Just In
Don't Miss!
- Education
ECIL Recruitment 2021: 19 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- News
ರಸ್ತೆ ಮೇಲೆ ಒಕ್ಕಣೆ ಮಾಡುವ ರೈತರ ಮೇಲೆ ಕ್ರಿಮಿನಲ್ ಕೇಸು!
- Sports
ಆ ಒಂದು ಕರೆ ನನ್ನಲ್ಲಿ ಆತ್ಮ ವಿಶ್ವಾಸ ತುಂಬಿತ್ತು: 5 ವಿಕೆಟ್ ಕಿತ್ತ ಸಿರಾಜ್ ಭಾವುಕ ಪ್ರತಿಕ್ರಿಯೆ
- Finance
ಕಸದ ಗುಂಡಿ ಪಾಲಾದ ರು. 1971 ಕೋಟಿಯ ಬಿಟ್ ಕಾಯಿನ್ ಗೆ ಮತ್ತೆ ಹುಡುಕಾಟ
- Automobiles
ಹೊಸ ಲೊಗೊದೊಂದಿಗೆ ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿವೆ ಕಿಯಾ ಮೋಟಾರ್ಸ್ ಕಾರುಗಳು
- Lifestyle
ಕೋವಿಡ್ 19 ಲಸಿಕೆ: ಕೋವಿಡ್ಶೀಲ್ಡ್, ಕೊವಾಕ್ಸಿನ್ ಅಡ್ಡಪರಿಣಾಮಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಟ ವಿನೋದ್ ರಾಜ್ ಬಳಿ 1 ಲಕ್ಷ ಕದ್ದಿದ್ದ ಕಳ್ಳನ ಬಂಧನ
ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ನಟ ವಿನೋದ್ ರಾಜ್ ಅವರನ್ನ ಯಾಮಾರಿಸಿ ಒಂದು ಲಕ್ಷ ಕಳ್ಳತನ ಮಾಡಿದ್ದ ಖದೀಮನನ್ನ ಕೊನೆಗೂ ನೆಲಮಂಗಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಇಂಡಸ್ ಇಂಡ್ ಬ್ಯಾಂಕ್ ಎದುರುಗಡೆ ನಟ ವಿನೋದ್ ರಾಜ್ ಅವರ ಕಾರು ಪಂಚರ್ ಮಾಡಿ, ಅಭಿಮಾನಿ ಎಂದು ಹೇಳಿಕೊಂಡು ಬಂದು ಅವರ ಗಮನವನ್ನ ಬೇರೆಡೆ ಸೆಳೆದು, ಕಾರಿನಲ್ಲಿದ್ದ ಒಂದು ಲಕ್ಷ ಎಗರಿಸಿ ಪರಾರಿಯಾಗಿದ್ದ ರಾಜು ಅಲಿಯಾಸ್ ಹೈಟೆಕ್ ರಾಜನನ್ನು ಪೊಲೀಸರು ಸೆರೆಹಿಡಿದ್ದಾರೆ.
ವಿನೋದ್ ರಾಜ್ ಬಳಿ 1 ಲಕ್ಷ ಹಣ ಕದ್ದು ಪರಾರಿಯಾದ ಕಳ್ಳರು
ಬಂಧಿತ ರಾಜು, ಐಷರಾಮಿ ಜೀವನ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಈಗ ವಿಚಾರಣೆಗೆ ಒಳಪಡಿಸಲಾಗಿದ್ದು, ಆತನನ ಗ್ಯಾಂಗ್ ನ್ನ ಪತ್ತೆ ಹಚ್ಚುತ್ತಿದ್ದಾರೆ. ನೆಲಮಂಗಲ ಸಿಪಿಐ ಅನಿಲ್ ಕುಮಾರ್ ನೇತೃತ್ವದ ತಂಡ ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದೆ.
ಅಂದು ಈ ಘಟನೆ ನಡೆದಾಗ ವಿನೋದ್ ರಾಜ್ ಜೊತೆ ರಾಮಾನುಜ ಎಂಬುವರು ಇದ್ದರು. ಕಾರು ಪಂಚರ್ ಆದಮೇಲೆ ಮತ್ತೊಬ್ಬರನ್ನ ಫೋನ್ ಮಾಡಿ ಕರೆಸಿಕೊಂಡಿದ್ದರು. ಈ ವೇಳೆ ಟೈರ್ ಬದಲಾಯಿಸಲು ಮೂವರು ವಾಹನದಿಂದ ಕೆಳಗೆ ಇಳಿದಾಗ, ಕಳ್ಳರು ಈ ಕೃತ್ಯವೆಸಗಿದ್ದರು.