twitter
    For Quick Alerts
    ALLOW NOTIFICATIONS  
    For Daily Alerts

    ಸತ್ಯ ಬಿಚ್ಚಿಡಲು ಮುಂದಾದ ದುನಿಯಾ ವಿಜಯ್

    By Rajendra
    |

    Duniya Vijay
    ನಟ ದುನಿಯಾ ವಿಜಯ್ ಮಾಧ್ಯಮಗಳ ಮುಂದೆ ಬಂದು ಸಂಪೂರ್ಣ ಸತ್ಯ ಏನು ಎಂದು ಬಿಚ್ಚಿಡುವುದಾಗಿ ಹೇಳಿದ್ದಾರೆ. ಈ ಸಂಬಂಧ ಅವರು ಗುರುವಾರ (ಜ.31) ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದಾರೆ. ಬೆಂಗಳೂರಿನ ಏಟ್ರಿಯಾ ಹೋಟೆಲ್ ನಲ್ಲಿ ಅವರು ಮಾಧ್ಯಮಗಳ ಜೊತೆ ವಸ್ತುಸ್ಥಿತಿಯನ್ನು ತಿಳಿಸುವುದಾಗಿ ಹೇಳಿದ್ದಾರೆ.

    ನನ್ನ ಜೀವನದಲ್ಲಿ ನನ್ನ ತಂದೆತಾಯಿಯೇ ಸರ್ವಸ್ವ. ಮಾಧ್ಯಮಗಳು ನನಗೆ ಮಾರ್ಗದರ್ಶಕರಿದ್ದಂತೆ. ನನ್ನ ತಂದೆತಾಯಿ ಸಮ್ಮುಖದಲ್ಲಿ ಏನಾಯಿತು ಎಂಬ ವಿವರಗಳನ್ನು ಬಹಿರಂಗಪಡಿಸುವುದಾಗಿ ವಿಜಯ್ ತಿಳಿಸಿದ್ದಾರೆ. ವಿಜಯ್ ಎಂಟರ್ ಪ್ರೈಸಸ್ ಹಾಗೂ ದುನಿಯಾ ಟಾಕೀಸ್ ಎಂದಿರುವ ಲೆಟರ್ ಹೆಡ್ ನಲ್ಲಿ ಅವರು ಮಾಧ್ಯಮಗಳಿಗೆ ಪತ್ರ ಬರೆದಿದ್ದಾರೆ.

    ಭಕ್ತಿ ( Devotion), ಶಿಸ್ತು (Discipline), ಸಂಕಲ್ಪ (Decision), ಛಲ (Determination) ಹಾಗೂ ಸಮರ್ಪಣ (Dedication) ಭಾವದ ವ್ಯಕ್ತಿತ್ವ ತನ್ನದು ಎಂದಿರುವ ವಿಜಿ, ತನ್ನ ಜೀವನದಲ್ಲಿ ಮೇಲಿನ 5Dಗಳು ಪ್ರಮುಖ ಪಾತ್ರವಹಿಸಿದ್ದಾಗಿ ಹೇಳಿಕೊಂಡಿದ್ದಾರೆ.

    ತಮ್ಮ ಪತ್ನಿ ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದ ವಿಜಿ ವಿವಾಹ ವಿಚ್ಛೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದು ಗೊತ್ತೇ ಇದೆ.

    ನನಗಾಗಿರುವ ನೋವು ಇನ್ಯಾರಿಗೂ ಆಗಬಾರದು. ನನ್ನ ತಾಯಿ ನನಗೆ ಮುಖ್ಯ. ಎರಡು ವರ್ಷಗಳ ಹಿಂದೆ ನನ್ನ ತಾಯಿ ಇನ್ನೇನು ಸಾಯುವ ಹಂತಕ್ಕೆ ಹೋಗಿದ್ದರು. ಆಗ ಈ ಸೊಸೆ ಅನ್ನಿಸಿಕೊಂಡವರು ಎಲ್ಲಿ ಹೋಗಿದ್ದರು ಎಂದು ಕೇಳಿದ್ದ ವಿಜಿ ಮಾಧ್ಯಮಗಳ ಮುಂದೆ ಇನ್ನೇನು ಹೇಳುತ್ತಾರೋ ಏನೋ? (ಏಜೆನ್ಸೀಸ್)

    English summary
    Actor Duniya Vijay organises a press meet to reveal facts about recent developments in his personal life. Viji briefing media on Thursday (31st Jan) at Atria Hotel.
    Thursday, January 31, 2013, 10:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X