Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮುರುಘಾಮಠ ಅತ್ಯಾಚಾರ ಪ್ರಕರಣ ಸಂತ್ರಸ್ಥ ಬಾಲಕಿಯರಿಗೆ ಚೇತನ್ ಅಹಿಂಸ ನೆರವು!
ಮುರುಘಾಮಠ ಅತ್ಯಾಚಾರ ಪ್ರಕರಣ ರಾಜ್ಯ ಮಾತ್ರವೇ ಅಲ್ಲದೆ ದೇಶದಾದ್ಯಂತ ಸುದ್ದಿ ಮಾಡಿತ್ತು. ಅಪ್ರಾಪ್ತ ಬಾಲಕಿಯರ ಮೇಲೆ ಸ್ವಾಮೀಜಿಗಳಿಂದ ಲೈಂಗಿಕ ದೌರ್ಜನ್ಯ ಆಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಆ ಸಂತ್ರಸ್ಥ ಬಾಲಕಿಯರಿಗೆ ನಟ ಚೇತನ್ ಅಹಿಂಸ ಮಾಡಿದ್ದ ನೆರವು ಇದೀಗ ಅವರಿಂದಲೇ ಬಹಿರಂಗವಾಗಿದೆ.
ಇಂದು (ಜನವರಿ 20) ಮೈಸೂರು ನಗರದ ಹೊರ ವಲಯದಲ್ಲಿರುವ ಒಡನಾಡಿ ಸೇವಾ ಸಂಸ್ಥೆಗೆ ನಟ ಚೇತನ್ ಭೇಟಿ ನೀಡಿ, ಅಲ್ಲಿನ ವಾಸಿಗಳೊಟ್ಟಿಗೆ, ಸಿಬ್ಬಂದಿಯೊಡನೆ, ಮಕ್ಕಳೊಡನೆ ಕಾಲ ಕಳೆದರು.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚೇತನ್ ಅಹಿಂಸ, ''ಕೇಸರಿ ತ್ಯಾಗದ ಸಂಕೇತ. ಅದು ಹಿಂದುತ್ವದ ಬಣ್ಣ ಆಗಲಾರದು ಎಂದು ಹೇಳಿದರು. ಹಸಿರು ಬಣ್ಣ ಕೂಡ ಒಂದು ವರ್ಗದ, ಒಂದು ಧರ್ಮದ ಬಣ್ಣ ಅಲ್ಲ. ಅದು ರೈತರ ಮತ್ತು ಪರಿಸರದ ಸಂಕೇತ. ಸಣ್ಣ ಸಣ್ಣದಕ್ಕೂ ತಪ್ಪು ಹುಡುಕುವುದು ಇವರ ಫ್ರೇಮ್ ವರ್ಕ್ ಆಗಿದೆ. ಇದನ್ನು ರಾಜಕೀಯಕ್ಕೆ ಬಳಸುತ್ತಿರುವುದು ಅವರ ವಿಚಾರದ ಕೊರತೆ ತೋರಿಸುತ್ತದೆ ಎಂದು ಹೇಳಿದರು.
'ಪಠಾಣ್' ಸಿನಿಮಾದಲ್ಲಿ ಕೇಸರಿ ಬಿಕಿನಿ ವಿವಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ''ಕೇಸರಿಯನ್ನು ಬುದ್ಧ, ಬಸವಣ್ಣ ಸೇರಿ ಬಹಳ ಜನ ಬಳಸಿದ್ದಾರೆ. ದೇಶದ ತ್ರಿವರ್ಣ ಧ್ವಜದಲ್ಲಿಯೂ ಕೇಸರಿ ಇದೆ. ಆದರೆ ಅದನ್ನು ಯಾರೂ ಹೈಜಾಕ್ ಮಾಡಬಾರದು,'' ಎಂದು ಹೇಳಿದರು.
ಹೆಚ್ಚು ಮಕ್ಕಳ ಮೇಲಿನ ದೌರ್ಜನ್ಯ ಗೊತ್ತಿಲ್ಲ
ಒಡನಾಡಿ ಸೇವಾ ಸಂಸ್ಥೆಗೆ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ಭೇಟಿ ನೀಡಿದ್ದರು. ಮುರುಘಾಮಠದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆಗಿರುವ ಬಗ್ಗೆ ನನಗೆ ಗೊತ್ತಿಲ್ಲ. ಮುರುಘಾ ಮಠದಲ್ಲಿ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಅವರನ್ನು ಒಡನಾಡಿ ಸಂಸ್ಥೆಗೆ ಕಳುಹಿಸಿದ್ದು ನಾನೇ. ಸಂತ್ರಸ್ತ ಮಕ್ಕಳ ಮನಸ್ಥಿತಿ ಸುಧಾರಿಸಿದೆಯಂತೆ. ಸದ್ಯ ನಾನು ಮಕ್ಕಳನ್ನು ಮಾತನಾಡಿಸಲಿಲ್ಲ. ಅವರು ಶಾಲೆಗೆ ಹೋಗಿದ್ದಾರೆ ಎಂದು ಹೇಳಿದರು.
ಚೇತನ್ ಅಹಿಂಸಾ ತಮ್ಮ ಉಗ್ರ ಎಡಪಂಥೀಯ ನಿಲುವಿನಿಂದ ಜನಪ್ರಿಯರು. ಆದಿವಾಸಿಗಳು, ಶೋಷಿತರು, ಸಂತ್ರಸ್ಥರ ಪರವಾಗಿ ಚೇತನ್ ಮೊದಲಿನಿಂದಲೂ ಮಾತನಾಡುತ್ತಲೇ ಬಂದಿದ್ದಾರೆ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷವನ್ನು ಟೀಕಿಸುತ್ತಲೇ ಬಂದಿದ್ದಾರೆ ಚೇತನ್. ಅವರ ಹೇಳಿಕೆಗಳು ಪ್ರಶಂಸೆಗೆ ಒಳಗಾಗುವ ಜೊತೆ-ಜೊತೆಗೆ ಟ್ರೋಲ್ಗೂ ಆಹಾರವಾಗುತ್ತವೆ.