'ಪ್ರಜಾಕಾರಣಿ' ಉಪೇಂದ್ರ ಬಗ್ಗೆ ಅಭಿಮಾನಿ ಬರೆದಿರುವ ಕವನ ಇದು
'ರಾಜಕೀಯ ತೊಲಗಲಿ, ಪ್ರಜಾಕೀಯ ಬರಲಿ' ಎನ್ನುತ್ತಾ 'ಪ್ರಜಾಕಾರಣ', 'ಪ್ರಜಾನೀತಿ' ಬಗ್ಗೆ ಮಾತನಾಡುತ್ತಿರುವ ಉಪೇಂದ್ರ 'ಉತ್ತಮ ಪ್ರಜಾ ಪಾರ್ಟಿ' ಸ್ಥಾಪಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹೊಸತನವನ್ನು ತಂದ ಉಪೇಂದ್ರ, ಸಮಾಜದಲ್ಲಿಯೂ ಹೊಸ ಬದಲಾವಣೆ ತರುತ್ತಾರೆ ಎಂಬ ನಂಬಿಕೆ ಹಲವರಲ್ಲಿ ಇದ್ದೇ ಇದೆ. ಇದೇ ಕಾರಣಕ್ಕೆ, ಉಪೇಂದ್ರ ರವರಿಗೆ ಸಪೋರ್ಟ್ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.
ಉಪೇಂದ್ರ ಹಾಗೂ ಪ್ರಜಾಕೀಯಕ್ಕೆ ಜೈಕಾರ ಕೂಗುತ್ತಾ, ಬ್ಯಾಡರಹಳ್ಳಿಯ ನಾಗೇಶ್ ಎಂಬುವರು 'ಪ್ರಜಾಕೀಯ'ದ ಬಗ್ಗೆ ಒಂದು ಕವನ ಬರೆದಿದ್ದಾರೆ.

ಬಂದ ಬಂದ ಉಪ್ಪಿ ಬಂದ
ಪ್ರಜಾಕೀಯ ಹೊತ್ತು ತಂದ
ಜನ ಸಾಮಾನ್ಯರನ್ನು ಅಸಮಾನ್ಯರು ಎಂದ
ಹಣವಿಲ್ಲದೇ ಸ್ವಚ್ಛ ಪ್ರಜಾಕೀಯ ಕಟ್ಟುವೆನೆಂದ
ರಾಜನು ನಾನಲ್ಲ
ರಾಜಕೀಯ ಬೇಕಿಲ್ಲ
ಜಾತಿ ಮತ ನಮಗಿಲ್ಲ
ಪ್ರಾಮಾಣಿಕವಾಗಿ ಬದುಕೋಣ ಎಲ್ಲ
ಭ್ರಷ್ಟಾಚಾರ ನಿರ್ಮೂಲನೆ ಮಾಡುವೆನೆಂದು
ನಾಡಿನ ಜನತೆಯ ಸಲಹೆ ಪಡೆಯುವೆನೆಂದು
ಸ್ವಚ್ಛತೆಯ ನಾಡಿನ ಭವಿಷ್ಯದ ಕನಸನ್ನ ಕಂಡ
ಸಮಸ್ಯೆ ಪರಿಹಾರಕ್ಕೆಂದು ರಚಿಸಿದ್ದಾನೆ ತಂಡ
ಯುವ ಪೀಳಿಗೆ ಬಡಿದೆಚ್ಚರಿಸಿದ
ಪ್ರಜಾಕೀಯದ ಭಾಮದವ್ಯ ಸೃಷ್ಟಿಸಿದ
ಪ್ರಜೆಗಳನ್ನು ಒಗ್ಗೂಡಿಸಿದ
ಜನ ಸಾಮಾನ್ಯರಿಗೆ ಅರಿವು ಮೂಡಿಸಿದ
- ನಾಗೇಶ್, ಬ್ಯಾಡರಹಳ್ಳಿ
ಈ ಕವನ ಓದಿ ಖುಷಿ ಪಟ್ಟ ಉಪೇಂದ್ರ 'ಸೂಪರ್' ಎಂದು ಟ್ವೀಟ್ ಕೂಡ ಮಾಡಿದ್ದಾರೆ.


Click it and Unblock the Notifications











