twitter
    For Quick Alerts
    ALLOW NOTIFICATIONS  
    For Daily Alerts

    'ಪ್ರಜಾಕಾರಣಿ' ಉಪೇಂದ್ರ ಬಗ್ಗೆ ಅಭಿಮಾನಿ ಬರೆದಿರುವ ಕವನ ಇದು

    By Harshitha
    |

    'ರಾಜಕೀಯ ತೊಲಗಲಿ, ಪ್ರಜಾಕೀಯ ಬರಲಿ' ಎನ್ನುತ್ತಾ 'ಪ್ರಜಾಕಾರಣ', 'ಪ್ರಜಾನೀತಿ' ಬಗ್ಗೆ ಮಾತನಾಡುತ್ತಿರುವ ಉಪೇಂದ್ರ 'ಉತ್ತಮ ಪ್ರಜಾ ಪಾರ್ಟಿ' ಸ್ಥಾಪಿಸಿದ್ದಾರೆ.

    ಕನ್ನಡ ಚಿತ್ರರಂಗದಲ್ಲಿ ಹೊಸತನವನ್ನು ತಂದ ಉಪೇಂದ್ರ, ಸಮಾಜದಲ್ಲಿಯೂ ಹೊಸ ಬದಲಾವಣೆ ತರುತ್ತಾರೆ ಎಂಬ ನಂಬಿಕೆ ಹಲವರಲ್ಲಿ ಇದ್ದೇ ಇದೆ. ಇದೇ ಕಾರಣಕ್ಕೆ, ಉಪೇಂದ್ರ ರವರಿಗೆ ಸಪೋರ್ಟ್ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

    ಉಪೇಂದ್ರ ಹಾಗೂ ಪ್ರಜಾಕೀಯಕ್ಕೆ ಜೈಕಾರ ಕೂಗುತ್ತಾ, ಬ್ಯಾಡರಹಳ್ಳಿಯ ನಾಗೇಶ್ ಎಂಬುವರು 'ಪ್ರಜಾಕೀಯ'ದ ಬಗ್ಗೆ ಒಂದು ಕವನ ಬರೆದಿದ್ದಾರೆ.

    A Poem on Prajakeeya by his Upendra's fan

    ಬಂದ ಬಂದ ಉಪ್ಪಿ ಬಂದ
    ಪ್ರಜಾಕೀಯ ಹೊತ್ತು ತಂದ
    ಜನ ಸಾಮಾನ್ಯರನ್ನು ಅಸಮಾನ್ಯರು ಎಂದ
    ಹಣವಿಲ್ಲದೇ ಸ್ವಚ್ಛ ಪ್ರಜಾಕೀಯ ಕಟ್ಟುವೆನೆಂದ

    ರಾಜನು ನಾನಲ್ಲ
    ರಾಜಕೀಯ ಬೇಕಿಲ್ಲ
    ಜಾತಿ ಮತ ನಮಗಿಲ್ಲ
    ಪ್ರಾಮಾಣಿಕವಾಗಿ ಬದುಕೋಣ ಎಲ್ಲ

    ಭ್ರಷ್ಟಾಚಾರ ನಿರ್ಮೂಲನೆ ಮಾಡುವೆನೆಂದು
    ನಾಡಿನ ಜನತೆಯ ಸಲಹೆ ಪಡೆಯುವೆನೆಂದು
    ಸ್ವಚ್ಛತೆಯ ನಾಡಿನ ಭವಿಷ್ಯದ ಕನಸನ್ನ ಕಂಡ
    ಸಮಸ್ಯೆ ಪರಿಹಾರಕ್ಕೆಂದು ರಚಿಸಿದ್ದಾನೆ ತಂಡ

    ಯುವ ಪೀಳಿಗೆ ಬಡಿದೆಚ್ಚರಿಸಿದ
    ಪ್ರಜಾಕೀಯದ ಭಾಮದವ್ಯ ಸೃಷ್ಟಿಸಿದ
    ಪ್ರಜೆಗಳನ್ನು ಒಗ್ಗೂಡಿಸಿದ
    ಜನ ಸಾಮಾನ್ಯರಿಗೆ ಅರಿವು ಮೂಡಿಸಿದ
    - ನಾಗೇಶ್, ಬ್ಯಾಡರಹಳ್ಳಿ

    ಈ ಕವನ ಓದಿ ಖುಷಿ ಪಟ್ಟ ಉಪೇಂದ್ರ 'ಸೂಪರ್' ಎಂದು ಟ್ವೀಟ್ ಕೂಡ ಮಾಡಿದ್ದಾರೆ.

    English summary
    Take a look at the Poem on 'Prajakeeya' written by Upendra's fan.
    Saturday, August 26, 2017, 13:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X