Don't Miss!
- News ಅಧಿಕಾರಕ್ಕೆ ಬಂದ 2-3 ತಿಂಗಳಲ್ಲಿ ಕಾಡುಗೊಲ್ಲರಿಗೆ ನ್ಯಾಯ ದೊರಕಿಸಿ ಕೊಡುತ್ತೇವೆ-ಕುಮಾರಸ್ವಾಮಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜ್ ಕುಮಾರ್ ಬಗ್ಗೆ ಬಾಲಯ್ಯನ ಈ ಆಸೆ ಈಡೇರುತ್ತಾ?
ನಟ ಬಾಲಕೃಷ್ಣ ಇಂದು ಬೆಂಗಳೂರಿಗೆ ಬಂದಿದ್ದರು. ತಮ್ಮ ಮುಂದಿನ ಸಿನಿಮಾ 'ಎನ್ ಟಿ ಆರ್' ಚಿತ್ರದ ಪ್ರಮೋಷನ್ ಗಾಗಿ ಆಗಮಿಸಿದ್ದ ಅವರು ಅನೇಕ ವಿಚಾರಗಳ ಬಗ್ಗೆ ಮಾತನಾಡಿದರು.
ಬಾಲಕೃಷ್ಣ ಅವರು ಕರ್ನಾಟಕಕ್ಕೆ ಬಂದಾಗ ಪ್ರತಿ ಬಾರಿಯೂ ರಾಜ್ ಕುಮಾರ್ ಅವರ ಬಗ್ಗೆ ಮಾತನಾಡುತ್ತಾರೆ. ರಾಜ್ ಕುಮಾರ್ ನಮ್ಮ ಚಿಕ್ಕಪ್ಪನ ರೀತಿ ಎಂದು ಸಹ ಹೇಳಿದ್ದಾರೆ. ಎಲ್ಲದಕ್ಕೂ ಹೆಚ್ಚಾಗಿ ರಾಜ್ ಕುಟುಂಬ ಹಾಗೂ ಎನ್ ಟಿ ಆರ್ ಕುಟುಂಬ ಹಿಂದಿನಿಂದ ಒಳ್ಳೆಯ ಸ್ನೇಹ ಹೊಂದಿದೆ.
ಬೆಂಗಳೂರಿನಲ್ಲಿ ಬಾಲಯ್ಯ: ಪವರ್ ಸ್ಟಾರ್, ರಾಕಿಂಗ್ ಸ್ಟಾರ್ ಸಾಥ್
ಹೀಗಿರುವಾಗ, ರಾಜ್ ಕುಮಾರ್ ಅವರ ಬಗ್ಗೆ ಬಾಲಕೃಷ್ಣಗೆ ಒಂದು ಆಸೆ ಇದೆಯಂತೆ. ತಮ್ಮ ಮನಸ್ಸಿನ ಬಯಕೆಯನ್ನು ಅವರು ಇದೀಗ ಹಂಚಿಕೊಂಡಿದ್ದಾರೆ. ಏನದು? ಮುಂದಿದೆ ಓದಿ....
ರಾಜ್ ಕುಮಾರ್ ಬಯೋಪಿಕ್
ರಾಜ್ ಕುಮಾರ್ ಹಾಗೂ ಎನ್ ಟಿ ರಾಮರಾವ್ ದಕ್ಷಿಣ ಭಾರತದ ಮಹಾನ್ ನಟರು. ಈ ಶ್ರೇಷ್ಟ ನಟರ ಪೈಕಿ ಟಾಲಿವುಡ್ ನಲ್ಲಿ ಈಗ 'ಎನ್ ಟಿ ಆರ್' ಅವರ ಜೀವನಾಧಾರಿತ ಸಿನಿಮಾ ತಯಾರಾಗಿದೆ. ಅದೇ ರೀತಿ ಕನ್ನಡದಲ್ಲಿಯೂ ರಾಜ್ ಕುಮಾರ್ ಬಯೋಪಿಕ್ ಸಿನಿಮಾ ಬರಬೇಕು ಎನ್ನುವುದು ಬಾಲಯ್ಯರ ಆಸೆ.
ಬಯಕೆ ಹೇಳಿದ ಬಾಲಯ್ಯ
ಇಂದು ಬೆಂಗಳೂರಿನಲ್ಲಿ 'ಎನ್ ಟಿ ಆರ್' ಚಿತ್ರದ ಪತ್ರಿಕಾಗೋಷ್ಠಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಬಾಲಕೃಷ್ಣ ತಮ್ಮ ಬಯಕೆ ಹಂಚಿಕೊಂಡರು. ತಮ್ಮ ತಂದೆ 'ಎನ್ ಟಿ ಆರ್' ರೀತಿ ರಾಜ್ ಕುಮಾರ್ ಅವರ ಬಗ್ಗೆ ಕೂಡ ಸಿನಿಮಾ ಬರಬೇಕು ಎಂದು ಹೇಳಿದರು.
ಶಿವರಾಜ್ ಕುಮಾರ್ ಮನೆಗೆ ಭೇಟಿ ಕೊಟ್ಟ ತೆಲುಗು ನಟ ಬಾಲಕೃಷ್ಣ
ಪುನೀತ್ ಮಂದಹಾಸ
ಬಾಲಕೃಷ್ಣ ಮಾತನಾಡುವ ವೇಳೆ ನಟ ಪುನೀತ್ ರಾಜ್ ಕುಮಾರ್ ಕೂಡ ವೇದಿಕೆ ಇದ್ದರು. ರಾಜ್ ಬಗ್ಗೆ ಸಿನಿಮಾ ಮಾಡಿ ಎಂದು ಕೇಳಿಕೊಂಡಾದ ಪುನೀತ್ ಮಂದಹಾಸ ಬೀರಿದರು. ಜೊತೆ ಜೊತೆಗೆ ಕಾರ್ಯಕ್ರಮದಲ್ಲಿ ಅಣ್ಣಾವ್ರ ಗುಣವನ್ನು ಬಾಲಯ್ಯ ನೆನೆದರು.
ರಾಜ್ ಬಗ್ಗೆ ಸಿನಿಮಾ ಬರುತ್ತಾ?
ತೆಲುಗು ಜನರು 'ಎನ್ ಟಿ ಆರ್' ಅವರ ಸಿನಿಮಾ ನೋಡಿದ ರೀತಿ ಕನ್ನಡಿಗರು ರಾಜ್ ಕುಮಾರ್ ಅವರ ಸಿನಿಮಾ ನೋಡುವ ಬಯಕೆ ಇಟ್ಟುಕೊಂಡಿದ್ದಾರೆ. ಆದರೆ, ಆ ಆಸೆ ಯಾವಾಗ ಈಡೇರುತ್ತದೆ? ಆ ಸಿನಿಮಾ ಯಾವಾಗ ಬರುತ್ತದೆ? ಸದ್ಯಕ್ಕೆ ಉತ್ತರವಿಲ್ಲ.