Don't Miss!
- Technology Lava: ಲಾವಾ ಪ್ರೊ ವಾಚ್ Zn ಹಾಗೂ Vn ಸ್ಮಾರ್ಟ್ವಾಚ್ ಲಾಂಚ್! ಸೀಮಿತ ಅವಧಿಯ ಕೊಡುಗೆ ಸಹ ಲಭ್ಯ..
- News Lok Sabha Election: ಕರ್ನಾಟಕದ ಈ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ನಿರ್ಣಾಯಕ
- Sports ರೋಹಿತ್ ಶರ್ಮಾ ಬಳಿಕ ಭಾರತ ತಂಡದ ನಾಯಕನಾರು?; ಅಚ್ಚರಿ ಹೆಸರು ತಿಳಿಸಿದ ಹರ್ಭಜನ್ ಸಿಂಗ್!
- Lifestyle ಚಪಾತಿ, ಅನ್ನಕ್ಕೆ ಟೊಮೆಟೋ ಬೇಳೆ ಸಾರು ಸಖತ್ ರುಚಿ..! ಮಾಡೋದು ಸುಲಭ..!
- Automobiles ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಂಡ ಹೆಂಡತಿ ಪ್ರೀತಿಯಿಂದ ಚುಚ್ಚಿಸಿಕೊಂಡ ಹಚ್ಚೆ
ಸುಖ ದಾಂಪತ್ಯಕ್ಕೆ ಹನ್ನೆರಡು ಸೂತ್ರಗಳಿರುವಂತೆ ಇನ್ನೊಂದು ಸೂತ್ರವನ್ನು ಈ ದಂಪತಿಗಳು ಕಂಡುಕೊಂಡಿದ್ದಾರೆ. ಅದೇನೆಂದರೆ ಒಬ್ಬರ ಹೆಸರನ್ನು ಇನ್ನೊಬ್ಬರ ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿರುವುದು. ಸಾಮಾನ್ಯವಾಗಿ ಮದುವೆಯಾದ ಒಂದು ವರ್ಷಕ್ಕೇ ದಂಪತಿಗಳು ಹಾವು ಮುಂಗಸಿಯಂತಾಗಿರುತ್ತಾರೆ. ಆದರೆ ಇವರಿಬ್ಬರು ಹಾಲು ಜೇನಿನಂತೆ ಅನ್ಯೋನ್ಯವಾಗಿರುದನ್ನು ಜಗತ್ತಿಗೆ ಸಾರಿದ್ದಾರೆ.
ಇಬ್ಬರೂ ನೊಗ ಹೊತ್ತರೇನೆ ಸಂಸಾರದ ಬಂಡಿ ಸರಾಗವಾಗಿ ಸಾಗುವುದು ಅಲ್ಲವೆ? ಇರಲಿ ನಾವಿಲ್ಲಿ ಮಾತನಾಡುತ್ತಿರುವುದು ತೆಲುಗು ನಟ ಅಲ್ಲು ಅರ್ಜುನ್ ಹಾಗೂ ಅವರ ಮನದನ್ನೆ ಸ್ನೇಹಾರೆಡ್ಡಿ ಬಗ್ಗೆ. ಇಬ್ಬರೂ ಒಬ್ಬರ ಹೆಸರನ್ನು ಇನ್ನೊಬ್ಬರ ಕೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.
ಅಲ್ಲೂ ಅರ್ಜುನ್ ತನ್ನ ಕೈ ಮೇಲೆ 'ಸ್ನೇಹಾ' ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ತನ್ನ ಉಂಗುರದ ಬೆರಳ ಮೇಲೆ 'ಅರ್ಜುನ್' ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ ಸ್ನೇಹಾ ರೆಡ್ಡಿ. ಈ ದಂಪತಿಗಳ ಆಲೋಚನೆ ಡಿಫರೆಂಟ್ ಆಗಿದೆ ಎಂಬ ಕಾಮೆಂಟ್ಸ್ ಕೇಳಿಬರುತ್ತಿವೆ.ಅಂದಹಾಗೆ ಇವರಿಬ್ಬರದ್ದೂ ಪ್ರೇಮ ವಿವಾಹ.
ಇವರಿಬ್ಬರೂ ಮಾರ್ಚ್ 6, 2011ರಲ್ಲಿ ಮದುವೆಯಾದರು. ಆಂಧ್ರದಲ್ಲಿ ನಡೆದ ರಾಯಲ್ ಮದುವೆಗಳ ಸಾಲಿನಲ್ಲಿ ಇವರ ಮದುವೆಯೂ ನಿಲ್ಲುತ್ತದೆ. ಸಾಮಾನ್ಯವಾಗಿ ಸಿನಿಮಾ ತಾರೆಗಳ ನಡುವೆ ಈಗ ವಿಚ್ಛೇದನ ಮಾತುಗಳೇ ಹೆಚ್ಚಾಗಿ ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ಇವರಿಬ್ಬರೂ ಗಮನಸೆಳೆದಿದ್ದಾರೆ.