃತಿ ಮೂಡಿಸಿದ ಆರ್ ಜೆ ಪ್ರದೀಪ

    ಈ ಕುರಿತು ಪ್ರತಿಕ್ರಿಯಿಸಿದ ಆರ್.ಜೆ.ಶೃತಿ, 'ಯೋಚ್ನೆ ಯಾಕೆ, ಚೇಂಜ್ ಒಕೆ' ನ ಬ್ರ್ಯಾಂಡ್ ಬದಲಾವಣೆಯೊಂದಿಗೆ ಕೇಳುಗರಿಗೆ ಸಂಬಂಧಿಸಿರುವ ಯಾವುದಾದರೂ ಹೊಸ ವಿಷಯದೊಂದಿಗೆ ನಾವು ಬರುತ್ತಿದ್ದೇವೆ. ನಾವು ಈ ಕಾರ್ಯಕ್ರಮದಲ್ಲಿ ಪ್ರಸ್ತುತ ವಿಷಯಗಳನ್ನು ಮಾತ್ರವಲ್ಲದೆ ಪೋಷಕರ ಪ್ರಣಯ, ಬೆದರಿಸುವಿಕೆ, ಮತದಾನದಂತಹ ಕೆಲವು ಆಸಕ್ತಿದಾಯಕ ವಿಷಯಗಳನ್ನು ಆಯ್ಕೆ ಮಾಡಿದ್ದೇವೆ.'' ಎಂದಿದ್ದಾರೆ.

    92.7 FM launched a new show ‘Yochane Yaake, Change Ok’

    ಬಿಗ್ ಎಫ್ಎಂ ಸಿಇಒ ಅಬ್ರಹಾಂ ಥಾಮಸ್, "ಈ ಬಹು ಬೇಡಿಕೆಯ ಅವಧಿಯಲ್ಲಿ, ಜನ ನಮ್ಮಂತಹ ಮಾಧ್ಯಮ ಬ್ರ್ಯಾಂಡ್ ಗಳಿಂದ ಹೆಚ್ಚು ಹೆಚ್ಚು ನಿರೀಕ್ಷಿಸುತ್ತಿದ್ದಾರೆ. ಬ್ರಾಂಡ್ ಗಳಿಗೆ ನಿರೀಕ್ಷಿತ ಉದ್ದೇಶವನ್ನು ತರಲು ನಿರ್ಧರಿಸಿದ್ದೇವೆ. ಜನರನ್ನು ಪ್ರಭಾವಿಸುವುದು ನಮ್ಮ ಉದ್ದೇಶವಾಗಿದೆ. 'ಯೋಚ್ನೆ ಯಾಕೆ, ಚೇಂಜ್ ಓಕೆ' ಬಿಗ್ ಎಫ್ಎಂ ಉತ್ತಮ ನಾಳೆಗಾಗಿ ಜನರನ್ನು ಪ್ರೇರೇಪಿಸುವ ಪ್ರಯತ್ನವಾಗಿದೆ" ಎಂದರು.

    Read more about: fm radio ರೇಡಿಯೋ
    English summary
    92.7 FM launched a new show ‘Yochane Yaake, Change Ok’ with popular RJ Shruti,discussing socially relevant topics encompassing mental health, adoption, new age parenting among many others.
    Tuesday, April 23, 2019, 12:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X